ದರ್ಶನ್ ಬಿಡುಗಡೆಗಾಗಿ ಅವರ ಫ್ಯಾನ್ಸ್ ಮತ್ತು ಕುಟುಂಬ ಹಲವಾರು ದಿನಗಳಿಂದ ಕಾಯ್ತಿದ್ದಾರೆ. ದರ್ಶನ್ ಬಿಡುಗಡೆಗಾಗಿ ದೇವರ ಮೊರೆ ಕೂಡ ಹೋಗಿದ್ದಾರೆ. ನಾಡಿನ ಕೆಲ ಶಕ್ತಿ ದೇವತೆಗಳು ಬಿಡುಗಡೆಗಾಗಿ ಭವಿಷ್ಯ ನುಡಿದಿವೆ. ಈಗ ಮತ್ತೊಂದು ದೈವ ದರ್ಶನ್ ಬಿಡುಗಡೆಯ ಭವಿಷ್ಯ ನುಡಿದಿದ್ದು, ಕರಾರುವಕ್ಕಾದ ಸಮಯವನ್ನೂ ಅದು ಭವಿಷ್ಯ ನುಡಿದಿದೆ.
ಈವರೆಗೂ ದರ್ಶನ್ ಕುಟುಂಬ ಮತ್ತು ಫ್ಯಾನ್ಸ್ ಮಾತ್ರ ದೇವರ ಮೊರೆ ಹೋಗಿದ್ದರು. ಈಗ ಬೆಂಗಳೂರಿನ ದೇವಸ್ಥಾನವೊಂದರ ಅರ್ಚಕರೇ ದರ್ಶನ್ ಯಾವಾಗ ಬಿಡುಗಡೆಯಾಗ್ತಾರೆ ಅಂತ ದೈವ ಮೊರೆ ಹೋಗಿದ್ದಾರೆ. ಅವರು ಕುಟ್ಟೊ ಕಲ್ಲು ಮೂಲಕ ಬರೆದು ಹೇಳೋ ಭವಿಷ್ಯ ಕೇಳಿದ್ದಾರೆ.
ಬೆಂಗಳೂರಿನ ಬಾಪೂಜಿನಗರದ ಶಾರದಾಂಬೆ ದೇವಸ್ಥಾನದ ಅರ್ಚಕರ ಮಗಳಿಂದ ಭವಿಷ್ಯ ಹೇಳಿಸಲಾಗಿದ್ದು, ಎರಡು ತಿಂಗಳೊಳಗೆ ದರ್ಶನ್ ಬಿಡುಗಡೆಯಾಗ್ತಾರೆ ಅಂತ ಭವಿಷ್ಯ ನುಡಿಯಲಾಗಿದೆ. ಓಂ ಶಕ್ತಿ ಶಾರದಾಂಬೆಯೇ ಕಲ್ಲು ಮೂಲಕ ಭವಿಷ್ಯ ಬರೆಸಿದ್ದಾಗೆ ಹೇಳಿದ್ದಾರೆ ದೇವಸ್ಥಾನದ ಅರ್ಚಕರು.
ದರ್ಶನ್ ಮೀನಾ ರಾಶಿಯಲ್ಲಿದ್ದಾರೆ. ಟೈ ಸರಿಯಿಲ್ಲ. ಗ್ರಹಗತಿಗಳು ಸರಿಯಿಲ್ಲ. ಒಂದುವರೆ, ಎರಡು ತಿಂಗಳೊಳಗೆ ಜೈಲಿಂದ ಹೊರ ಬರ್ತಾರೆ. ಗುರುಬಲ ಇಲ್ಲ. ಕೆಟ್ಟ ದೆಸೆ ನಡೆಯುತ್ತಿದೆ. ಶನಿ ಮಹಾತ್ಮನು ಆಸ್ಥಾನದಲ್ಲಿ ಬಂದು ಕೂತಿದ್ದಾನೆ. ಆರ್ ಆರ್ ನಗರದ ದರ್ಶನ ನಿವಾಸಕ್ಕೆ ವಾಸ್ತು ದೋಷವಿದೆ. ಮನೆಯ ಮೂಲೆ ಸರಿಯಿಲ್ಲ ಅಂತ ಭವಿಷ್ಯ ನುಡಿದಿದೆ.