Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಶ್ಮೀರದಿಂದ ಕರಬಖ್‌ವರೆಗೆ; ಟರ್ಕಿ & ಅಜೆರ್ಬೈಜಾನ್ ಯಾವಾಗಲೂ ಭಾರತದ ವಿರುದ್ಧ ನಿಲ್ಲೋದ್ಯಾಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕಾಶ್ಮೀರದಿಂದ ಕರಬಖ್‌ವರೆಗೆ; ಟರ್ಕಿ & ಅಜೆರ್ಬೈಜಾನ್ ಯಾವಾಗಲೂ ಭಾರತದ ವಿರುದ್ಧ ನಿಲ್ಲೋದ್ಯಾಕೆ?

Latest

ಕಾಶ್ಮೀರದಿಂದ ಕರಬಖ್‌ವರೆಗೆ; ಟರ್ಕಿ & ಅಜೆರ್ಬೈಜಾನ್ ಯಾವಾಗಲೂ ಭಾರತದ ವಿರುದ್ಧ ನಿಲ್ಲೋದ್ಯಾಕೆ?

Public TV
Last updated: November 22, 2025 5:33 pm
Public TV
Share
6 Min Read
india pakistan turkey
SHARE

– ಪಾಕಿಸ್ತಾನಕ್ಕೆ ಮಿತ್ರ, ಭಾರತಕ್ಕೆ ಶತ್ರು ಆದ ದೇಶಗಳು

ಇತ್ತೀಚಿನ ತಿಂಗಳುಗಳಲ್ಲಿ ಭಾರತ ಒಂದೆಡೆ ಮತ್ತು ಟರ್ಕಿ (Turkey) ಹಾಗೂ ಅಜರ್ಬೈಜಾನ್ (Azerbaijan) ಮತ್ತೊಂದೆಡೆ ಎನ್ನುವಂತಾಗಿದೆ. ಈ ದೇಶಗಳ ನಡುವೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಭುಗಿಲೆದ್ದಿವೆ. ಪಾಕಿಸ್ತಾನ ಜೊತೆಗಿನ ಮೈತ್ರಿ, ಪ್ರಾದೇಶಿಕ ಮಹತ್ವಾಕಾಂಕ್ಷೆಗಳು ಮತ್ತು ಇತ್ತೀಚಿನ ಭೌಗೋಳಿಕ ರಾಜಕೀಯದಿಂದಾಗಿ ವೈರತ್ವವು ಉಲ್ಬಣಗೊಂಡಿದೆ. ಭಾರತದೊಂದಿಗಿನ ಆರ್ಥಿಕ ಸಂಬಂಧಗಳು ಮಹತ್ವದ್ದಾಗಿದ್ದರೂ, ಟರ್ಕಿ ಮತ್ತು ಅಜರ್ಬೈಜಾನ್ ಎರಡೂ ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಭಾರತದ ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನಕ್ಕೆ ಟರ್ಕಿಯ ಬೆಂಬಲ ಹೆಚ್ಚಾಗಿದೆ. ಪಹಲ್ಗಾಮ್ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ, ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಭಾರತ ನಡೆಸಿದ ದಾಳಿಯನ್ನು ಅಂಕಾರಾ ಖಂಡಿಸಿತ್ತು. ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದರು. ಹೀಗೆ, ನಿರಂತರವಾಗಿ ಇವೆರಡು ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿವೆ. ಆ ಮೂಲಕ ಭಾರತದ ವಿರುದ್ಧ ತಿರುಗಿ ಬಿದ್ದಿವೆ.

