Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Latest

ಗಗನಯಾತ್ರಿಗಳ ಆರೋಗ್ಯದ ಮೇಲೆ ಬಾಹ್ಯಾಕಾಶ ಪ್ರಯಾಣದ ಪರಿಣಾಮಗಳೇನು? – ಪರಿಹಾರವೇನು?

Public TV
Last updated: March 24, 2025 10:20 pm
Public TV
Share
4 Min Read
Sunita Williams 1
SHARE

ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ʻನಾಸಾʼದ (NASA) ಗಗನಯಾತ್ರಿಗಳಾದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ (Sunita Williams) ಮತ್ತು ಬುಚ್‌ ವಿಲ್ಮೋರ್‌ ಭೂಮಿಗೆ ಸುರಕ್ಷಿತವಾಗಿ ಮರಳಿದ್ದು ಇಡೀ ದೇಶವೇ ಸಂಭ್ರಮಿಸಬೇಕಾದ ಸಂಗತಿ. 8 ದಿನಗಳ ಕಾರ್ಯಾಚರಣೆಗೆಂದು ತೆರಳಿದ್ದ ಇವರು ತಾಂತ್ರಿಕ ದೋಷದಿಂದಾಗಿ ಸುಮಾರು 286 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಉಳಿಯಬೇಕಾಗಿತ್ತು. ಅದ್ರೆ ಇವರನ್ನು ಹೊತ್ತಿದ್ದ ಸ್ಪೇಸ್‌ಎಕ್ಸ್‌ ಸಂಸ್ಥೆಯ ಕ್ಯಾಪ್ಸೂಲ್‌ ಫ್ಲೋರಿಡಾದ ಸಮುದ್ರದಲ್ಲಿ ಜಲಸ್ಪರ್ಧ ಮಾಡಿರುವುದು ಸುದೀರ್ಘ ಅವಧಿಯಿಂದ ಮನೆ ಮಾಡಿದ್ದ ಅನಿಶ್ಚಿತತೆಯೊಂದನ್ನು ಕೊನೆಗೊಳಿಸಿದೆ. ಹಾಗಾದ್ರೆ ಭೂಮಿಗೆ ಬಂದ ನಂತ್ರ ಮುಂದೇನು? ತಕ್ಷಣಕ್ಕೆ ಸಹಜ ಜೀವನ ನಡೆಸಬಹುದೇ? ಅವರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು? ಅದಕ್ಕೆ ಪರಿಹಾರ ಏನು? ಅನ್ನೋದೇ ಪ್ರಶ್ನೆ..

Sunita Williams Butch Wilc 1742334977887 1742334978118

ನಾವು ಗಗನಯಾತ್ರೆ ಎಂದಾಕ್ಷಣ ಸಾಮಾನ್ಯರ ಮನಸ್ಸಿನಲ್ಲಿ ಏನೋ ಒಂದು ಕೌತುಕ, ಮನಸ್ಸಿನಲ್ಲಿ ತಮ್ಮದೇ ಕಲ್ಪನೆ. ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲಿ (Space) ಹಕ್ಕಿಯಂತೆ ಹಾರಾಡುವ ಅದ್ಭುತವೇ ಸರಿ. ಆದ್ರೆ ಬಾಹ್ಯಾಕಾಶದಲ್ಲಿ ಹಕ್ಕಿಗಳಂತೆ ಹಾರಾಡಿ ಮತ್ತು ಮನುಷ್ಯ ಸಹಜ ಜೀವನಕ್ಕೆ ತೆರೆದುಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆಂದೇ ಸೂಕ್ತ ಮಾರ್ಪಾಡುಗಳನ್ನ ಮಾಡಿಕೊಳ್ಳಬೇಕಾಗುತ್ತೆ.

