ಬೆಂಗಳೂರು: ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಅಭಿನಯಿಸುತ್ತೇನೆ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.
‘ನೀನೆ ರಾಜಾ ನೀನೆ ಮಂತ್ರಿ’ ತೆಲುಗು ಚಿತ್ರದ ಪ್ರಚಾರಕ್ಕಾಗಿ ಇಂದು ರಾಣಾ ದಗ್ಗುಬಾಟಿ ಬೆಂಗಳೂರಿಗೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಕನ್ನಡದ ಸಿನಿಮಾವೊಂದರಲ್ಲಿ ನಟಿಸುವ ಸಂಬಂಧವಾಗಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ದಗ್ಗುಬಾಟಿ ಬಾಯಿಯಿಂದ ಈ ವಿಚಾರ ಹೊರಬೀಳುತ್ತಿದ್ದಂತೆ ಪತ್ರಕರ್ತರು, ಕುರುಕ್ಷೇತ್ರ ಸಿನಿಮಾ ತಯಾರಾಗುತ್ತಿದ್ದು, ಇದರಲ್ಲಿ ನಟಿಸಲು ನಿಮಗೆ ಆಹ್ವಾನ ಬಂದಿದ್ಯಾ ಎನ್ನುವ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆಗೆ, ಕುರುಕ್ಷೇತ್ರ ಚಿತ್ರದ ಬಗ್ಗೆ ಕೇಳಿದ್ದೇನೆ. ನಟಿಸಲು ಆಹ್ವಾನ ಬಂದಿಲ್ಲ. ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ ಎಂದು ರಾಣಾ ಉತ್ತರಿಸಿದರು.
ಕಾಜಲ್ ಅಗರ್ವಾಲ್, ಕ್ಯಾಥರೀನ್ ತೆರೆಸ ನಟಿಸಿರುವ ನೀನೆ ರಾಜಾ ನೀನೆ ಮಂತ್ರಿ ಆಗಸ್ಟ್ 11ರಂದು ಬಿಡುಗಡೆಯಾಗುತ್ತಿದೆ.
ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನ ಪಾತ್ರವನ್ನು ದರ್ಶನ್ ಮಾಡುತ್ತಿದ್ದಾರೆ. ಭೀಮನ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.
ಇದನ್ನೂ ಓದಿ:ಈ 1 ಕಾರಣಕ್ಕಾಗಿ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ನಟಿಸುತ್ತಿಲ್ಲ `ಶಿವಣ್ಣ-ಅಪ್ಪು-ಕಿಚ್ಚ’
ಇದನ್ನೂ ಓದಿ:ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