ಟರ್ಕಿ-ಪಾಕಿಸ್ತಾನ ‘ಇಸ್ಲಾಮಿಕ್ ಬಾಂಧವ್ಯ’
ಟರ್ಕಿ ಪಾಕಿಸ್ತಾನದೊಂದಿಗೆ (Pakistan) ಐತಿಹಾಸಿಕ ಮತ್ತು ಸೈದ್ಧಾಂತಿಕ ಬಾಂಧವ್ಯವನ್ನು ಹೊಂದಿದೆ. ಕಾಶ್ಮೀರ ವಿಷಯದಲ್ಲಿ ಟರ್ಕಿ ನಿರಂತರವಾಗಿ ಪಾಕ್ ಅನ್ನು ಬೆಂಬಲಿಸುತ್ತಿದೆ. ಇಸ್ಲಾಮಿಕ್ ಏಕತೆಯನ್ನು ಪ್ರತಿಧ್ವನಿಸುತ್ತಿದೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಧ್ವನಿ ಪ್ರತಿಪಾದಕನಾಗಿ ತನ್ನನ್ನು ತಾನು ಇರಿಸಿಕೊಂಡಿದೆ. ಈ ಸೈದ್ಧಾಂತಿಕ ಬಾಂಧವ್ಯವು ಬಲವಾದ ಮಿಲಿಟರಿ ಸಹಕಾರಕ್ಕೆ ದಾರಿ ಮಾಡಿಕೊಟ್ಟಿದೆ. ಟರ್ಕಿ ಪಾಕಿಸ್ತಾನಕ್ಕೆ ಅಸಿಸ್‌ಗಾರ್ಡ್ ಮತ್ತು ಸೊಂಗರ್ ಮಾಡೆಲ್‌ಗಳನ್ನು ಒಳಗೊಂಡಂತೆ ಡ್ರೋನ್‌ಗಳನ್ನು ಪೂರೈಸುತ್ತಿದೆ. ಮೇ 8-9 ರಂದು ಗಡಿಯಾಚೆಗಿನ ಒಳನುಸುಳುವಿಕೆ ಮತ್ತು ಮಿಲಿಟರಿ ಸ್ಥಾಪನೆಗಳ ಮೇಲಿನ ದಾಳಿಗಳಲ್ಲಿ ಪಾಕಿಸ್ತಾನವು 300 ರಿಂದ 400 ಟರ್ಕಿಶ್ ನಿರ್ಮಿತ ಡ್ರೋನ್‌ಗಳನ್ನು ಬಳಸಿದೆ ಎಂದು ಭಾರತ ಹೇಳಿಕೊಂಡಿದೆ. ಇದಲ್ಲದೆ, ಭಾರತೀಯ ಪಡೆಗಳು ಜಮ್ಮು ಮತ್ತು ಕಾಶ್ಮೀರದ ನೌಶೇರಾದಿಂದ ಟರ್ಕಿಶ್ ಕಾಮಿಕೇಜ್ ಡ್ರೋನ್ ಅನ್ನು ವಶಪಡಿಸಿಕೊಂಡವು. ಇದು ಮುಂಚೂಣಿಯ ಯುದ್ಧಗಳಲ್ಲಿ ವಿದೇಶಿ ನಿರ್ಮಿತ ಯುದ್ಧ ಉಪಕರಣಗಳನ್ನು ಬಳಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಿತು. ಇದನ್ನೂ ಓದಿ: Explainer | 24 ವರ್ಷಗಳ ಇತಿಹಾಸದಲ್ಲಿ 2ನೇ ದುರಂತ – ಒಂದು ʻತೇಜಸ್‌ʼಗೆ ತಗುಲುವ ವೆಚ್ಚ ಎಷ್ಟು?

ಭಾರತದ ಪ್ರಭಾವಕ್ಕೆ ಟಕ್ಕರ್?
ಟರ್ಕಿ-ಪಾಕಿಸ್ತಾನ ಸಂಬಂಧ ಕೇವಲ ಸ್ನೇಹದ ಉದ್ದೇಶದಿಂದ ಕೂಡಿಲ್ಲ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಭಾವವನ್ನು ಎದುರಿಸುವ ಕಾರ್ಯತಂತ್ರದ ಬಣ ಇದಾಗಿದೆ. ಪಾಕಿಸ್ತಾನ ಮತ್ತು ಟರ್ಕಿ ಭಾರತವನ್ನು ರಾಜತಾಂತ್ರಿಕವಾಗಿ ಅಥವಾ ಮಿಲಿಟರಿಯಾಗಿ ಸಂಘರ್ಷಕ್ಕೆ ಆಹ್ವಾನಿಸಿದಾಗ, ಉಭಯ ದೇಶಗಳು ಒಟ್ಟಿಗೆ ನಿಲ್ಲುತ್ತವೆ.

Turkey Azerbaijan Pakistan

ಟರ್ಕಿಗೆ ಮಿತ್ರ, ಭಾರತಕ್ಕೆ ವೈರಿ
ಅಜೆರ್ಬೈಜಾನ್ ಕೂಡ ಭಾರತದ ಮಿಲಿಟರಿ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಪರವಾಗಿ ನಿಂತಿದೆ. ಅನೇಕ ಬಾರಿ ಭಾರತದ ಕ್ರಮಗಳಿಗೆ ವಿರುದ್ಧವಾಗಿಯೇ ಅಜೆರ್ಬೈಜಾನ್ ನಡೆದುಕೊಂಡಿದೆ. ಈ ರಾಜತಾಂತ್ರಿಕತೆಯ ಹಿಂದೆ ಬಲವಾದ ಕಾರ್ಯತಂತ್ರದ ಮೈತ್ರಿ ಇದೆ. ಟರ್ಕಿ ಮತ್ತು ಅಜೆರ್ಬೈಜಾನ್ 2021 ರ ಶುಷಾ ಘೋಷಣೆಯ ಮೂಲಕ ನಿಕಟ ರಕ್ಷಣಾ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಔಪಚಾರಿಕಗೊಳಿಸಿವೆ. ಜಂಟಿ ಶಸ್ತ್ರಾಸ್ತ್ರ ಉತ್ಪಾದನೆ, ಮಿಲಿಟರಿ ತರಬೇತಿ ಮತ್ತು ಅಜೆರ್ಬೈಜಾನ್ ಅನ್ನು ಪ್ರಾದೇಶಿಕ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. ವಿಶೇಷವಾಗಿ ಮಧ್ಯ ಏಷ್ಯಾ, ಅಜರ್ಬೈಜಾನ್ ಮತ್ತು ಟರ್ಕಿಯನ್ನು ಸಂಪರ್ಕಿಸುವ ‘ಮಧ್ಯಮ ಕಾರಿಡಾರ್’ ದೀರ್ಘಕಾಲೀನ ಭೌಗೋಳಿಕ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುತ್ತದೆ.

ಭಾರತದ ವಿರುದ್ಧ ಅಜರ್ಬೈಜಾನ್ ತಿರುಗಿ ಬಿದ್ದಿದ್ಯಾಕೆ?
ಭೌಗೋಳಿಕ ರಾಜಕೀಯ ಕಾರಣಕ್ಕೆ ಭಾರತದ ವಿರುದ್ಧ ಅಜರ್ಬೈಜಾನ್ ತಿರುಗಿ ಬಿದ್ದಿದೆ. ಉಭಯ ದೇಶಗಳ ಸಂಘರ್ಷಕ್ಕೆ ಮೂಲ ಕಾರಣ ಅರ್ಮೇನಿಯಾ. ಭಾರತವು ಅರ್ಮೇನಿಯಾದೊಂದಿಗೆ ರಕ್ಷಣಾ ಸಂಬಂಧಗಳನ್ನು ಬೆಳೆಸಿಕೊಂಡಿದೆ. ಕ್ಷಿಪಣಿಯಂತಹ ಶಸ್ತ್ರಾಸ್ತ್ರಗಳನ್ನು ಭಾರತ ಪೂರೈಸುತ್ತಿದೆ. ನಾಗೋರ್ನೊ-ಕರಾಬಖ್‌ಗಾಗಿ ಅಜರ್ಬೈಜಾನ್‌ನೊಂದಿಗೆ ಅರ್ಮೇನಿಯಾ ಪ್ರಾದೇಶಿಕ ಸಂಘರ್ಷ ನಡೆಸುತ್ತಿದೆ. ಹೀಗಿರುವಾಗ ಅರ್ಮೇನಿಯಾದೊಂದಿಗೆ ಭಾರತದ ಸ್ನೇಹ ಸಂಬಂಧವು ಅಜರ್ಬೈಜಾನ್ ಕೆರಳುವಂತೆ ಮಾಡಿದೆ. ಇದನ್ನೂ ಓದಿ: ಭಾರತಕ್ಕೆ 46 ಮಿಲಿಯನ್ ಡಾಲರ್‌ಗೆ ಜಾವೆಲಿನ್ ಮಿಸೈಲ್ ಸಿಸ್ಟಮ್‌ ಮಾರಾಟಕ್ಕೆ ಅಮೆರಿಕ ಅನುಮೋದನೆ

ತ್ರಿ-ಸಹೋದರ ಒಕ್ಕೂಟ
ಟರ್ಕಿ, ಅಜರ್ಬೈಜಾನ್ ಮತ್ತು ಪಾಕಿಸ್ತಾನ ಈಗ ತ್ರಿಪಕ್ಷೀಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ. ಮೂವರು ಸಹೋದರರಂತೆ ಒಗ್ಗಟ್ಟಾಗಿದ್ದಾರೆ. ಜಂಟಿ ಮಿಲಿಟರಿ ಕಾರ್ಯಾಚರಣೆ ಕೂಡ ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪರಸ್ಪರರು ಬೆಂಬಲಕ್ಕೆ ನಿಲ್ಲುತ್ತಾರೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಪರವಾಗಿ ಟರ್ಕಿ ಮತ್ತು ಅಜರ್ಬೈಜಾನ್ ಮಾತನಾಡುತ್ತಿವೆ. ಪರಸ್ಪರ ಪ್ರಾದೇಶಿಕ ಅಥವಾ ಸೈದ್ಧಾಂತಿಕವಾಗಿ ಬೆಂಬಲಿಸುತ್ತಾರೆ. ಈ ಮೈತ್ರಿಕೂಟವು ಸಾಂಕೇತಿಕ ಮಾತ್ರವಲ್ಲದೆ ಭಾರತದ ಕಾರ್ಯತಂತ್ರದ ಆಯ್ಕೆಗಳನ್ನು ನೇರವಾಗಿ ಪ್ರಶ್ನಿಸುತ್ತದೆ.

ಎಫೆಕ್ಟ್ ಏನು?
ರಾಜತಾಂತ್ರಿಕ ಬಿಕ್ಕಟ್ಟಿಗೆ ಭಾರತೀಯರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಭಾರತೀಯ ಪ್ರಯಾಣಿಕರು ಟರ್ಕಿ ಮತ್ತು ಅಜರ್ಬೈಜಾನ್‌ಗೆ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ. ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನಕ್ಕೆ ಈ ದೇಶ ಬೆಂಬಲ ವ್ಯಕ್ತಪಡಿಸಿತು. ಇದನ್ನು ಖಂಡಿಸಿ ಬಹಿಷ್ಕಾರದ ಕರೆಗಳು ಹೆಚ್ಚುತ್ತಿವೆ. ವ್ಯಾಪಾರ ರಂಗದಲ್ಲಿ ಭಾರತವು ಟರ್ಕಿಯ ನೆಲ-ನಿರ್ವಹಣಾ ಸಂಸ್ಥೆ ಸೆಲೆಬಿ ವಿಮಾನ ನಿಲ್ದಾಣ ಸೇವೆಗಳ ಭದ್ರತಾ ಅನುಮತಿಯನ್ನು ರದ್ದುಗೊಳಿಸಿತು. ಪಾಕಿಸ್ತಾನದೊಂದಿಗೆ ಟರ್ಕಿ ಮಿಲಿಟರಿ ಸಹಕಾರ ಘೋಷಿಸಿದ್ದು, ಭಾರತದ ರಾಷ್ಟ್ರೀಯ ಭದ್ರತೆಗೆ ಕಳವಳ ಉಂಟು ಮಾಡಿತು. ಆದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ. ಭಾರತವು ಅಂತರರಾಷ್ಟ್ರೀಯ ವೇದಿಕೆಗಳ ಮೂಲಕವೂ ಅಸಮ್ಮತಿಯನ್ನು ಸೂಚಿಸಿತು. ಈ ನಡುವೆ, ಶಾಂಘೈ ಸಹಕಾರ ಸಂಸ್ಥೆಯಲ್ಲಿ (SCO) ಪೂರ್ಣ ಸದಸ್ಯತ್ವ ಪಡೆಯುವ ನಮ್ಮ ಪ್ರಯತ್ನಕ್ಕೆ ಭಾರತ ಅಡ್ಡಗಾಲು ಹಾಕಿದೆ ಎಂದು ಅಜರ್ಬೈಜಾನ್ ಆರೋಪಿಸಿದೆ. ಭಾರತದ ವಿರುದ್ಧ ಪ್ರತೀಕಾರದ ರೂಪವಾಗಿ ಪಾಕಿಸ್ತಾನಕ್ಕೆ ಅಜರ್ಬೈಜಾನ್ ಬೆಂಬಲ ನೀಡುತ್ತಿದೆ.

