ಬಾಲಿವುಡ್ ಬೆಡಗಿ ಕೀರ್ತಿ ಸುರೇಶ್ (Keerthy Suresh) ನಟಿಸಿರುವ ಬಾಲಿವುಡ್ ಸಿನಿಮಾ ‘ಬೇಬಿ ಜಾನ್’ ರಿಲೀಸ್ಗೆ ಸಜ್ಜಾಗಿದೆ. ಈ ಹಿನ್ನೆಲೆ ಚಿತ್ರತಂಡದ ಜೊತೆ ಮಹಾಕಾಳೇಶ್ವರ ಟೆಂಪಲ್ಗೆ (Mahakaleshwara Temple) ನಟಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ಗೆ ಖಾಕಿ ಫುಲ್ ಡ್ರಿಲ್- ಪೊಲೀಸರಿಂದ ಪ್ರಶ್ನೆಗಳ ಸುರಿಮಳೆ
ಬಾಲಿವುಡ್ ನಟ ವರುಣ್ ಧವನ್ (Varun Dhawan) ಜೊತೆಗಿನ ಸಿನಿಮಾ ಡಿ.25ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಕೀರ್ತಿ ಸುರೇಶ್ ಆ್ಯಂಡ್ ಟೀಮ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟಿಸಿರುವ ಮೊದಲ ಬಾಲಿವುಡ್ ಸಿನಿಮಾಗೆ ಸಕ್ಸಸ್ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
View this post on Instagram
ಅಂದಹಾಗೆ, ‘ಬೇಬಿ ಜಾನ್’ ಚಿತ್ರವು ತಮಿಳಿನ ರಿಮೇಕ್ ತೇರಿ ಚಿತ್ರದಾಗಿದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್ ಮತ್ತು ಸಮಂತಾ ನಟಿಸಿದರು. ಈ ಚಿತ್ರದ ಸೂಪರ್ ಸಕ್ಸಸ್ ಕಂಡಿತ್ತು. ಇದೇ ಚಿತ್ರವನ್ನು ‘ಜವಾನ್’ ಡೈರೆಕ್ಟರ್ ಅಟ್ಲಿ ಹಿಂದಿ ವರ್ಷನ್ನಲ್ಲಿ ಹೊಸ ಜೋಡಿಯ ಮೂಲಕ ಹೇಳಲು ಹೊರಟಿದ್ದಾರೆ. ಇದೇ ಡಿ.25ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ‘ಮಹಾನಟಿ’ ಕೀರ್ತಿಗೆ ಈ ಚಿತ್ರದ ಮೂಲಕ ಬ್ರೇಕ್ ಸಿಗುತ್ತಾ? ಎಂದು ಕಾದುನೋಡಬೇಕಿದೆ.