ಪ್ರಜಾಕೀಯಕ್ಕಾಗಿ ಉಪ್ಪಿಗೆ ಅಭಿಮಾನಿಗಳಿಂದ ಬಂತು ಸಲಹೆ

Public TV
2 Min Read
UPPI 4

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ತಮ್ಮ ರಿಯಲ್ ಲೈಫ್ ನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡುವ ವೇಳೆ ಅಭಿಮಾನಿಗಳಿಂದ ಹಾಗೂ ಜನಸಮಾನ್ಯರ ಬಳಿಯಿರುವ ಹೊಸ ಪ್ಲಾನ್ ಗಳನ್ನು ತಮ್ಮದೊಂದಿಗೆ ಹಂಚಿಕೊಳ್ಳುವಂತೆ ಹೇಳಿದ್ದರು.

ಅಂತೆಯೇ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಸರಳವಾಗಿ ಅಭಿವೃದ್ಧಿಯನ್ನು ಸಾಧಿಸುವುದು ಹೇಗೆಂಬುದರ ಬಗ್ಗೆ ಸಲಹೆ, ಸೂಚನೆ ಮತ್ತು ಪ್ಲಾನ್ ಗಳನ್ನು ಕೊಡುತ್ತಿದ್ದಾರೆ. ಸಲಹೆ ಸೂಚನೆಗಳನ್ನು ಪಡೆಯುವದಕ್ಕಾಗಿ ಉಪೇಂದ್ರ ಹೊಸ ಮೇಲ್ ಐಡಿಗಳನ್ನು ಸಹ ಕೊಟ್ಟಿದ್ದಾರೆ.

ಇಂದು ಉಪೇಂದ್ರ ತಮಗೆ ಅಭಿಮಾನಿಗಳು ಕಳುಹಿಸಿರುವ ಸಲಹೆಯ ಎರಡು ಪತ್ರಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಪತ್ರಗಳಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ.

ಪತ್ರ 01:
ರಾಜ್ಯದಲ್ಲಿ ಒಟ್ಟು 30 ಜಿಲ್ಲೆಗಳಿವೆ. ಹಾಗಾಗಿ ಸರ್ಕಾರ ಪ್ರತಿಯೊಂದು ಜಿಲ್ಲೆಗೂ ಹೊಸ ಕಟ್ಟಡವನ್ನು ಕಟ್ಟುವ ಮೂಲಕ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ತೆರೆಯುವುದು. 30 ಜಿಲ್ಲೆಗಳಲ್ಲಿ 30 ಆಸ್ಪತ್ರೆಯನ್ನು ಆರಂಭಿಸಿದ ಮೇಲೆ ಅವುಗಳನ್ನು ನಿರ್ವಹಣೆ ಮಾಡಲು ಸಾಕಷ್ಟು ಹಣ ಬೇಕಾಗುತ್ತದೆ.

ನಮ್ಮ ರಾಜ್ಯದಲ್ಲಿ ಅಂದಾಜು 6.5 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಯಲ್ಲಿ ಅಂದಾಜು 1.5 ಕೋಟಿ ಜನರು ಮೊಬೈಲ್ ಫೋನ್ ಬಳಸುತ್ತಿಲ್ಲ ಎಂದು ತಿಳಿಯೋಣ. ಹಾಗಾದರೆ 5 ಕೋಟಿ ಜನರು ಮೊಬೈಲ್ ಬಳಕೆದಾರರು ನಮಗೆ ಸಿಗುತ್ತಾರೆ. ಪ್ರತಿಯೊಬ್ಬರಿಂದ ದಿನಕ್ಕೆ 1 ರೂ.ಯಂತೆ ತಿಂಗಳಿಗೆ 30 ರೂ. ಸಂಗ್ರಹಣೆ ಮಾಡುವುದು.

ಇದನೆಲ್ಲಾ ಕೂಡಿ ಲೆಕ್ಕ ಹಾಕಿದರೆ ತಿಂಗಳಿಗೆ 150 ಕೋಟಿ ರೂ. ಸಂಗ್ರಹಣೆ ಆಗುತ್ತದೆ. ಇದೇ ಹಣವನ್ನು 5 ಕೋಟಿ ರೂ.ಯಂತೆ ಭಾಗ ಮಾಡಿ ಎಲ್ಲ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿಗೆ ನೀಡಿದರೆ ನಿರ್ವಹಣಾ ವೆಚ್ಚವನ್ನು ಸುಲಭವಾಗಿ ಭರಿಸಬಹುದು. ಇದರಿಂದ ಯಾವುದೇ ಬಡವರು ಯಾವ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಪತ್ರ 02:
ಒಂದೇ ದೇಶ, ಒಂದೇ ಟ್ಯಾಕ್ಸ್ ಇರುವಂತೆ ರಾಜ್ಯದಲ್ಲಿ `ಒಂದೇ ದೇಹ, ಒಂದೇ ಇನ್ ಶ್ಯೂರನ್ಸ್’ ಜಾರಿಗೆ ತರಬೇಕು. ವಾಹನಗಳು ಅಪಘಾತಕ್ಕೆ ಒಳಗಾಗಬಹುದು ಅಥವಾ ಆಗದೇ ಇರಬಹುದು. ಆದರೂ ಪ್ರತಿಯೊಂದು ವಾಹನಕ್ಕೂ ಕಡ್ಡಾಯವಾಗಿ ಇನ್ ಶ್ಯೂರನ್ಸ್ ಮಾಡಿಸಬೇಕು. ಹಾಗಾದರೆ ಆರೋಗ್ಯ ವಿಮೆ (ಹೆಲ್ತ್ ಇನ್ ಶ್ಯೂರೆನ್ಸ್) ಯಾಕೆ ಕಡ್ಡಾಯವಾಗಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪ್ರತಿ ದೇಹಕ್ಕೂ ಒಂದಲ್ಲಾ ಒಂದು ರೋಗ ಬರುತ್ತದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಹೆಲ್ತ್ ಇನ್‍ಶ್ಯೂರೆನ್ಸ್ ಮಾಡಿಸಬೇಕು. ಈಗಿರುವ ಪಾಲಿಸಿಗಳು ಕೇವಲ ಕೆಲವು ರೋಗಗಳನ್ನು ಸರಿ ಮಾಡುತ್ತವೆ. ಮನುಷ್ಯರಾದ ಮೇಲೆ ಎಲ್ಲರಿಗೂ ಎಲ್ಲ ರೋಗ ರುಜಿನುಗಳು ಬರುತ್ತವೆ. ಆದ್ದರಿಂದ ಒಂದೇ ದೇಹ, ಒಂದೇ ಇನ್ ಶ್ಯೂರೆನ್ಸ್ ಜಾರಿಯಾಗಬೇಕು ಎಂದು ಅಭಿಮಾನಿ ಹೇಳಿದ್ದಾರೆ.

ಒಟ್ಟಿನಲ್ಲಿ ಉಪೇಂದ್ರ ಕನಸಿನ ರಾಜಕೀಯ ಜೀವನಕ್ಕೆ ಅಭಿಮಾನಿಗಳು ಮತ್ತು ಜನಸಾಮನ್ಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರಜಾಕೀಯದ ಮೂಲಕ ಉಪೇಂದ್ರ ಜನಸಾಮನ್ಯರ ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

https://twitter.com/HsVineeth/status/910363111173042176

https://twitter.com/Pradeepsuraana1/status/910367116238495745

Share This Article
Leave a Comment

Leave a Reply

Your email address will not be published. Required fields are marked *