Operation Sindoor AK Bharti Copy

ಭಾರತಕ್ಕೆ ಎಚ್ಚರಿಕೆ ಏನು?
ಟರ್ಕಿ, ಪಾಕಿಸ್ತಾನ ಮತ್ತು ಅಜರ್ಬೈಜಾನ್ ಹೊಂದಾಣಿಕೆ ಮಾಡಿಕೊಳ್ಳುವುದು ಮುಸ್ಲಿಂ ಜಗತ್ತಿನಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸುವ ಉದ್ದೇಶದಿಂದ ಕೂಡಿದೆ. ಪಾಶ್ಚಿಮಾತ್ಯ ಶಕ್ತಿಗಳು ಮತ್ತು ಪ್ರಾದೇಶಿಕ ಪ್ರತಿಸ್ಪರ್ಧಿಗಳ ವಿರುದ್ಧ ತಮ್ಮನ್ನು ತಾವು ಪ್ರತಿಪಾದಿಸಲು ಸಹಾಯವಾಗುತ್ತದೆಂದು ದೇಶಗಳು ಭಾವಿಸಿವೆ. ಪಾಕಿಸ್ತಾನ ಮತ್ತು ಟರ್ಕಿಯನ್ನು ಬೆಂಬಲಿಸುವುದು ಅಜರ್ಬೈಜಾನ್‌ನ ಪ್ರಾದೇಶಿಕ ಮೈತ್ರಿಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅರ್ಮೇನಿಯಾ ಮೂಲಕ ದಕ್ಷಿಣ ಕಾಕಸಸ್‌ನಲ್ಲಿ ಭಾರತದ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಹಿಮ್ಮೆಟ್ಟಿಸಲು ಈ ಹೊಂದಾಣಿಕೆ ಸಹಕಾರಿಯಾಗಿದೆ ಎಂದು ತಿಳಿದಿವೆ. ಭಾರತದ ದೃಷ್ಟಿಕೋನದಿಂದ, ಈ ಬಣವು ಭೌಗೋಳಿಕ ರಾಜಕೀಯ ಸವಾಲಾಗಿದೆ. ಈ ಮೂರು ದೇಶಗಳ ಒಗ್ಗಟ್ಟನ್ನು ಕೇವಲ ಸೈದ್ಧಾಂತಿಕವಾಗಷ್ಟೆ ನೋಡುವುದು ಸರಿಯಲ್ಲ. ದಕ್ಷಿಣ ಏಷ್ಯಾ, ಕಾಕಸಸ್ ಮತ್ತು ಅದರಾಚೆಗೆ ಭಾರತೀಯ ಪ್ರಭಾವವನ್ನು ನಿಯಂತ್ರಿಸುವ ಉದ್ದೇಶಪೂರ್ವಕ ತಂತ್ರವೆಂದು ನೋಡಬೇಕಿದೆ.

ಭಾರತ ಮುಂದಿನ ಹೆಜ್ಜೆಯೇನು?
ಭಾರತದ ಜೊತೆ ಟರ್ಕಿ ಮತ್ತು ಅಜರ್ಬೈಜಾನ್‌ನ ವಿರೋಧವು ಕೇವಲ ವಾಕ್ಚಾತುರ್ಯದ ವಿಷಯವಲ್ಲ. ಈ ದೇಶಗಳ ಮೈತ್ರಿಯು ಪಾಕಿಸ್ತಾನದೊಂದಿಗೆ ಸೈದ್ಧಾಂತಿಕ ಹೊಂದಾಣಿಕೆ ಮತ್ತು ಭೌಗೋಳಿಕ ರಾಜಕೀಯ ಮಹತ್ವಾಕಾಂಕ್ಷೆಗಳಲ್ಲಿ ಬೇರೂರಿದೆ. ಈ ದೇಶಗಳು ಶೃಂಗಸಭೆಗಳು ಮತ್ತು ಔಪಚಾರಿಕ ಘೋಷಣೆಗಳ (ಶುಷಾ ಘೋಷಣೆ) ಮೂಲಕ ತಮ್ಮ ಸಹಕಾರವನ್ನು ಸಾಂಸ್ಥಿಕಗೊಳಿಸಿಕೊಂಡಿವೆ. ಇತ್ತೀಚಿನ ಭಾರತ-ಪಾಕಿಸ್ತಾನ ಉದ್ವಿಗ್ನತೆ ಸಂದರ್ಭದಲ್ಲಿ ಈ ದೇಶಗಳ ನಿಲುವು ಇದನ್ನು ಸ್ಪಷ್ಟಪಡಿಸಿವೆ. ಭಾರತವು ಇದಕ್ಕೆ ಪ್ರತ್ಯುತ್ತರವಾಗಿ ಅರ್ಮೇನಿಯಾ ಮತ್ತು ಇತರ ಪ್ರಾದೇಶಿಕ ಶಕ್ತಿಗಳೊಂದಿಗೆ ಸಂಬಂಧಗಳನ್ನು ಹೆಚ್ಚು ಬಲಪಡಿಸುತ್ತಿದೆ. ಆ ಮೂಲಕ ತನ್ನದೇ ಆದ ಮೈತ್ರಿಗಳನ್ನು ರೂಪಿಸುತ್ತಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ ಮಹಿಳೆಯರಿಂದಲೇ ಭಾರತದ ಮೇಲೆ ದಾಳಿ – ಜೈಶ್ ಸಂಚು

ಭಾರತ-ಅರ್ಮೇನಿಯಾ ರಕ್ಷಣಾ ಒಪ್ಪಂದ
ಭಾರತದಿಂದ Su-30MKI ಫೈಟರ್ ಜೆಟ್‌ಗಳನ್ನು ಖರೀದಿಸಲು ಅರ್ಮೇನಿಯಾ 3 ಬಿಲಿಯನ್ ಡಾಲರ್ ಒಪ್ಪಂದದಲ್ಲಿದೆ ಎಂದು ವರದಿಯಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸಿದ Su-30MKI, ಸುಧಾರಿತ ಏವಿಯಾನಿಕ್ಸ್, ಡ್ಯುಯಲ್-ಎಂಜಿನ್ ಥ್ರಸ್ಟ್-ವೆಕ್ಟರಿಂಗ್ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುವ ಬಹು-ಪಾತ್ರದ ಫೈಟರ್ ಜೆಟ್ ಆಗಿದೆ. ಒಪ್ಪಂದದಂತೆ, ಭಾರತವು 2027 ರಲ್ಲಿ ಅರ್ಮೇನಿಯಾಗೆ ಎಂಟರಿಂದ ಹನ್ನೆರಡು ವಿಮಾನಗಳ ಮೊದಲ ಬ್ಯಾಚ್‌ನ ವಿತರಣೆಯನ್ನು ಪ್ರಾರಂಭಿಸುತ್ತದೆ. 2029 ರ ವೇಳೆಗೆ ಅದನ್ನು ಪೂರ್ಣಗೊಳಿಸುತ್ತದೆ. ಭಾರತದ ಪ್ರಮುಖ ಭೌಗೋಳಿಕ ರಾಜಕೀಯ ಎದುರಾಳಿ ಪಾಕಿಸ್ತಾನದಿಂದ ಅಜರ್ಬೈಜಾನ್ ಇತ್ತೀಚೆಗೆ 40 JF-17 ಥಂಡರ್ ಬ್ಲಾಕ್ III ವಿಮಾನಗಳನ್ನು ಖರೀದಿಸಿತ್ತು. ಅದರ ಬೆನ್ನಲ್ಲೇ ಭಾರತ ಮತ್ತು ಅರ್ಮೇನಿಯಾ ನಡುವೆ ಒಪ್ಪಂದವಾಗಿದೆ.

ಶತ್ರುವಿನ ಶತ್ರು ನನ್ನ ಮಿತ್ರ ತಂತ್ರ
ದಕ್ಷಿಣ ಕಾಕಸಸ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಪ್ರಚೋದಿಸಲು ಸಜ್ಜಾಗಿವೆ. ಭಾರತ-ಅರ್ಮೇನಿಯಾ ಒಪ್ಪಂದವು ಅಜರ್ಬೈಜಾನ್ ಪಾಕಿಸ್ತಾನದಿಂದ JF-17 ಯುದ್ಧವಿಮಾನಗಳನ್ನು ಖರೀದಿಸಿದ್ದಕ್ಕೆ ಕೌಂಟರ್ ಆಗಿದೆ. ಆ ಮೂಲಕ ‘ನನ್ನ ಶತ್ರುವಿನ ಶತ್ರು ನನ್ನ ಸ್ನೇಹಿತ’ ಎಂಬ ನಡೆಯನ್ನು ಭಾರತ ಅನುಸರಿಸುತ್ತಿದೆ. ಭಾರತದೊಂದಿಗಿನ ಅರ್ಮೇನಿಯಾದ ಒಪ್ಪಂದವು ರಷ್ಯಾದ ಮೇಲಿನ ಸಾಂಪ್ರದಾಯಿಕ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಜೊತೆಗೆ ರಕ್ಷಣಾ ಪಾಲುದಾರಿಕೆಗಳನ್ನು ವೈವಿಧ್ಯಗೊಳಿಸಲು ಸಹಕಾರಿಯಾಗಲಿದೆ. ಅರ್ಮೇನಿಯಾ ಈಗಾಗಲೇ ಪಿನಾಕಾ ಬಹು-ಉಡಾವಣಾ ರಾಕೆಟ್ ಸಿಸ್ಟಮ್‌ಗಳು, ಸ್ವಾತಿ ಪ್ರತಿ-ಬ್ಯಾಟರಿ ರಾಡಾರ್‌ಗಳು ಮತ್ತು ATAGS 155mm ಹೊವಿಟ್ಜರ್‌ಗಳನ್ನು ಭಾರತದಿಂದ ಖರೀದಿಸಿದೆ. ರಷ್ಯಾ ಮತ್ತು ಟರ್ಕಿಯೇ ಪ್ರಮುಖವಾಗಿದ್ದ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಪೂರೈಕೆದಾರನಾಗಿ ತನ್ನ ಹೆಜ್ಜೆಗುರುತನ್ನು ಸ್ಥಾಪಿಸುವ ಭಾರತದ ಪ್ರಯತ್ನಗಳಲ್ಲಿ ಈ ಒಪ್ಪಂದವು ಒಂದು ಮಹತ್ವದ ಹೆಜ್ಜೆಯಾಗಿದೆ.