ಹೌದು. ಬಾಹ್ಯಾಕಾಶ ಪ್ರಯಾಣ ಕೈಗೊಂಡ ಬಳಿಕ, ಗಗನಯಾತ್ರಿಗಳು ಬಾಹ್ಯಾಕಾಶದ ಕನಿಷ್ಠ ಗುರುತ್ವಾಕರ್ಷಣೆಯ (Gravity) ಕಾರಣದಿಂದ ಒಂದಷ್ಟು ಆರೋಗ್ಯ ಸಂಬಂಧಿ ವಿಚಾರಗಳು (Health Issues) ಹಾಗೂ ಶಾರೀರಿಕ ಬದಲಾವಣೆಗಳನ್ನ ಎದುರಿಸುವ ಸಾಧ್ಯತೆಗಳಿವೆ. ಅದರಲ್ಲಿನ ಕೆಲವು ಪರಿಸ್ಥಿತಿಗಳನ್ನ ನಾವಿಲ್ಲಿ ಕಾಣಬಹುದು.

Sunita Williams

ಮೂಳೆಗಳು ಬಲಹೀನವಾಗುತ್ತವೆ:
ಬಾಹ್ಯಾಕಾಶ ಪ್ರಯಾಣದ ಸಂದರ್ಭದಲ್ಲಿ ದೀರ್ಘಕಾಲದ ತನಕ ಕನಿಷ್ಠ ಗುರುತ್ವಾಕರ್ಷಣೆಗೆ ಒಳಗಾಗುವುದು ಸ್ನಾಯು ಕ್ಷೀಣತೆಯ ಸಮಸ್ಯೆ ಉಂಟುಮಾಡಬಲ್ಲದು. ಅಂದರೆ, ಕಡಿಮೆ ದೈಹಿಕ ಚಟುವಟಿಕೆಗಳ ಕಾರಣದಿಂದ ಸ್ನಾಯುಗಳ ಅಂಗಾಂಶಗಳು ಕ್ರಮೇಣ ಕಡಿಮೆಯಾಗಿ, ಶಕ್ತಿ ಕಳೆದುಕೊಳ್ಳುತ್ತವೆ.

ಗಗನಯಾತ್ರಿಗಳು (Astronauts) ಸಾಮಾನ್ಯವಾಗಿ ಈ ಸಮಸ್ಯೆಯನ್ನ ಎದುರಿಸಿ, ಭೂಮಿಗೆ ಮರಳಿದ ಬಳಿಕ, ಸ್ನಾಯು ಭಾರ ಮತ್ತು ಶಕ್ತಿಯನ್ನ ಮರಳಿ ಪಡೆಯಲು ದೈಹಿಕ ಪುನರ್ವಸತಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸ್ನಾಯು ಕ್ಷೀಣತೆಯ ಕಾರಣದಿಂದ, ದುರ್ಬಲತೆ ಮತ್ತು ಚಲನಹೀನತೆ ಉಂಟಾಗಬಹುದು. ಇದನ್ನ ಎದುರಿಸಲು, ಗಗನಯಾತ್ರಿಗಳು ದೈಹಿಕ ಚಿಕಿತ್ಸೆ, ಶಕ್ತಿ ತರಬೇತಿ ಹಾಗೂ ನಿರಂತರ ವ್ಯಾಯಾಮ ನಡೆಸುತ್ತಾರೆ. ಅದರೊಂದಿಗೆ ಮೂಳೆಯ ಸಾಂದ್ರತೆ ಕಳೆದುಕೊಳ್ಳುವುದು ಬಾಹ್ಯಾಕಾಶದಲ್ಲಿ ಇನ್ನೊಂದು ಕಳವಳಕಾರಿ ವಿಚಾರ. ಇದರಿಂದಾಗಿ ಮೂಳೆಗಳು ಬಲಹೀನವಾಗುತ್ತವೆ. ಗಗನಯಾತ್ರಿಗಳು ಇದನ್ನ ಎದುರಿಸಲು ನಿಯಮಿತ ವ್ಯಾಯಾಮ, ಉತ್ತಮ ಪೋಷಕಾಂಶಗಳ ಸೇವನೆಯಂತಹ ಕ್ರಮಗಳನ್ನ ಕೈಗೊಳ್ಳುತ್ತಾರೆ.

Heart Disease

ಹೃದಯ ಬಡಿತ ಹೆಚ್ಚಾಗುತ್ತೆ, ತಲೆ ಸುತ್ತು ಜಾಸ್ತಿಯಾಗುತ್ತೆ:
ಬಾಹ್ಯಾಕಾಶ ಪ್ರಯಾಣ ಗಗನಯಾತ್ರಿಗಳಲ್ಲಿ ಆರ್ಥೋಸ್ಟಾಟಿಕ್ ಇಂಟಾಲರೆನ್ಸ್ (ಮಾನಸಿಕ ಅಸಹಿಷ್ಣುತೆ) ಸೇರಿದಂತೆ, ಹೃದಯದ ರಕ್ತನಾಳದ ಬದಲಾವಣೆಗಳನ್ನ ತರಬಲ್ಲದು. ಇದರ ಪರಿಣಾಮವಾಗಿ ಅವರಲ್ಲಿ ಕುಳಿತಲ್ಲಿಂದ ಅಥವಾ ಮಲಗಿದಲ್ಲಿಂದ ಎದ್ದು ನಿಲ್ಲುವಾಗ ತಲೆಸುತ್ತು, ಮೂರ್ಛೆ ಹೋಗುವುದು ಅಥವಾ ಹೃದಯ ಬಡಿತ ಪ್ರಮಾಣ ಹೆಚ್ಚಳ ಕಂಡುಬರಬಹುದು. ಈ ಪರಿಸ್ಥಿತಿ ರಕ್ತದೊತ್ತಡದ ನಿಯಂತ್ರಣದಲ್ಲಿನ ಬದಲಾವಣೆ ಹಾಗೂ ಸ್ವಯಂಚಾಲಿತ ನರಮಂಡಲದ ಕಾರ್ಯಾಚರಣೆಯ ಕಾರಣದಿಂದ ಉಂಟಾಗಬಹುದು. ಇದರ ಚಿಕಿತ್ಸೆ ಸಾಮಾನ್ಯವಾಗಿ ಜೀವನಶೈಲಿಯಲ್ಲಿನ ಬದಲಾವಣೆ, ಹೆಚ್ಚಿನ ದ್ರವ ಆಹಾರ ಮತ್ತು ಉಪ್ಪಿನ ಸೇವನೆ, ಸಂಕೋಚನ ವಸ್ತ್ರಗಳನ್ನು ಧರಿಸುವುದು (ದೇಹಕ್ಕೆ ಆರಾಮದಾಯಕ ಹಾಗೂ ಸುರಕ್ಷಿತ ಅನ್ನಿಸುವ ಉಡುಪುಗಳು) ಮತ್ತು ಕೆಲವು ಸಂದರ್ಭಗಳಲ್ಲಿ ಸುಗಮವಾಗಿ ಎದ್ದು ನಿಲ್ಲುವಂತಾಗಲು ಔಷಧೀಯ ಕ್ರಮಗಳನ್ನೂ ಒಳಗೊಂಡಿರುತ್ತದೆ.

ಜೊತೆಗೆ ಮಾಂಸ ಖಂಡಗಳು, ಕಾರ್ಡಿಯೋ ವಾಸ್ಕುಲರ್‌ ಸಿಸ್ಟಮ್‌ ಭೂಮಿಗೆ ಹೊಂದಿಕೊಳ್ಳುವಂತೆ ಸರಿಪಡಿಸಬೇಕಾಗುತ್ತದೆ. ಇದು ಭೂಮಿಗೆ ಮರಳಿದ ನಂತರ ಸಾಮಾನ್ಯ ಜೀವನಕ್ಕೆ ಕರೆತರುವುದು ಕನಿಷ್ಠ 6 ತಿಂಗಳು ಬೇಕಾಗಬಹುದು ಎನ್ನುತ್ತಾರೆ ಭೌತ ವಿಜ್ಞಾನ ಪ್ರಾಧ್ಯಾಪಕಿ ವೈ.ಸಿ ಕಮಲಾ.

