Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆಪರೇಷನ್‌ ಸಿಂಧೂರದ ಹಿಂದಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ ಯಾರು? ಹಿನ್ನೆಲೆ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಆಪರೇಷನ್‌ ಸಿಂಧೂರದ ಹಿಂದಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ ಯಾರು? ಹಿನ್ನೆಲೆ ಏನು?

Latest

ಆಪರೇಷನ್‌ ಸಿಂಧೂರದ ಹಿಂದಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ ಯಾರು? ಹಿನ್ನೆಲೆ ಏನು?

Public TV
Last updated: May 13, 2025 9:09 pm
Public TV
Share
3 Min Read
Operation Sindoor AK Bharti Copy 2
SHARE

ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಆಪರೇಷನ್‌ ಸಿಂಧೂರ (Operartion Sindoor) ಹೆಸರಿನಲ್ಲಿ ಮೇ 7 ರಂದು ಮಧ್ಯರಾತ್ರಿ ಭಾರತೀಯ ಸೇನೆ ನಡೆಸಿದ ಸರಣಿ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಒಳಭಾಗದಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸಗೊಳಿಸಲಾಯಿತು. ಅಲ್ಲದೇ 100  ಭಯೋತ್ಪಾದಕರನ್ನು ಕೂಡ ಭಾರತೀಯ ಸೇನಾ ಪಡೆ ಹೊಡೆದುರುಳಿಸಿದ್ದು, ಪಾಕ್‌ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ಕೊಟ್ಟಿದೆ. 

ಭಾರತ ಮತ್ತು ಪಾಕ್‌ ಸಂಘರ್ಷದಲ್ಲಿ ಭಾರತದ ತ್ರಿಪಡೆಗಳಾದ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಪಾತ್ರ ಪ್ರಮುಖವಾದದ್ದು. ಈ ಆಪರೇಷನ್‌ ಸಿಂಧೂರ ಯಶಸ್ವಿ ಕಾರ್ಯಾಚರಣೆಯ ಹಿಂದಿರುವ ಮಾಸ್ಟರ್ ಮೈಂಡ್‌ಗಳ ಪೈಕಿ ಏರ್‌ ಮಾರ್ಷಲ್‌ ಎಕೆ ಭಾರ್ತಿ ಕೂಡ ಒಬ್ಬರು. ಹಾಗಿದ್ರೆ ಯಾರು ಈ ಏರ್‌ ಮಾರ್ಷಲ್‌ ಭಾರ್ತಿ? ಹಿನ್ನೆಲೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

Operation Sindoor AK Bharti Copy 1

ಹಿನ್ನೆಲೆ ಏನು?
ಬಿಹಾರದ ಪುರ್ನಿಯಾ ಜಿಲ್ಲೆಯ ಜುನ್ನಿ ಕಲಾನ್ ಗ್ರಾಮದ ಎಕೆ ಭಾರ್ತಿ ಅವರ ತಂದೆ ಜೀವ್ಚಲಾಲ್ ಯಾದವ್, ಕೋಸಿ ಯೋಜನೆಯಲ್ಲಿ ಲೆಕ್ಕಪರಿಶೋಧಕರಾಗಿದ್ದರು. ಎಕೆ ಭಾರ್ತಿಯವರ ಇಬ್ಬರು ಸಹೋದರರು ಕೂಡ ಪುರ್ನಿಯಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  

ಏರ್ ಮಾರ್ಷಲ್ ಭಾರ್ತಿ ಅವರಂತಹ ಸರಳ ಕುಟುಂಬದಿಂದ ಬಂದ ವ್ಯಕ್ತಿಯ ಈ ಕೊಡುಗೆ ಪೂರ್ಣಿಯಾಗೆ ಮಾತ್ರವಲ್ಲ, ಇಡೀ ಬಿಹಾರಕ್ಕೆ ಹೆಮ್ಮೆಯ ವಿಷಯವಾಗಿದೆ. ಇದು ಯುವ ಪೀಳಿಗೆಗೆ ಉತ್ತಮ ಸ್ಫೂರ್ತಿಯಾಗಿದೆ ಎಂದು ಬಿಹಾರದ ಜನರು ಭಾರ್ತಿ ಅವರನ್ನು ಕೊಂಡಾಡುತ್ತಿದ್ದಾರೆ.

