ಹೊಸ ನಾಡ ಧ್ವಜ ವಿನ್ಯಾಸಕ್ಕೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ

vatal flagnew

ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಸ ನಾಡ ಧ್ವಜ ವಿನ್ಯಾಸಕ್ಕೆ ಸಿದ್ಧತೆ ನಡೆದಿದ್ದು, ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.

Vatal Nagraj

ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಸರ್ಕಾರಕ್ಕೆ ಧ್ವಜ ಬದಲಾವಣೆ ಕೆಲಸ ಬೇಕಾಗಿಲ್ಲ. ಹಳೆ ಧ್ವಜಕ್ಕೆ ಮತ್ತೆ ಬಿಳಿ ಬಟ್ಟೆ ಹಾಕಿಸಿ ಗಂಡಭೇರುಂಡ ಚಿಹ್ನೆ ಹಾಕಿದ್ದಾರೆ. ಇದ್ರಿಂದ ಏನು ಪ್ರಯೋಜನ? ಸಮಿತಿಯವರಿಗೆ ತಲೆ ಇಲ್ವಾ ಎಂದು ಪ್ರಶ್ನಿಸಿದ್ರು.

karnataka flag design

ಸಮಿತಿಯಲ್ಲಿರುವವರಿಗೆ ಎಲ್ಲರಿಗೂ ಸ್ವಪ್ರತಿಷ್ಟೆ. ಸಾಹಿತ್ಯ ಪರಿಷತ್‍ನವರಿಗೆ ಏನೂ ಗೊತ್ತಿಲ್ಲ. ನಾಡಿನ ಜನರ ಮನಸಿನಲ್ಲಿರುವ ಬಾವುಟ ಹಳದಿ ಕೆಂಪು. ನಿಮ್ಮ ಹೊಸ ವಿನ್ಯಾಸ ನಾವು ಒಪ್ಪಿಕೊಳ್ಳಲ್ಲ ಎಂದರು. ಕಮಿಟಿಯಲ್ಲಿ ನಮ್ಮನ್ನು ಹಾಕಬೇಕಾಗಿತ್ತು. ಆದ್ರೆ ನಮ್ಮನ್ನು ಕಮಿಟಿಯಿಂದ ದೂರ ಇಟ್ಟಿದ್ದಾರೆ. ಸರ್ಕಾರ ಹೊಸ ಧ್ವಜ ತಂದ್ರೂ ನಾವು ಬಿಡಲ್ಲ. ಈ ಧ್ವಜ ತಂದ್ರೆ ಕನ್ನಡಿಗರು ದಂಗೆ ಏಳ್ತಾರೆ. ಸಮಿತಿಯವರಿಗೆ ಒಬ್ಬರಿಗೂ ಬುದ್ಧಿಯಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಿಗೆ ಕನ್ನಡ ಧ್ವಜದ ಇತಿಹಾಸ ಗೊತ್ತಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

CM 4

Comments

Leave a Reply

Your email address will not be published. Required fields are marked *