ಸಮಯ ಬಂದಾಗ ಸಿಎಂ ಬಹುಮತ ಸಾಬೀತು ಮಾಡ್ತಾರೆ: ಶ್ರೀಕಂಠೇ ಗೌಡ

Public TV
1 Min Read
SHRIKANTE GOWDA 1

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಬಹುಮತ ಇದೆ. ಸಮಯ ಬಂದಾಗ ಸಿಎಂ ಅವರು ಬಹುಮತ ಸಾಬೀತು ಮಾಡುತ್ತಾರೆ ಎಂದು ಜೆಡಿಎಸ್ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ರಾಜ್ಯಪಾಲರು ಈಗಲೇ ಬಹುಮತ ಸಾಬೀತು ಮಾಡಬೇಕು ಎಂದು ಆತುರ ಪಡುತ್ತಿದ್ದಾರೆ. ಬಿಜೆಪಿಯವರಿಗೆ ಸರ್ಕಾರ ರಚನೆ ಮಾಡಬೇಕು ಅನ್ನೋ ಆತುರ ಹೆಚ್ಚಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

CM HD KUMARASWAMY a

ಅಧಿವೇಶನದಲ್ಲಿ ರಾಜ್ಯಪಾಲರು ಸುಮ್ಮನೆ ಹಸ್ತಕ್ಷೇಪ ಮಾಡಬಾರದು. ಸರ್ಕಾರಕ್ಕೆ ಬಹುಮತ ಇದೆ. ಅಗತ್ಯ ಬಿದ್ದಾಗ ಸಿಎಂ ಬಹುಮತ ಸಾಬೀತು ಮಾಡುತ್ತಾರೆ. ಬಹುಮತ ಪ್ರಕ್ರಿಯೆ ಪ್ರಾರಂಭ ಆಗಿದೆ. ಸಮಯ ಬಂದಾಗ ಬಹುಮತವನ್ನು ಸಿಎಂ ಸಾಬೀತು ಮಾಡುತ್ತಾರೆ ಎಂದಿದ್ದಾರೆ.

SHRIKANTE GOWDA

ಬಿಜೆಪಿ ಬಳಿ ಬಹುಮತ ಇದ್ದರೆ ಯಾಕೆ ಆತಂಕ ಪಡಬೇಕು. ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ವಿಪ್ ಬಗ್ಗೆಯೇ ಗೊಂದಲ ಇದೆ. ಇದರ ನಿವಾರಣೆ ಆಗಬೇಕು. ಸರ್ಕಾರಕ್ಕೆ ಬಹುಮತ ಇದೆ. ಮತ್ತೆ ಬಹುಮತ ಸಾಬೀತು ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *