ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli), ವೈಜಾಗ್ನ ಸಿಂಹಾಚಲಂ ದೇವಸ್ಥಾನದಲ್ಲಿ ವರಾಹ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಏಕದಿನ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಎರಡು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 302 ರನ್ ಗಳಿಸಿದರು. ಇದನ್ನೂ ಓದಿ: 3rd ODI: ಜೈಸ್ವಾಲ್ ಶತಕ, ರೋ-ಕೊ ಆಕರ್ಷಕ ಫಿಫ್ಟಿ – ಆಫ್ರಿಕಾ ವಿರುದ್ಧ 9 ವಿಕೆಟ್ಗಳ ಜಯ; ಸರಣಿ ಭಾರತ ಕೈವಶ
ಕೊನೆಯ ಏಕದಿನ ಪಂದ್ಯದಲ್ಲಿ ಕೊಹ್ಲಿ ಅಜೇಯ 65 ರನ್ ಗಳಿಸಿ 271 ರನ್ಗಳ ಗುರಿ ಬೆನ್ನಟ್ಟಿದ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ಯಶಸ್ವಿ ಜೈಸ್ವಾಲ್ 116 ರನ್ ಮತ್ತು ರೋಹಿತ್ ಶರ್ಮಾ 75 ರನ್ ಗಳಿಸಿ ಸುಲಭ ಗೆಲುವಿಗೆ ಕೊಡುಗೆ ನೀಡಿದರು.
ವೈಜಾಗ್ ಪಂದ್ಯಕ್ಕೂ ಮುನ್ನ, ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಗಂಭೀರ್ ತಮ್ಮ ಕಾರ್ಯತಂತ್ರ ಮೂಲಕ ಭಾರತವು ನಿರ್ಣಾಯಕ ಪಂದ್ಯದಲ್ಲಿ 9 ವಿಕೆಟ್ಗಳ ದೊಡ್ಡ ಗೆಲುವು ಸಾಧಿಸಲು ನೆರವಾದರು. ಇದನ್ನೂ ಓದಿ: ಕೊಹ್ಲಿ ಶತಕದಾಟ – ರೋಚಕ ಪಂದ್ಯದಲ್ಲಿ ಗೆದ್ದ ಭಾರತ, ಸರಣಿ 1-0 ಮುನ್ನಡೆ

