ರಾಷ್ಟ್ರ ಪ್ರಶಸ್ತಿ ವಿಜೇತ ನಟ ದತ್ತಣ್ಣ (Duttanna) ಮದುವೆ (Marriage) ಆಗದೇ ಇರುವ ವಿಚಾರ ತುಂಬಾ ಜನಕ್ಕೆ ತಿಳಿದಿರಲಿಲ್ಲ. ಸಿನಿಮಾ ರಂಗದ ಆಪ್ತರ ಹೊರತಾಗಿ, ಅವರು ಕೂಡ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮದಲ್ಲಿ ಈ ಕುರಿತು ಅವರ ಗೆಳೆಯರೇ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದತ್ತಣ್ಣ ಮದುವೆ ಯಾಕೆ ಆಗಲಿಲ್ಲ ಎನ್ನುವ ಕುರಿತು ಹೇಳಿದ್ದಾರೆ.
ಓದಿನಲ್ಲಿ ದತ್ತಣ್ಣ ಯಾವಾಗಲೂ ಮುಂದು. ಹಾಗಾಗಿ ಇಂಜಿನಿಯರಿಂಗ್ ಪದವಿ ಪೂರೈಸಿದರು. ಏರ್ ಫೋರ್ಸ್ ನಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದರು. ಚಿಕ್ಕ ವಯಸ್ಸಿನಿಂದಲೇ ನಟನಾ ಕ್ಷೇತ್ರದತ್ತ ಆಸಕ್ತಿಯಿದ್ದರೂ, ಸೇನೆಯಲ್ಲಿ ಕೆಲಸ ಮಾಡಬೇಕು ಎನ್ನುವ ಕಾರಣಕ್ಕಾಗಿ ಏರ್ ಫೋರ್ಸ್ ಸೇರಿಕೊಂಡರು. ಅಂಡಮಾನ್, ದೆಹಲಿ ಸೇರಿದಂತೆ ಅನೇಕ ಕಡೆ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಎಚ್.ಎಎಲ್ ಗೆ ಬಂದ ಮೇಲೆ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇದನ್ನೂ ಓದಿ: ಮತ್ತೆ ಒಂದಾಯಿತು ‘ಕರ್ಣನ್’ ಜೋಡಿ: ಧನುಷ್ ಚಿತ್ರಕ್ಕೆ ಮಾರಿ ಸೆಲ್ವರಾಜ್ ಡೈರೆಕ್ಟರ್
ದತ್ತಣ್ಣ ಚಿತ್ರರಂಗಕ್ಕೆ ಬಂದಾಗ ಅವರಿಗೆ 45 ವರ್ಷ. ಆದರೂ, ಬಣ್ಣದ ಮೇಲಿನ ಗೀಳು ಕಡಿಮೆ ಆಗಿರಲಿಲ್ಲ. ಹಿಂದಿ ಚಿತ್ರರಂಗದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ದತ್ತಣ್ಣ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇಷ್ಟೊಂದು ಸಾಧನೆ ಮಾಡಿದರೂ ಕೂಡ ಅವರು ಮದುವೆ, ಸಂಸಾರ ಅಂತ ಹೋಗಲಿಲ್ಲ. ಅದಕ್ಕೆ ಕಾರಣ ಸಂಸಾರದ ಮೇಲಿನ ಜಿಗುಪ್ಸೆ ಎಂದೇ ಹೇಳಲಾಗುತ್ತಿದೆ. ಈ ಕುರಿತು ಗೆಳೆಯರು ಮುಕ್ತವಾಗಿ ಮಾತನಾಡಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದ ಗೆಳೆಯರು, ದತ್ತಣ್ಣ ಮದುವೆ ಆಗದೇ ಇರುವುದಕ್ಕೆ ಕಾರಣ ಸಂಸಾರ ಎನ್ನುವುದು ಗೋಳು ಎಂದು ಪದೇ ಪದೇ ದತ್ತಣ್ಣ ಮಾತನಾಡುತ್ತಿದ್ದರಂತೆ. ಮದುವೆಯಾದರೆ ಸ್ವತಂತ್ರವಾಗಿ ಇರುವುದಕ್ಕೆ ಆಗುವುದಿಲ್ಲ ಎನ್ನುವ ಕಾರಣಕ್ಕಾಗಿ ಮದುವೆ ಆಗಿಲ್ಲ’ ಎಂದಿದ್ದಾರೆ.