TAGGED:Azerbaijanindiajammu kashmirpakistanturkeyಅಜರ್‌ಬೈಜಾನ್‌ಜಮ್ಮು ಕಾಶ್ಮೀರಟರ್ಕಿಪಾಕಿಸ್ತಾನಭಾರತ
Share This Article
Facebook Whatsapp Whatsapp Telegram

Cinema news

sudeep 6
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಿಚ್ಚ ಸುದೀಪ್‌ – ನಟನಿಗೆ ಕಷ್ಟವಾಯ್ತಾ ಕ್ರಾಸ್ ಎಕ್ಸಾಮಿನೇಷನ್?
Bengaluru City Cinema Court Districts Karnataka Latest Sandalwood Top Stories
Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories

You Might Also Like

HH 60W Jolly Green II
Latest

ಇರಾನ್‌ನಲ್ಲಿ ಕಾಣೆಯಾಗಿದ್ದ US ವಾಯುಪಡೆಯ ಮತ್ತೋರ್ವ ಪೈಲಟ್‌ ರಕ್ಷಣೆ – ಹೇಗಿತ್ತು ಥ್ರಿಲ್ಲಿಂಗ್‌ ಕಾರ್ಯಾಚರಣೆ?

Public TV
By Public TV
6 minutes ago
rRCB vs CSK IPL Ticket Scam
Bengaluru City

RCB vs CSK ಐಪಿಎಲ್ ಟಿಕೆಟ್ ನೀಡುವುದಾಗಿ ವಂಚನೆ – 1.46 ಲಕ್ಷ ಕಳೆದುಕೊಂಡ ಟೆಕ್ಕಿ

Public TV
By Public TV
1 hour ago
CSK vs RCB
Bengaluru City

ಬೆಂಗಳೂರಿನಲ್ಲಿಂದು RCB vs CSK ಹೈವೋಲ್ಟೇಜ್‌ ಕದನ – ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 2,300 ಪೊಲೀಸರಿಂದ ಭದ್ರತೆ

Public TV
By Public TV
2 hours ago
Hubbali Love Jihda
Crime

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್‌ – ಹಿಂದೂ ಯುವತಿ ಮೇಲೆ ಅತ್ಯಾಚಾರ ಆರೋಪ

Public TV
By Public TV
2 hours ago
Anekal Ona Karaga Mahotsava
Bengaluru City

ಆನೇಕಲ್‌ನಲ್ಲಿ ಅದ್ಧೂರಿಯಾಗಿ ನಡೆದ ಒಣ ಕರಗ ಮಹೋತ್ಸವ

Public TV
By Public TV
3 hours ago
Donald Trump Angry
Latest

Terminated – ಬೃಹತ್‌ ದಾಳಿಯಲ್ಲಿ ಇರಾನ್‌ ಮಿಲಿಟರಿ ಪಡೆಯ ಟಾಪ್‌ ಕಮಾಂಡರ್‌ಗಳ ಹತ್ಯೆ: ಟ್ರಂಪ್‌

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?