Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಏಷ್ಯಾಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ – ಎರಡನೇ ಆವೃತ್ತಿ ಆಡಲೇ ಇಲ್ಲ ಟೀಂ ಇಂಡಿಯಾ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಏಷ್ಯಾಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ – ಎರಡನೇ ಆವೃತ್ತಿ ಆಡಲೇ ಇಲ್ಲ ಟೀಂ ಇಂಡಿಯಾ!

Cricket

ಏಷ್ಯಾಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ – ಎರಡನೇ ಆವೃತ್ತಿ ಆಡಲೇ ಇಲ್ಲ ಟೀಂ ಇಂಡಿಯಾ!

Public TV
Last updated: August 25, 2022 1:45 pm
Public TV
Share
3 Min Read
ASIACUP
SHARE

ದುಬೈ: ಏಷ್ಯಾಕಪ್ ಆರಂಭವಾದ ಚೊಚ್ಚಲ ಆವೃತ್ತಿಯಲ್ಲೇ ಭಾರತ ಕಪ್ ಗೆದ್ದು ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿತ್ತು. ಆದರೆ ಶ್ರೀಲಂಕಾದಲ್ಲಿ ನಡೆದ ಎರಡನೇ ಆವೃತ್ತಿ ಏಷ್ಯಾಕಪ್‍ನಿಂದ ಭಾರತ ಹಿಂದೆ ಸರಿದಿತ್ತು. ಇದಕ್ಕೆ ಬಲವಾದ ಕಾರಣವಿತ್ತು.

TEAM INDIA 3

ಹೌದು ಏಷ್ಯಾದ ತಂಡಗಳಿಗಾಗಿ ಏಷ್ಯಾಕಪ್ ಆಯೋಜನೆ ಮಾಡಲು ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿತ್ತು. 1984ರಲ್ಲಿ ಮೊದಲ ಆವೃತ್ತಿ ಆರಂಭಿಸಲಾಯಿತು. ಮೊದಲ ಆವೃತ್ತಿಯಲ್ಲಿ ಒಟ್ಟು ಮೂರು ತಂಡಗಳು ಭಾಗವಹಿಸಿದ್ದವು. ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆದರೆ, ಶ್ರೀಲಂಕಾ ರನ್ನರ್ ಅಪ್ ಆಯಿತು. 1986ರಲ್ಲಿ ಎರಡನೇ ಆವೃತ್ತಿ ಏಷ್ಯಾಕಪ್ ಆಯೋಜನೆಗೆ ಶ್ರೀಲಂಕಾ ಮುಂದಾಯಿತು. ಈ ವೇಳೆ ಶ್ರೀಲಂಕಾದಲ್ಲಿ ಎಲ್‍ಟಿಟಿ ಸಂಘಟನೆಯ ಬಗ್ಗೆ ವಿರೋಧಗಳು ವ್ಯಕ್ತವಾಗುತ್ತಿತ್ತು. ಭಾರತ ದೇಶ ಕೂಡ ಈ ಬಗ್ಗೆ ಧ್ವನಿ ಎತ್ತಿತ್ತು. ಹಾಗಾಗಿ ಶ್ರೀಲಂಕಾದಲ್ಲಿ ನಡೆದ ಎರಡನೇ ಆವೃತ್ತಿ ಏಷ್ಯಾಕಪ್‍ನಿಂದ ಭಾರತ ಹಿಂದೆ ಸರಿಯಲು ತೀರ್ಮಾನಿಸಿತ್ತು. ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ನಡುವಿನ ಮಾತುಕತೆ ಮುರಿದು ಬಿದ್ದು ಕೊನೆಗೆ ಭಾರತ ಏಷ್ಯಾಕಪ್ ಆಡದಿರಲು ತೀರ್ಮಾನಿಸಿತ್ತು. ಇದನ್ನೂ ಓದಿ: ಕ್ರಿಕೆಟ್ ದೇವರು ಸಚಿನ್ ಪುತ್ರಿಯ ಜೊತೆ ಶುಭಮನ್ ಗಿಲ್ ಲವ್ ಬ್ರೇಕ್ ಅಪ್