EYE READER POLICE 2

ದೃಷ್ಟಿಯ ಬದಲಾವಣೆಗಳು:
ಕೆಲವು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಣ್ಣಿನ ಸಮಸ್ಯೆಗಳನ್ನೂ ಎದುರಿಸುತ್ತಾರೆ. ಉದಾಹರಣೆಗೆ ಕಣ್ಣುಗಳಲ್ಲಿ ದ್ರವದ ಬದಲಾವಣೆಗಳು ದೃಷ್ಟಿಯನ್ನು ದುರ್ಬಲಗೊಳಿಸಬಹುದು. ಈ ಸ್ಥಿತಿಯನ್ನು ಸ್ಪೇಸ್ ಫ್ಲೈಟ್-ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್ (ಎಸ್ಎಎನ್ಎಸ್) ಎಂದು ಕರೆಯಲಾಗುತ್ತದೆ.

ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವಿದೆ:
ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಅಧಿಕ ಮಟ್ಟದ ಕಾಸ್ಮಿಕ್ ವಿಕಿರಣಕ್ಕೆ ಒಡ್ಡಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ, ಕಾಲಾನಂತರದಲ್ಲಿ ಕ್ಯಾನ್ಸರ್ ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯವು ಹೆಚ್ಚಾಗಿರುತ್ತದೆ.

ಮಾನಸಿಕ ಪರಿಣಾಮಗಳೇನು?
ಬಾಹ್ಯಾಕಾಶ ಯಾತ್ರೆಯು ಏಕಾಂತತೆ, ಬಂಧನದ ಭಾವ ಮೂಡಿಸುತ್ತದೆ ಮತ್ತು ಇದರಿಂದ ಉಂಟಾಗುವ ಒತ್ತಡವು ಮನಸ್ಥಿತಿಯಲ್ಲಿ ಬದಲಾವಣೆ ಉಂಟುಮಾಡಿ, ಆತಂಕ ಮತ್ತು ಖಿನ್ನತೆಯಂತಹ ಕೆಲವು ಮಾನಸಿಕ ಸಮಸ್ಯೆಗಳನ್ನ ತಂದೊಡ್ಡಬಹುದು.

ರೋಗನಿರೋಧಕ ಶಕ್ತಿ ಕುಗ್ಗಿಸುತ್ತೆ:
ಬಾಹ್ಯಾಕಾಶ ಯಾನವು ರೋಗನಿರೋಧಕ ವ್ಯವಸ್ಥೆಯನ್ನು ಬಹುತೇಕ ದುರ್ಬಲಗೊಳಿಸಿ, ಗಗನಯಾತ್ರಿಗಳನ್ನು ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿಸುತ್ತದೆ.

Astronaut Sunita Williams Has Lost A Lot Of Weight Sparking Health Concerns

ವೆಸ್ಟಿಬ್ಯುಲರ್ ಸಮಸ್ಯೆಗಳು:
ಒಳಗಿವಿಯ ಸಮತೋಲನ ವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು ಬಾಹ್ಯಾಕಾಶ ಯಾನದ ಸಮಯದಲ್ಲಿ ಮತ್ತು ಆಮೇಲೂ ದಿಕ್ಕು ತಪ್ಪಿಸುವಿಕೆ ಮತ್ತು ಚಲನೆಯಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.