ಶೈಕ್ಷಣಿಕ ಹಿನ್ನೆಲೆ:
ಏರ್ ಮಾರ್ಷಲ್ ಎಕೆ ಭಾರ್ತಿ ತಮ್ಮ ಆರಂಭಿಕ ಶಿಕ್ಷಣವನ್ನು ತಿಲೈಯಾದ ಸೈನಿಕ್ ಶಾಲೆಯಿಂದ ಪಡೆದರು. ಬಳಿಕ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಪ್ರವೇಶ ಪಡೆದರು.ವೆಲ್ಲಿಂಗ್ಟನ್‌ನಲ್ಲಿ ಪ್ರತಿಷ್ಠಿತ ಸ್ಟಾಫ್ ಕೋರ್ಸ್ ಮತ್ತು ದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ (ಎನ್‌ಡಿಸಿ) ವ್ಯಾಸಂಗ ಮಾಡಿದರು.

ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್ (ಡಿಎಸ್‌ಎಸ್‌ಸಿ) ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜಿನ (ಎನ್‌ಡಿಸಿ) ಸ್ನಾತಕೋತ್ತರ ಪದವೀಧರರಾದ ಎಕೆ ಭಾರ್ತಿ ಅವರು ಐಎಎಫ್‌ಗಾಗಿ ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುವ ಮತ್ತು ಶತ್ರು ಪ್ರದೇಶವನ್ನು ಭೇದಿಸಲು ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸುವ ಕೀರ್ತಿಗೆ ಪಾತ್ರರಾಗಿದ್ದಾರೆ.

ಸಾಧನೆಗಳೇನು?
ಸುಮಾರು ಎರಡು ದಶಕಗಳ ಸೇವೆಯ ಅನುಭವ ಹೊಂದಿರುವ ಅನುಭವಿ ಅಧಿಕಾರಿ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಅವರು ಜೂನ್ 13, 1987 ರಂದು ಭಾರತೀಯ ವಾಯುಪಡೆಗೆ ನಿಯೋಜನೆಗೊಂಡರು. ಫೈಟರ್ ಯುದ್ಧ ನಾಯಕರಾಗಿದ್ದು, ಆಗಸ್ಟ್ 2005ರಿಂದ ಸೆಪ್ಟೆಂಬರ್ 2007 ರವರೆಗೆ ಸುಖೋಯ್ -30 ಎಂಕೆಐ ಸ್ಕ್ವಾಡ್ರನ್ ಅನ್ನು ಮುನ್ನಡೆಸಿದರು. ಅಲ್ಲಿ ಅವರು ವಿಮಾನದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

Operation Sindoor AK Bharti Copy

ಆಗಸ್ಟ್ 16, 2005ರಂದು ಎಕೆ ಭಾರ್ತಿ ಸುಖೋಯ್-30 ಎಂಕೆಐ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡರು. ಅವರ ನೇತೃತ್ವದಲ್ಲಿ, ಸುಖೋಯ್ -30 ಎಂಕೆಐ ಸ್ಕ್ವಾಡ್ರನ್ ಗಗನ್ ಶಕ್ತಿ, ಇಂದ್ರಧನುಷ್ 2006 (ರಾಯಲ್ ಏರ್ ಫೋರ್ಸ್‌ನೊಂದಿಗೆ), ಮತ್ತು ಗರುಡ 2007 (ಫ್ರೆಂಚ್ ಏರ್ ಫೋರ್ಸ್‌ನೊಂದಿಗೆ)  ಪ್ರಮುಖ ವ್ಯಾಯಾಮಗಳಲ್ಲಿ ತೊಡಗಿಸಿಕೊಂಡಿತ್ತು. 

