Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ: ಹಂಸಲೇಖ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ: ಹಂಸಲೇಖ

Karnataka

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ: ಹಂಸಲೇಖ

Public TV
Last updated: December 26, 2021 8:11 pm
Public TV
Share
3 Min Read
HAMSALEKHA
SHARE

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನನ್ನ ದೇಸಿ ಶಾಲೆಗೆ ಸಹಾಯ ಮಾಡಿದ್ದರು. ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿ ಆಗಲಿ. ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರಸಿಯನ್ನು ಉಳಿಸಲಿ ಎಂದು ನಾದಬ್ರಹ್ಮ ಹಂಸಲೇಖ ಅಭಿಪ್ರಾಯಪಟ್ಟಿದ್ದಾರೆ.

SIDDRAMAIHA PROGRAM

ಎಸ್.ಜಿ.ಸಿದ್ದರಾಮಯ್ಯ ಆತ್ಮ ಕಥನ ‘ಯರೆಬೇವು’ ಪುಸ್ತಕ ಬಿಡುಗಡೆ ಹಾಗೂ ಡಾ.ಎಂ ಎಂ ಕಲಬುರ್ಗಿ ಪ್ರಶಸ್ತಿ ಪ್ರಧಾನ ಸಮಾರಂಭ ಗಾಂಧಿ ಭವನದಲ್ಲಿ ನಡೆಯಿತು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲ ಬಾರಿ ನಾನು ಬರೆದುಕೊಂಡು ಭಾಷಣ ಮಾಡುತ್ತೀದ್ದೇನೆ. ನುಡಿದರೆ ಮುತ್ತಿನ ಹಾರದಂತಿರಬೇಕು ಅಂತ ಮಾತಾಡ್ತೇವೆ ಆದರೆ ಒಳಗಡೆಯಿಂದ ಅದು ಸ್ಪಟಿಕದ ಸಲಾಖೆಯಂತೆ ಇರತ್ತೆ ನಮ್ಮ ಮಾತು. ಬರೆದುಕೊಳ್ಳದೆ ಆಗುವ ಅಪಾಯ ತಡೆಯಲು ಇಲ್ಲಿ ಬರೆದು ಕೊಂಡು ಬಂದು ಮಾತನಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

ಇತ್ತೀಚೆಗೆ ಒಂದು ಸಮಸ್ಯೆ ಆಗಿ ನನಗೆ ಗೊತ್ತಿಲ್ಲದ ಸಮುದಾಯಗಳೆಲ್ಲ ನನ್ನ ಜೊತೆಗೆ ನಿಂತರು. ಹೀಗೆಲ್ಲ ಆಗತ್ತೆ ಅಂತ ನನಗೆ ಗೊತ್ತಿರಲಿಲ್ಲ ಆ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ ಸಿದ್ದರಾಮಯ್ಯ, ನಾಗರಾಜ ಮೂರ್ತಿ ಯಾರಿಗೂ ಹೆದರಬೇಡಿ ಅಂತ ಬೆಂಬಲ ನೀಡಿದ್ದಾರೆ. ನಾನು ಭಯ ಪಡುವವನು ಅಲ್ಲ, ಮಾಗಡಿ ರೋಡ್‍ನಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದವನು ಅದಕ್ಕೊಂದು ಚರಿತ್ರೆಯೇ ಇದೆ. ಈಗ ನನಗೆ ಎಪ್ಪತ್ತು, ತಿನ್ನೋದು ಒಪ್ಪತ್ತು, ಎರಡು ಹೊತ್ತು ಬಸವನ ಹಸಿವು ಪ್ರೋಟೀನ್ ಕೊಡುತ್ತೆ. ದೇಸಿ ಸಮುದಾಯದ ಕರುಳಿನ ಕಥೆಯಾಗಿದೆ ಯರೆಬೇವು ಪುಸ್ತಕ. ನಮ್ಮದೂ ಕೂಡ ಅದೇ ರೀತಿಯ ಕರುಳಿನ ಕಥೆ ಎಂದು ಹಿಂದಿನ ಘಟನೆಯನ್ನು ನೆನಪಿಸಿಕೊಂಡರು.

SIDDRAMAIHA

ಸ್ವಾಗತ ಭಾಷಣದಲ್ಲಿಯೇ ಹಂಸಲೇಖ ಹೇಳಿಕೆ ವಿವಾದವನ್ನು ಸಮರ್ಥಿಸಿದ ಚಿಂತಕ ಕೆ.ವಿ.ನಾಗರಾಜ್, ಉಡುಪಿ ಮಠದಲ್ಲಿ ಅವರ ತಿಂದ ಎಂಜಲು ಮೇಲೆ ನಾವು ಉರಳು ಸೇವೆ ಮಾಡ್ತಿದ್ವಿ. ಊಟದ ಸ್ವಾತಂತ್ರದ ಬಗ್ಗೆ ಹಂಸಲೇಖ ಧ್ವನಿ ಎತ್ತಿದ್ದಕ್ಕೆ ವೈದಿಕ ಶಾಹಿಗಳು ಅವರ ಮೇಲೆ ಎಗರಿಬಿದ್ದರು. ನೀವು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ನಿಮ್ಮ ಜೊತೆ ಇದ್ದೇವೆ. ಕವಿ ಮರಳುಸಿದ್ದಪ್ಪಗೆ ಹಲವು ಬಾರಿ ಈ ವೈದಿಕ ಶಾಹಿ, ಬ್ರಾಹ್ಮಣ ಶಾಹಿ ಇಂದ ಬೆದರಿಕೆ ಕರೆ ಬಂದಿತ್ತು. ಸಾಯಿಸ್ತೀವಿ, ಕೊಂದಹಾಕ್ತೀವಿ ಎಂದು ಬೆದರಿಕೆ ಹಾಕ್ತಿದ್ರು ಇದ್ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ ತಪ್ಪಾಗಿದೆ: ಹಂಸಲೇಖ

ಸಿದ್ದರಾಮಯ್ಯ ಮಾತನಾಡಿ, ಸಮಾಜದಲ್ಲಿ ಶಿಕ್ಷಣದ ಜೊತೆಗೆ ವೈಚಾರಿಕತೆ ಬೆಳೆಯಬೇಕು. ಪ್ರತಿಯೊಂದನ್ನು ಪ್ರಶ್ನೆ ಮತ್ತು ವಿಶ್ಲೇಷಣೆ ಮಾಡಬೇಕು. ಆಗ ಮಾತ್ರ ಜಡ್ಡುಗಟ್ಟಿರುವ ಸಮಾಜದಲ್ಲಿ ಉತ್ತಮ ಪ್ರಜೆಗಳು ಆಗುವುದಕ್ಕೆ ಸಾಧ್ಯವಾಗುತ್ತೆ. ಶಿಕ್ಷಣ 16% ರಿಂದ 78% ಬಂದು ನಿಂತಿದೆ. ಆದ್ರೆ ಅನಿಷ್ಟ ಪದ್ದತಿಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಗಾಂಧಿ ಮತ್ತು ಬಸವಣ್ಣ, ಬುದ್ದನ ತತ್ವ ಪಾಲನೆ ಮಾಡುವಲ್ಲಿ ವಿಫಲವಾಗಿದ್ದೇವೆ. ನೇರವಾಗಿ ನಿಷ್ಠುರವಾಗಿ ಸತ್ಯ ಹೇಳುವುದೇ ಕಷ್ಟವಾಗಿದೆ. ಇಂದು ಅಭಿವ್ಯಕ್ತಿ ಸ್ವಾತಂತ್ರ ಬಹಳ ಕಷ್ಟದಲ್ಲಿದೆ. ವಕ್ರ ಕಣ್ಣಿನಿಂದ ನೋಡುವವರು ಪ್ರಶ್ನೆ ಮಾಡೋರನ್ನು ಭಯೋತ್ಪಾದಕರು ಎಂದು ಬಿಂಬಿಸುತ್ತಾರೆ ಇದನ್ನು ವಿಚಾರವಂತವರು ಖಂಡಿಸಬೇಕು ಎಂದರು.