TEAM INDIA 5

ಆ ಬಳಿಕ ನಡೆದ 1988, 1990/91, 1995 ಹೀಗೆ ಮೂರು ವರ್ಷ ಸತತ ಏಷ್ಯಾಕಪ್‍ನಲ್ಲಿ ಚಾಂಪಿಯನ್ ಆಗುವ ಮೂಲಕ ಭಾರತ ಮತ್ತೆ ಹ್ಯಾಟ್ರಿಕ್ ಮಾಡಿತು. ಆ ಬಳಿಕ 2016 ಮತ್ತು 2018 ರಲ್ಲಿ ಚಾಂಪಿಯನ್ ಆಗಿರುವ ಭಾರತ ಇದೀಗ 15ನೇ ಆವೃತ್ತಿಯಲ್ಲಿ ಮತ್ತೆ ಕಪ್ ಗೆದ್ದರೆ, ಮತ್ತೊಮ್ಮೆ ಹ್ಯಾಟ್ರಿಕ್ ಸಾಧನೆ ಮಾಡಲಿದೆ. ಇದನ್ನೂ ಓದಿ: ಏಷ್ಯಾಕಪ್‍ನಲ್ಲಿ ಬದ್ಧ ವೈರಿಗಳ ಕಾದಾಟ – 14 ಬಾರಿ ಮುಖಾಮುಖಿ, ಯಾರಿಗೆ ಮೇಲುಗೈ?

ASIA CUP

ಪ್ರಶಸ್ತಿ ಪಟ್ಟಿ:
1984ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆದರೆ, ಶ್ರೀಲಂಕಾ ರನ್ನರ್ ಅಪ್ ಆಯಿತು.
1986ರಲ್ಲಿ ನಡೆದ ಎರಡನೇ ಆವೃತ್ತಿಯಲ್ಲಿ ಶ್ರೀಲಂಕಾ ಚಾಂಪಿಯನ್, ಪಾಕಿಸ್ತಾನ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು.
ಆ ಬಳಿಕ 1988, 1990/91 ಮತ್ತು 1995ರಲ್ಲಿ ಸತತ ಮೂರು ವರ್ಷ ಭಾರತ ಚಾಂಪಿಯನ್ ಆಗಿ ಕಪ್ ಗೆದ್ದರೆ, ಶ್ರೀಲಂಕಾ ರನ್ನರ್ ಅಪ್ ಸ್ಥಾನ ಪಡೆದು ಮಿಂಚಿತು.
1997ರಲ್ಲಿ ಶ್ರೀಲಂಕಾ ಏಷ್ಯಾಕಪ್ ಗೆದ್ದರೆ, ಭಾರತ ರನ್ನರ್ ಅಪ್ ಆಯಿತು.
2000ದಲ್ಲಿ ಪಾಕಿಸ್ತಾನ ಕಪ್ ಗೆದ್ದರೆ, ಶ್ರೀಲಂಕಾ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.
2004ರಲ್ಲಿ ಶ್ರೀಲಂಕಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಭಾರತ ರನ್ನರ್ ಅಪ್ ಆಗಿತ್ತು.
2008ರಲ್ಲಿ ಮತ್ತೆ ಶ್ರೀಲಂಕಾ ಚಾಂಪಿಯನ್, ಭಾರತ ರನ್ನರ್ ಅಪ್
2010 ಇದು ಬದಲಾಯಿತು. ಭಾರತ ಚಾಂಪಿಯನ್ ಆದರೆ, ಶ್ರೀಲಂಕಾ ರನ್ನರ್ ಅಪ್ ಸ್ಥಾನ ಪಡೆಯಿತು.
2012ರಲ್ಲಿ ಪಾಕಿಸ್ತಾನ ಪ್ರಶಸ್ತಿ ಗೆದ್ದರೆ, ಬಾಂಗ್ಲಾದೇಶ ರನ್ನರ್ ಅಪ್ ಆಗಿ ಹೊರಹೊಮ್ಮಿತು.
2014ರಲ್ಲಿ ಶ್ರೀಲಂಕಾ ಚಾಂಪಿಯನ್, ಪಾಕಿಸ್ತಾನ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
2016 ಮತ್ತು 2018ರಲ್ಲಿ ಭಾರತ ಪ್ರಶಸ್ತಿಗೆ ಮುತ್ತಿಕ್ಕಿದರೆ, ಬಾಂಗ್ಲಾದೇಶ ರನ್ನರ್ ಅಪ್ ಆಯಿತು.

