ಅಲ್ಲಿ ಹೆಣಗಳು ಬಿದ್ದಿವೆ, ಇವರು ಕಪ್‌ಗೆ ಮುತ್ತು ಕೊಟ್ಟುಕೊಂಡು ನಿಂತಿದ್ದಾರೆ: ಸಿಎಂ, ಡಿಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ

Public TV
3 Min Read
HD Kumaraswamy 1

– ಡಿಸಿಎಂ ಚೈಲ್ಡಿಷ್ ಥರ ಆಡಲಿಲ್ಲ ಅಂದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ: ಕೇಂದ್ರ ಸಚಿವ

ನವದೆಹಲಿ: ಅಲ್ಲಿ ಹೆಣಗಳು ಬಿದ್ದಿವೆ, ಇವರು ಕಪ್‌ಗೆ ಮುತ್ತು ಕೊಟ್ಟುಕೊಂಡು ನಿಂತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಕಾಲ್ತುಳಿತ ದುರಂತ ಪ್ರಕರಣ ಕುರಿತು ಮಾತನಾಡಿದ ಅವರು, ಅವರು ಏನ್ ಹೇಳಿದ್ರು? ಕಾರ್ಯಕ್ರಮ ನಿಲ್ಲಿಸಲು ಅಂತಾ ಹೇಳಿದ್ದಾರೆ ಅಲ್ವಾ. ಕ್ರೀಡಾಂಗಣಕ್ಕೆ ಹೋಗಿ ಕಾರ್ಯಕ್ರಮ ನಿಲ್ಲಿಸ್ತೀವಿ ಅಂದ್ರು. ಅಲ್ಲಿ ಹೋಗಿ ಕಪ್‌ಗೆ ಮುತ್ತು ಕೊಡಲು ಹೋಗಿದ್ದಾರೆ. ಹೆಣ ಬಿದ್ದಿದೆ, ಇವರು ಹೋಗಿ ಹೆಣದ ಮುಂದೆ ಕಪ್‌ಗೆ ಮತ್ತು ಕೊಟ್ಟಿಕೊಂಡು ನಿಂತಿದ್ದಾರೆ. ಇವರೇ ಆರ್‌ಸಿಬಿ ಗೆಲ್ಲಿಸಿಕೊಂಡು ಕಪ್ ತೆಗೆದುಕೊಂಡು ಬರೋ ಥರ ಮಾಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳ ಸಾವಿನ ನಡುವೆ ಮುತ್ತು ಕೊಟ್ಟಿಕೊಂಡು ನಿಂತಿದ್ದಾರೆ ಎಂದು ಸಿಎಂ ಮತ್ತು ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ನಿನ್ನೆ ಒಂದು ರೀತಿಯ ಕುತೂಹಲ ಘಟಕ್ಕೆ ತಲುಪಿ ಆರ್‌ಸಿಬಿ ತಂಡ ಐಪಿಎಲ್ ಕಪ್ ಗೆದ್ದಿದೆ. ಇಂತಹ ಸಂದರ್ಭದಲ್ಲಿ ಇಷ್ಟೊಂದು ತರಾತುರಿಯಲ್ಲಿ ಸರ್ಕಾರದ ವತಿಯಿಂದ ಅಭಿನಂದನೆ ಸಲ್ಲಿಸಲು ತೀರ್ಮಾನ ಮಾಡಿದ್ದು ಯಾರು? ಅವರಿಗೆ ಇನ್ವಿಟೇಷನ್ ಕೊಟ್ಟಿದ್ದು ಯಾರು? ಅವರಿಗೆ ಸರ್ಕಾರ ಆಹ್ವಾನ ಕೊಟ್ಟಿದ್ದು ತಪ್ಪು ಅಂತಾಲೂ ನಾನು ಹೇಳಲ್ಲ. ಏರ್ ಪೋರ್ಟ್ನ ಡ್ರಾಮಾ ಕೂಡ ತೋರಿಸಿದ್ದೀರಿ. ಅಲ್ಲಿಗೆ ಯಾರು ಹೋದರು? ಆಯೋಜನೆ ಮಾಡಿದ್ದು ಯಾರು? ನಮ್ಮ ಡಿಸಿಎಂ ಅವರೇ ಬೆವರು ಸುರಿಸಿ ಕಪ್ ಗೆದ್ದಾರೋ ಅನ್ನೋ ತರ ಮುತುವರ್ಜಿಯಿಂದ ಹೋಗಿದ್ದಾರೆ. ಕನಕಪುರದವರನ್ನ ಕರೆದುಕೊಂಡು ಹೋಗಿದ್ದಾರೆ. ಬೇರೆ ಯಾರೂ ಹೋಗಿಲ್ಲ. ಇದು ಕನಕಪುರದ ಆರ್‌ಸಿಬಿನಾ? ಚೇಲಾಗಳು ಬೆಂಬಲಿಗರನ್ನ ಕರೆದುಕೊಂಡು ಹೋಗಿದ್ದಾರೆ ಡಿಕೆಶಿ ಎಂದು ಕಿಡಿಕಾರಿದರು.

ಏರ್‌ಪೋರ್ಟ್ನಿಂದ ವಿಧಾನಸೌಧಕ್ಕೆ ಕರೆದುಕೊಂಡು ಹೋಗಿದ್ದಾರೆ. ಎರಡು ಕಾರ್ಯಕ್ರಮ ಮಾಡುವ ಅವಕಾಶ ಏನಿತ್ತು? ಅಮಾಯಕರನ್ನ ಬಲಿಪಡುವ ಅವಕಾಶ ಏನಿತ್ತು? ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭದಲ್ಲಿ ಬೀಗ ತೆರೆದು ಬಿಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿತ್ತಾ? ಈ ಸರ್ಕಾರ ಕಟುಕರ ಸರ್ಕಾರ. ಸಿಎಂ ನಿಷ್ಕ್ರಿಯ ಸಿಎಂ. ಡಿಸಿಎಂ ಮುಂದೆ ