ಬೆಂಗಳೂರು: ಲೋಕಸಭಾ ಚುನಾಚಣೆಗೆ ಎಲ್ಲ ಕ್ಷೇತ್ರದಲ್ಲೂ ಭರ್ಜರಿಯಾಗಿ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ವಾಟಾಳ್ ನಾಗರಾಜ್ ಅವರು ಚಪ್ಪಲಿ ಹಿಡಿದು ವಿಶಿಷ್ಟವಾಗಿ ಪ್ರಚಾರ ಮಾಡಿ ಸುದ್ದಿಯಾಗಿದ್ದಾರೆ.
ಮತಯಾಚನೆ ಮಾಡುವ ವೇಳೆ ಕೈಯಲ್ಲಿ ಒಂದು ಜೊತೆ ಚಪ್ಪಲಿ ಹಿಡಿದು ಉರುಳು ಸೇವೆ ಮಾಡುವ ಮೂಲಕ ವಿಭಿನ್ನವಾಗಿ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದ್ದಾರೆ.
ಇಂದು ವಾಟಾಳ್ ನಾಗರಾಜ್ ಕೆ.ಆರ್.ಮಾರ್ಕೆಟ್ ಮುಂಭಾಗದಲ್ಲಿ ಮತಯಾಚನೆ ಮಾಡಲು ಹೋಗಿದ್ದಾರೆ. ಈ ವೇಳೆ ತಮ್ಮ ಗುರುತಾದ ಚಪ್ಪಲಿ ಹಿಡಿದುಕೊಂಡು ಉರುಳು ಸೇವೆ ಮಾಡಿದ್ದಾರೆ. ಬಳಿಕ ಮಾತನಾಡಿದ ವಾಟಾಳ್, ಈಗಿರುವ ಸದಸ್ಯರು ಕರ್ನಾಟಕದ ಪರವಾಗಿ ಧ್ವನಿಯೆತ್ತಿ ಮಾತನಾಡಲಿಲ್ಲ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಆ ದೃಷ್ಟಿಯಿಂದ ನಾನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿಂತಿದ್ದೇನೆ. ಇಲ್ಲಿನ ಜನರು ನನಗೆ ಮತಹಾಕಿ ಗೆಲ್ಲಿಸುತ್ತಾರೆ, ನನ್ನ ಗೆಲವು ಖಚಿತವಾಗಿದೆ ಎಂದರು.
28 ಸದ್ಯಸರು ಒಂದೇ, ಈ ವಾಟಾಳ್ ನಾಗರಾಜ್ ಒಂದೇ. ನಾನು ಗೆದ್ದರೆ ಲೋಕಸಭೆಯಲ್ಲಿ ಕನ್ನಡ ಪರವಾಗಿ, ಕನ್ನಡಿಗರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.