ಇದೀಗ 15ನೇ ಆವೃತ್ತಿ ಏಷ್ಯಾಕಪ್‍ಗಾಗಿ ಯನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವೇದಿಕೆ ಸಜ್ಜಾಗಿದೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಈಗಾಗಲೇ ನೇರ ಅವಕಾಶ ಪಡೆದಿದೆ. ಹಾಂಕಾಂಗ್, ಸಿಂಗಾಪುರ್, ಕುವೈತ್ ಮತ್ತು ಯುಎಇ ತಂಡಗಳು ಅರ್ಹತಾ ಸುತ್ತಿನಲ್ಲಿ ತೇರ್ಗಡೆಗೊಂಡು 6ನೇ ತಂಡವಾಗಿ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯಬೇಕಾಗಿದೆ. ಟೂರ್ನಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11ರ ವರೆಗೆ ನಡೆಯಲಿದೆ. ಆಗಸ್ಟ್ 28 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ.

Live Tv
[brid partner=56869869 player=32851 video=960834 autoplay=true]

TAGGED:asia cupindiaTeam indiaಏಷ್ಯಾಕಪ್ಪಾಕಿಸ್ತಾನಭಾರತಶ್ರೀಲಂಕಾ
Share This Article
Facebook Whatsapp Whatsapp Telegram

Cinema news

gautam srivatsa gave music to the hindi film azad bharat 1
ಹಿಂದಿಯ ಆಜಾದ್ ಭರತ್ ಚಿತ್ರಕ್ಕೆ ಜೀವ ತುಂಬಿದ ಗೌತಮ್ ಶ್ರೀವತ್ಸ
Cinema Latest Sandalwood
Vijay
ಅರಬ್ ರಾಷ್ಟ್ರಗಳಲ್ಲಿ ದಳಪತಿಯ ʻಜನನಾಯಗನ್ʼ ಬ್ಯಾನ್?
Cinema Latest South cinema Top Stories
Darshan 8
ಅಲೋಕ್‌ ಕುಮಾರ್‌ ಖಡಕ್‌ ನಡೆ – ದರ್ಶನ್‌ಗೆ ಮನೆಯ ಬ್ಲಾಂಕೆಟ್ ಸಿಗೋದು ಅನುಮಾನ
Bengaluru City Cinema Karnataka Latest Main Post
gilli rashika
ಗಿಲ್ಲಿ ಜೊತೆ ಜಗಳಕ್ಕೆ ಬಿದ್ದ ರಾಶಿಕಾ; ಕಾರಣವೇನು ಗೊತ್ತಾ?
Cinema Latest Top Stories TV Shows

You Might Also Like

belagavi stabbed case arrest
Belgaum

ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ ಕೇಸ್‌ – ನಾಲ್ವರು ಆರೋಪಿಗಳ ಬಂಧನ

Public TV
By Public TV
6 minutes ago
Chikkamagalurt
Chikkamagaluru

ಹಣಕ್ಕಾಗಿ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಪಾಪಿ ತಂದೆ – ಕಾಫಿನಾಡಲ್ಲೊಂದು ಹೃದಯವಿದ್ರಾವಕ ಘಟನೆ!

Public TV
By Public TV
7 minutes ago
H Vishwanath
Bengaluru City

ದೇವರಾಜ ಅರಸು ಅವರಿಗೆ ಸಿದ್ದರಾಮಯ್ಯ ಸಾಟಿ ಇಲ್ಲ, ಯಾವ ಅಹಿಂದ ನಾಯಕ ರೀ..: ಹೆಚ್.ವಿಶ್ವನಾಥ್ ತಿರುಗೇಟು

Public TV
By Public TV
9 minutes ago
Accident
Bidar

ಬೀದರ್‌ನಲ್ಲಿ 10 ತಿಂಗಳಲ್ಲಿ 800ಕ್ಕೂ ಹೆಚ್ಚು ರಸ್ತೆ ಅಪಘಾತ – 263 ಮಂದಿ ಸಾವು

Public TV
By Public TV
24 minutes ago
Kogilu Layout
Latest

ಕೋಗಿಲು ಲೇಔಟ್ ನಿರಾಶ್ರಿತರಿಗೆ ಪುನರ್ವಸತಿ ಭಾಗ್ಯ – ನಾಳೆ ಅರ್ಹರಿಗೆ ಸಿಗಲಿದೆ ಮನೆ!

Public TV
By Public TV
35 minutes ago
Arjun Tendulkar 3
Cricket

ಮಾರ್ಚ್‌ನಲ್ಲಿ ಅರ್ಜುನ್‌ ತೆಂಡೂಲ್ಕರ್ – ಸಾನಿಯಾ ಚಾಂದೋಕ್ ವಿವಾಹ?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?