ಹಂಪಿಗೆ ಭೇಟಿ ನೀಡಿದ ಕೇಂದ್ರ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್

Public TV
1 Min Read
vijayanagara ramachandra 1 2

ವಿಜಯನಗರ: ಶ್ರೀ ವಿರೂಪಾಕ್ಷೇಶ್ವರನ ದರ್ಶನವನ್ನು ಕೇಂದ್ರ ಸರ್ಕಾರದ ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಪಡೆದಿದ್ದಾರೆ.

vijayanagara ramachandra 1 1

ರಾಮಚಂದ್ರ ಅವರು ಬುಧವಾರ ಹಂಪಿಗೆ ಭೇಟಿ ನೀಡಿದ್ದು, ಹಂಪಿಯ ಶ್ರೀ ವಿರೂಪಾಕ್ಷ, ಪಂಪಾಂಬಿಕೆ, ತಾಯಿ ಭುವನೇಶ್ವರಿ ದರ್ಶನ ಪಡೆದಿದ್ದಾರೆ. ರಾಮಚಂದ್ರ ಅವರು ಮೂರು ದಿನಗಳ ಕಾಲ ವಿಜಯನಗರ, ಬಳ್ಳಾರಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ. ಗುರುವಾರ ಹಂಪಿಯ ಸ್ಮಾರಕಗಳ ವೀಕ್ಷಣೆ ಮಾಡಲಿದ್ದಾರೆ. ಇದನ್ನೂ ಓದಿ:  11 ಬಾರಿ ಕೋವಿಡ್ -19 ಲಸಿಕೆ ಪಡೆದ 84 ವರ್ಷದ ವೃದ್ಧ

Ramachandra Prasad Singh Vijayanagar 1

ಶ್ರೀ ವಿರೂಪಾಕ್ಷ ದೇವಾಲಯದಲ್ಲಿರೋ ಆನೆ ಲಕ್ಷ್ಮೀಗೆ ಬಾಳೆಹಣ್ಣು ನೀಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ. ನಾಡಿದ್ದು ಬಳ್ಳಾರಿಯ ಗಣಿ ಮತ್ತು ಗಣಿ ಕೈಗಾರಿಕಾ ಪ್ರದೇಶದಲ್ಲಿ ಪ್ರವಾಸ ಮಾಡಲಿದ್ದಾರೆ.

Ramachandra Prasad Singh Vijayanagar 2

Share This Article
Leave a Comment

Leave a Reply

Your email address will not be published. Required fields are marked *