ಈ ಎಲ್ಲ ಆರೋಗ್ಯ ಸಮಸ್ಯೆಗಳನ್ನ ನಿಯಂತ್ರಿಸಲು, ಗಗನಯಾತ್ರಿಗಳು ತಮ್ಮ ಕಾರ್ಯಾಚರಣೆಗೆ ಪೂರ್ವದಲ್ಲಿ ಹಾಗೂ ಪೂರ್ಣಗೊಂಡ ಮೇಲೆ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನಗಳಿಗೆ ಒಳಗಾಗುತ್ತಾರೆ. ಜೊತೆಗೆ ಸೂಕ್ಷ್ಮ ಗುರುತ್ವಾಕರ್ಷಣೆಯ ನಕಾರಾತ್ಮಕ ಪರಿಣಾಮಗಳನ್ನ ಕಡಿಮೆ ಮಾಡಲು ತಮ್ಮ ಕಾರ್ಯಗಳ ಸಮಯದಲ್ಲೂ ಅವರು ವ್ಯಾಯಾಮ ಮತ್ತು ಪುನರ್ವಸತಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ಅಲ್ಲದೇ, ಬಾಹ್ಯಾಕಾಶ ಯಾನಕ್ಕೆ ಸಂಬಂಧಿಸಿದ ಈ ಆರೋಗ್ಯ ಸವಾಲುಗಳನ್ನ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ಪರಿಹರಿಸಲು ಅನೇಕ ಸಂಶೋಧನೆಗಳು ಪ್ರಗತಿಯಲ್ಲಿವೆ.

ಮಾಹಿತಿ:
ಸುಂದರ್‌, ಭೌತ ವಿಜ್ಞಾನಿ
ವೈ.ಸಿ ಕಮಲಾ, ಭೌತ ವಿಜ್ಞಾನ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು
ಗಿರೀಶ್‌ ಲಿಂಗಣ್ಣ, ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕರು

ಲೇಖನ: ಮೋಹನ ಬಿ.ಎಂ

TAGGED:AstronautsGravityNASASunita WilliamsUSAಅಮೆರಿಕಗಗನಯಾತ್ರಿಗಳು ಆರೋಗ್ಯನಾಸಾಸುನಿತಾ ವಿಲಿಯಮ್ಸ್
Share This Article
Facebook Whatsapp Whatsapp Telegram

Cinema Updates

Chaitra Kundapura Husband 1
Exclusive: ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಚೈತ್ರಾ‌ ಕುಂದಾಪುರ
7 hours ago
daali dhananjay
ಆಪರೇಷನ್ ಸಿಂಧೂರ: ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ- ಡಾಲಿ
10 hours ago
amrutha prem
ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿಗೆ ಬೇಡಿಕೆ- ನಟಿಗೆ ಬಿಗ್ ಚಾನ್ಸ್
10 hours ago
chaithra kundapura 1
12 ವರ್ಷಗಳ ಪ್ರೀತಿ- ಮೇ 9ರಂದು ಚೈತ್ರಾ ಕುಂದಾಪುರ ಮದುವೆ
11 hours ago

You Might Also Like

terrorist
Latest

ಸಾಂಬಾದಲ್ಲಿ ಹಲವು ಪಾಕ್ ಉಗ್ರರ ಹತ್ಯೆ

Public TV
By Public TV
4 hours ago
Amith Shah
Latest

ಗಡಿ, ಏರ್‌ಪೋರ್ಟ್‌ಗಳ ಭದ್ರತೆ ಪರಿಶೀಲನೆ – ಉನ್ನತ ಅಧಿಕಾರಿಗಳೊಂದಿಗೆ ಅಮಿತ್‌ ಶಾ ಚರ್ಚೆ

Public TV
By Public TV
4 hours ago
F 16 supersonic fighter jet
Latest

ಪಾಕ್‌ನ ಪ್ರಮುಖ ಎಫ್‌-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ

Public TV
By Public TV
4 hours ago
Pakistan Attack
Latest

ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌

Public TV
By Public TV
5 hours ago
srinagar airport
Latest

ಪಾಕ್‌ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತದ 24 ಏರ್‌ಪೋರ್ಟ್‌ಗಳು ಬಂದ್‌

Public TV
By Public TV
5 hours ago
Shehbaz Sharif
Latest

ಪಾಕ್‌ ಪ್ರಧಾನಿ ಮನೆ ಬಳಿಯೇ ದಾಳಿ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?