SIDDRAMAIHA 6

ಎಂ.ಎಂ ಕಲ್ಬುರ್ಗಿಯವರು ಏನು ತಪ್ಪು ಮಾಡಿದ್ರು. ಸತ್ಯ ಹೇಳುವ ಪ್ರಯತ್ನ ಮಾಡಿದ್ರು ಕೋಮುವಾದಿ ಭಾವನೆ ಇರೋರು ಕಲ್ಬುರ್ಗಿಯವರನ್ನು ಕೊಂದರು. ಗಾಂಧಿಜೀಯವರನ್ನು ಸಹ ಕೊಂದರು. ಇಂತಹ ಘಟನೆ ಖಂಡಿಸಬೇಕು. ಆ ನಿಟ್ಟಿನಲ್ಲಿ ನಾವು ಯೋಚನೆ ಮಾಡಬೇಕು. ಸತ್ಯ ಹೇಳುವುದಕ್ಕೆ ಹೆದರಿಕೊಳ್ಳುವ ಅಗತ್ಯ ಇಲ್ಲ ಹಂಸಲೇಖ ಏನು ಮಾಹ ಅಪರಾಧ ಮಾಡಿದ್ರಾ. ಒಂದು ಹೇಳಿಕೆ ಕೊಟ್ರು. ಅದಕ್ಕೆ ಎಲ್ಲರೂ ತಿರುಗಿಬಿದ್ರು. ಕ್ರಿಮಿನಲ್ ಕೇಸು ದಾಖಲಿಸಿದರು. ಐಪಿಸಿ ಸೆಕ್ಷನ್ 295 ಹೇಳೋದಕ್ಕೂ ಇವರ ಮಾತಿಗೂ ಸಂಬಂಧವೇ ಇಲ್ಲ ಎಂದು ಸಮರ್ಥಿಸಿಕೊಂಡರು.  ಇದನ್ನೂ ಓದಿ: ಅಂಕಲ್ ಅಂದಿದ್ದೆ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

ಮತಾಂತರ ವಿರೋಧ ಮಾಡಿದ್ರೆ ಧರ್ಮ ವಿರೋಧಿ ಎಂದು ಹೇಳ್ತಾರೆ. ಹೊಸ ಮತಾಂತರ ನಿಷೇಧ ಕಾಯಿದೆ ಅವಶ್ಯಕತೆ ಇಲ್ಲ. ಸಂವಿಧಾನದಲ್ಲಿ ಈಗಾಗಲೇ ಬಲವಂತದ ಮತಾಂತರಕ್ಕೆ ನಿಷೇಧ ಇದೆ. ಬಲವಂತದ ಮತಾಂತರವನ್ನು ನಾನೂ ವಿರೋಧಿಸುತ್ತೇನೆ. ಹೊಸ ಕಾನೂನು ಅವಶ್ಯಕತೆ ಇಲ್ಲ. ಸದನದಲ್ಲಿ ನಾನು ಇದನ್ನು ಹೇಳಿದ್ದೆ. ಬಲವಂತದ ಮತಾಂತರವನ್ನು ಬಲವಾಗಿ ಖಂಡಿಸುತ್ತೇನೆ. ಆದ್ರೆ ನಾವು ಈಗ ತಂದಿರುವ ಕಾನೂನು ವಿರೋಧ ಮಾಡಿದ್ರೆ ಧರ್ಮ ವಿರೋಧಿ ಎಂದು ಹೇಳುತ್ತಾರೆ ಎಂದು ಸರ್ಕಾರ ತಂದಿರುವ ಹೊಸ ಕಾಯಿದೆಗೆ ಮತ್ತೆ ವಿರೋಧ ವ್ಯಕ್ತಪಡಿಸಿದರು.

TAGGED:ಎಸ್ ಜಿ ಸಿದ್ದರಾಮಯ್ಯಮತಾಂತರಸಿದ್ದರಾಮಯ್ಯಹಂಸಲೇಖ
Share This Article
Facebook Whatsapp Whatsapp Telegram

Cinema news

darshan wife vijayalakshmi dinakar tugudeepa
ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಭೇಟಿ
Cinema Latest Sandalwood Top Stories
Kichcha Sudeep Mark
ತ್ರಿಶೂಲ ಹಿಡಿದು ಬಂದ ನಟ ಕಿಚ್ಚ ಸುದೀಪ್
Cinema Latest Sandalwood Top Stories
45 Movie
ಕರುನಾಡಲ್ಲಿ `45’ ಸಿನಿಮಾ ಅಬ್ಬರ: ಅಡ್ವಾನ್ಸ್‌ ಬುಕ್ಕಿಂಗ್ ಭರ್ಜರಿ ಜೋರು
Cinema Latest Sandalwood Top Stories
Vijay Deverakondas next titled Rowdy Janardhana
ವಿಜಯ್‌ ದೇವರಕೊಂಡ ನಟನೆಯ ರೌಡಿ ಜನಾರ್ದನ ಟೈಟಲ್ ಗ್ಲಿಂಪ್ಸ್ ರಿಲೀಸ್
Cinema Latest South cinema

You Might Also Like

kali tiger reserve dog squad
Latest

ಕಾಳಿ ಹುಲಿ ರಕ್ಷಿತಾರಣ್ಯಕ್ಕೆ ಶ್ವಾನ ದಳದ ಬಲ; ಅಪರಾಧ ಕೃತ್ಯ ಪತ್ತೆಗೆ ಅವನಿ, ತಾರ ಕಣ್ಗಾವಲು

Public TV
By Public TV
1 hour ago
Maulana Fazlur Rehman
Latest

ಪಾಕ್‌ ಗಡಿಯಾಚೆಗಿನ ತನ್ನ ದಾಳಿ ಸಮರ್ಥಿಸಿಕೊಂಡ್ರೆ, ಭಯೋತ್ಪಾದನೆ ವಿರುದ್ಧ ಭಾರತದ ಕ್ರಮ ತಪ್ಪಲ್ಲ: ಪಾಕಿಸ್ತಾನ ಶಾಸಕ

Public TV
By Public TV
1 hour ago
BMTC KSRTC
Bengaluru City

ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಋತುಚಕ್ರ ರಜೆ ಮಂಜೂರು

Public TV
By Public TV
2 hours ago
Siddaramaiah 5
Bengaluru City

ಮುಡಾ ಸೈಟ್ ಅಕ್ರಮ ಕೇಸ್ – ಜ.5ಕ್ಕೆ ವಿಚಾರಣೆ ಮುಂದೂಡಿಕೆ

Public TV
By Public TV
3 hours ago
Hubballi Daughter Honor Killing Accused Arrest
Dharwad

ತಂದೆಯಿಂದಲೇ ಗರ್ಭಿಣಿ ಮಗಳ ಮರ್ಯಾದಾ ಹತ್ಯೆ – ಬಂಧಿತರ ಸಂಖ್ಯೆ 6ಕ್ಕೆ ಏರಿಕೆ

Public TV
By Public TV
3 hours ago
bengaluru shoot out
Bengaluru City

ಬೆಂಗಳೂರು| ಪತ್ನಿ ಜೊತೆ ಜಗಳ; ಗನ್‌ ತೆಗೆದು ಶೂಟೌಟ್‌ ಮಾಡಿದ ಪತಿ – ಮಹಿಳೆ ಸಾವು

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?