ಕರ್ನಾಟಕದ 4 ದಿಕ್ಕುಗಳ ರಥಯಾತ್ರೆಗೆ ಬಿಜೆಪಿ ಬ್ಲೂಪ್ರಿಂಟ್ ಏನು? ಯಾರು ಯಾವ ಕಡೆ!?

Public TV
1 Min Read
bjp flag

ಬೆಂಗಳೂರು: ಉತ್ತರ ಪ್ರದೇಶದ (Uttara Pradesh ಮಾದರಿಯಲ್ಲೇ ಕರ್ನಾಟಕ (Karnataka) ಬಿಜೆಪಿ (BJP) ಚುನಾವಣೆಗೆ (Election) ಅಖಾಡಕ್ಕೆ ಇಳಿಯುತ್ತಿದೆ. ಉತ್ತರ ಪ್ರದೇಶದ ರೀತಿಯಲ್ಲೇ ಚುನಾವಣಾ ರಥಯಾತ್ರೆಗೆ ಬಿಜೆಪಿ ಹೈಕಮಾಂಡ್ ಮೆಗಾ ಪ್ಲ್ಯಾನ್ ಮಾಡಿದೆ. ದೆಹಲಿಯಲ್ಲಿ (Delhi) ನಡೆದ ಕಾರ್ಯಕಾರಿಣಿಯಲ್ಲಿ ಕೊಟ್ಟ ಟಾಸ್ಕ್ ರಥಯಾತ್ರೆ. ಹಾಗಾಗಿ ಫೆಬ್ರವರಿ ಕಡೆ ವಾರದಿಂದ ಕರ್ನಾಟಕದ 4 ದಿಕ್ಕುಗಳಲ್ಲಿ ಬಿಜೆಪಿ ವಿಜಯ ರಥಯಾತ್ರೆ ನಡೆಯಲಿದೆ.

ಅಂದಹಾಗೆ ಕರ್ನಾಟಕದ ಎಲ್ಲ ವಿಭಾಗಗಳನ್ನು ಕವರ್ ಮಾಡಲು ರಾಜ್ಯ ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ. ಬೆಳಗಾವಿ, ಕಲಬುರಗಿ, ಮಂಗಳೂರು, ಬೆಂಗಳೂರು (Bengaluru) ಕಡೆಗಳಿಂದ ರಥಯಾತ್ರೆಗೆ ಬಿಜೆಪಿ ಬ್ಲೂಪ್ರಿಂಟ್ ತಯಾರಿಸುತ್ತಿದೆ. ಏಕಕಾಲಕ್ಕೆ 4 ದಿಕ್ಕುಗಳಿಂದಲೂ 10 ದಿನಗಳ ಕಾಲ ರಥಯಾತ್ರೆಗೆ ಬ್ಲೂಪ್ರಿಂಟ್ ರೆಡಿಯಾಗುತ್ತಿದ್ದು, 4 ದಿಕ್ಕುಗಳಲ್ಲಿಯೂ ಕೇಂದ್ರದ ನಾಯಕರೊಬ್ಬರು, ರಾಜ್ಯದ ನಾಯಕರೊಬ್ಬರ ನೇತೃತ್ವದಲ್ಲಿ ರಥಯಾತ್ರೆ ನಡೆಯುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಕಲಬುರಗಿ ಕಾರ್ಯಕ್ರಮಕ್ಕೆ ಬಂದು ಹೋದ ಬಳಿಕ ರಥಯಾತ್ರೆಯ ಕಾರ್ಯಕ್ರಮ ಪಟ್ಟಿ ಅಂತಿಮ ಆಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ರೈಲ್ವೆಯಲ್ಲಿ ಕೆಲಸ ಸಿಗದಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ

NARENDRA MODI 1

ಫೆಬ್ರವರಿ ಮೂರನೇ ವಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಸದ್ಯಕ್ಕೆ ಶಿವರಾತ್ರಿ ಹಿಂದಿನ ದಿನ ಫೆಬ್ರವರಿ 17ರಂದು ಬಜೆಟ್ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ದಿನಾಂಕವನ್ನು ಕಾಯ್ದಿರಿಸಿದ್ದಾರೆ. ಒಂದು ವಾರ ಬಜೆಟ್ ಅಧಿವೇಶನ ನಡೆಯಲಿದ್ದು, ಅಧಿವೇಶನದ ಬಳಿಕ ಬಿಜೆಪಿ ನಾಯಕರು ರಥಯಾತ್ರೆ ನಡೆಸಲಿದ್ದು, ಬಜೆಟ್ ಮುಗಿದ ಬಳಿಕ ಜನರ ಬಳಿಗೆ ತೆರಳಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ದುರಹಂಕಾರಕ್ಕೆ ನಾನು ಅವನ ಹಿಂದೆ ಹೋಗಿದ್ದೆ: ಗಾಯಾಳು

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *