ಉಪೇಂದ್ರ ಹೊಸ ಸಿನಿಮಾ ಮುಹೂರ್ತ : ಸುದೀಪ್, ಶಿವಣ್ಣ, ಧನಂಜಯ್ ಮತ್ತು ವಸಿಷ್ಠ ಸಿಂಹ ಹೇಳಿದ್ದೇನು?

Public TV
2 Min Read
FotoJet 1 6

ಪೇಂದ್ರ ನಟಿಸಿ, ನಿರ್ದೇಶನದ ಮಾಡುತ್ತಿರುವ ಹೊಸ ಸಿನಿಮಾ ಮುಹೂರ್ತ ಬೆಂಗಳೂರಿನ ಬಂಡೆಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಈ ಸಮಾರಂಭಕ್ಕೆ ಅತಿಥಿಗಳಾಗಿ ಹಿರಿಯ ನಟರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಆಗಮಿಸಿದ್ದರು. ಸಿನಿಮಾ ಮತ್ತು ಉಪೇಂದ್ರ ಕುರಿತಾಗಿ ಅತಿಥಿಗಳು ಮನದುಂಬಿ ಹಾರೈಸಿದರು. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

FotoJet 9

ಶಿವರಾಜ್ ಕುಮಾರ್ ಮಾತನಾಡಿ, “ನಾನು ಉಪ್ಪಿಯನ್ನು ಸಾಕಷ್ಟು ದಿನದಿಂದ ನೋಡಿದ್ದೀನಿ. ಉಪೇಂದ್ರ ಮತ್ತು ನಾನು ಒಂದು ರೀತಿಯಲ್ಲಿ ಬಾಯ್ ಫ್ರೆಂಡ್ ತರಹ. ಉಪೇಂದ್ರ ನಿರ್ದೇಶನದ ನಾನು ನಟಿಸಿರುವ ಓಂ ಸಿನಿಮಾ ನನ್ನ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್. ಏಳು ವರ್ಷದ ನಂತರ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹಾಗಾಗಿ ಸಿನಿಮಾ ವಿಭಿನ್ನವಾಗಿಯೇ ಇರಲಿದೆ’ ಎಂದರು. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

shivarajkumar

“ನಾನು ಇವತ್ತು ವೇದಿಕೆಯ ಮೇಲೆ  ಉಪ್ಪಿ ಅಭಿಮಾನಿಯಾಗಿ ಕೂತಿದ್ದೇನೆ. ಉಪೇಂದ್ರ ಅವರು ಸಿನಿಮಾ ನಿರ್ದೇಶನ ಮಾಡುತ್ತಿರುವುದು ಖುಷಿಯಾಗಿದೆ. ಅದರಲ್ಲೂ ಕುದುರೆ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ಮೆಲೆ ಕುದುರೆ ಓಟು ಶುರು. ಆದಷ್ಟು ಬೇಗ ಸಿನಿಮಾ ಮುಗಿಸಿ, ನಾನಂತೂ ನೋಡಲು ಕಾಯುತ್ತಿದ್ದೇನೆ’ ಎಂದು ಕಿಚ್ಚ ಸುದೀಪ್. ಇದನ್ನೂ ಓದಿ : ಕನ್ನಡದ ಬಹುತೇಕ ದಿಗ್ಗಜರ ಜೊತೆ ನಟಿಸಿರುವ ನಟ ಉದಯ್ ಹುತ್ತಿನಗದ್ದೆ ನಿಧನ

ACTOR SUDEEP

‘ಉಪೇಂದ್ರ ಅವರು ಕಾಮಾನ್ ಮ್ಯಾನ್ ಪರವಾಗಿ ಸಿನಿಮಾ ಮಾಡುತ್ತಲೇ ಅವರನ್ನು ಎಚ್ಚರಿಸುತ್ತಾರೆ. ಈ ಪೋಸ್ಟರ್ ನಲ್ಲಿ ಎವಲ್ಯೂಷನ್ ಥಿಯೇರಿ ಇದೆ. ಅಲ್ಲಿಂದಲೇ ಕತೆ ಶುರುವಾಗುತ್ತೆ ಅನಿಸತ್ತೆ. ಒಳ್ಳೆಯ ಸಿನಿಮಾ ಬರಲಿದೆ’ ಎಂದು ಡಾಲಿ ಧನಂಜಯ್. ಇದನ್ನೂ ಓದಿ : ಕ್ಯಾಪ್ ತೊಟ್ಟು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ

dhananjay vashista simha FotoJet 2 4

ಉಪೇಂದ್ರ ಅವರು ಸಿನಿಮಾಗಳನ್ನು ನೋಡುತ್ತಲೇ ಬಂದವನು ನಾನು. ಬ್ಲಾಕ್ ಟಿಕೆಟ್ ತಗೊಂಡು ಸಿನಿಮಾ ನೋಡುತ್ತಿದ್ದೆ ಎಂದು ಉಪ್ಪಿ ಮೇಲಿನ ಅಭಿಮಾನವನ್ನು ಹೇಳಿಕೊಂಡರು ವಸಿಷ್ಠ ಸಿಂಹ. ಈ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಮನೋಹರ್ ನಾಯ್ಡು, ಲಹರಿ ವೇಲು, ಕೆ.ಪಿ. ಶ್ರೀಕಾಂತ್ ಸೇರಿದಂತೆ ಹಲವರು ಹಾಜರಿದ್ದರು.

Share This Article