1997ರಲ್ಲಿ  ಕೆಲಸದ ಶ್ರದ್ಧೆಗಾಗಿ ಏರ್ ಮಾರ್ಷಲ್ ಭಾರ್ತಿ ಅವರಿಗೆ ವಾಯುಪಡೆಯ ಮುಖ್ಯಸ್ಥರು CAS ಪ್ರಶಂಸೆ ನೀಡಿದರು. 2008ರಲ್ಲಿ ಭಾರ್ತಿ ಅವರ ಕರ್ತವ್ಯ ನಿಷ್ಠೆ ಹಾಗೂ ಅತ್ಯುತ್ತಮ ನಾಯಕತ್ವ ಗುಣಕ್ಕಾಗಿ ʼವಾಯುಸೇನಾʼ ಪದಕವನ್ನು ನೀಡಿ ಗೌರವಿಸಲಾಯಿತು. 

ಎಕೆ ಭಾರ್ತಿ ಅವರಿಗೆ ಅಪಘಾತ-ಮುಕ್ತ ಹಾರಾಟ ಪ್ರಶಸ್ತಿ ಮತ್ತು ಅಪಘಾತ-ಮುಕ್ತ ಹಾರಾಟಕ್ಕಾಗಿ 3 ಸ್ಟಾರ್ಸ್ ಅನ್ನು ಸಹ ನೀಡಲಾಗಿದೆ. ಸೆಪ್ಟೆಂಬರ್ 2023ರಿಂದ ಭಾರ್ತಿ ಡೈರೆಕ್ಟರ್ ಜನರಲ್ ಏರ್ ಆಪರೇಷನ್ಸ್ (DGAO) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿಜಿಎಒ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಪ್ರಯಾಗ್‌ರಾಜ್‌ನ ಸೆಂಟ್ರಲ್ ಏರ್ ಕಮಾಂಡ್‌ನಲ್ಲಿ ಹಿರಿಯ ಸಿಬ್ಬಂದಿ ಅಧಿಕಾರಿ (ಎಸ್‌ಎಎಸ್‌ಒ) ಆಗಿದ್ದರು.

ಆಪರೇಷನ್ ಸಿಂಧೂರ್‌ನಲ್ಲಿ ಭಾರ್ತಿ ಅವರ ಪಾತ್ರ:
ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರದಲ್ಲಿ ಭಾರತೀಯ ವಾಯುಪಡೆಯ ಕಾರ್ಯತಂತ್ರದ ಯೋಜನೆ ಮತ್ತು ವಾಯು ಕಾರ್ಯಾಚರಣೆಗಳ ನೇತೃತ್ವವನ್ನು ಏರ್‌ಮಾರ್ಷಲ್ ಎಕೆ ಭಾರ್ತಿ ವಹಿಸಿಕೊಂಡರು.

ಭಾನುವಾರ ನಡೆದ ತ್ರಿಪಡೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ, IAF ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿನ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಮತ್ತು ಚಕಲಾ, ರಫೀಕ್ ಮತ್ತು ರಹೀಮ್ ಯಾರ್ ಖಾನ್‌ನಲ್ಲಿರುವ ಪಾಕಿಸ್ತಾನದ ವಾಯು ನೆಲೆಗಳನ್ನು ಹೇಗೆ ಹೊಡೆದುರುಳಿಸಿತು ಎಂಬುದನ್ನು ಭಾರ್ತಿ ಬಹಿರಂಗಪಡಿಸಿದರು.

ಸೋಮವಾರ ನಡೆದ ಮತ್ತೊಂದು ಸುದ್ದಿಗೋಷ್ಠಿಯಲ್ಲಿ, ಪಾಕಿಸ್ತಾನ ನಗರದಿಂದ 35 ಕಿ.ಮೀ ದೂರದಲ್ಲಿರುವ ಮಿಲಿಟರಿ ನೆಲೆಯಾದ ಮಾಲಿರ್ ಕಂಟೋನ್ಮೆಂಟ್ ಸೇರಿದಂತೆ ಕರಾಚಿಯಲ್ಲಿ ಹಲವಾರು ಗುರಿಗಳನ್ನು ಐಎಎಫ್ ಹೊಡೆದುರುಳಿಸಿದೆ ಎಂದು ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ದಾಳಿಯನ್ನು ವೀಡಿಯೋ ಸಾಕ್ಷ್ಯ ಸಮೇತ ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ.

TAGGED:air marshalAK BhartiDGAOindiaIndia Pakistan WarOperation Sindoorpakistan
Share This Article
Facebook Whatsapp Whatsapp Telegram

Cinema news

gilli nata 4
ಬಂದಿರೋ 50 ಲಕ್ಷದಲ್ಲಿ ಜಮೀನು ತಗೊಂಡು ವ್ಯವಸಾಯ ಮಾಡ್ತೀನಿ: ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಫಸ್ಟ್ ರಿಯಾಕ್ಷನ್‌
Cinema Latest Main Post TV Shows
Bigg Boss Gilli
`ದೊಡ್ಮನೆ’ ದೊರೆಯಾದ ದಡದಪುರದ ಹೈದ – ಗಿಲ್ಲಿ ಗೆಲುವಿಗೆ ಸಂಭ್ರಮಿಸಿದ ಕರುನಾಡು
Bengaluru City Cinema Karnataka Latest Main Post Mandya Sandalwood Top Stories
Gilli Nata 3
ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ, ರನ್ನರ್‌ ರಕ್ಷಿತಾ, ಅಶ್ವಿನಿ ಗೌಡಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?
Cinema Latest Main Post TV Shows
Gilli
BBK Season 12 Winner | ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟ ಗಿಲ್ಲಿ
Bengaluru City Cinema Latest Main Post TV Shows

You Might Also Like

Bermingham Pink sky
Latest

ಗುಲಾಬಿ ಬಣ್ಣಕ್ಕೆ ತಿರುಗಿದ ಬರ್ಮಿಂಗ್‌ಹ್ಯಾಮ್ ಆಕಾಶ – ಈ ಅಚ್ಚರಿ ಹಿಂದಿನ ಕಾರಣವೇನು? 

Public TV
By Public TV
8 hours ago
Pralhad Joshi Davos WEF Meeting
Latest

ವಿಶ್ವ ಆರ್ಥಿಕ ವೇದಿಕೆ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Public TV
By Public TV
9 hours ago
Ashwini Gouda 1
Cinema

BBK Season 12 | ಬಿಗ್‌ ಮನೆಯ ಫೈಯರ್‌ ಬ್ರ್ಯಾಂಡ್‌ ಅಶ್ವಿನಿ ಗೌಡಗೆ 3ನೇ ಸ್ಥಾನ!

Public TV
By Public TV
9 hours ago
Gilli Kavya
Bengaluru City

ಗಿಲ್ಲಿ ಹೇಳಿದಾಗ ಕಾಣಿಸಿಕೊಳ್ಳೋಕೆ ಇದು ಕಪಲ್‌ ಶೋ ಅಲ್ಲ – ಆಚೆ ಬರ್ತಿದ್ದಂತೆ ಕ್ಲ್ಯಾರಿಟಿ ಕೊಟ್ಟ ಕಾವು!

Public TV
By Public TV
10 hours ago
Ind vs NZ 1
Cricket

ಭಾರತದ ನೆಲದಲ್ಲಿ ಫಸ್ಟ್‌ ಟೈಮ್‌ ಏಕದಿನ ಸರಣಿ ಗೆದ್ದ ಕಿವೀಸ್‌; ಚೇಸ್‌ ಮಾಸ್ಟರ್‌ ಶತಕದ ಹೋರಾಟ ವ್ಯರ್ಥ!

Public TV
By Public TV
10 hours ago
Kavya 01
Bengaluru City

BBK Season 12 | 3ನೇ ರನ್ನರ್‌ಅಪ್‌ ಕಾವ್ಯ ಶೈವ ಔಟ್‌ – ಸಿಕ್ಕ ಬಹುಮಾನ ಎಷ್ಟು?

Public TV
By Public TV
11 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?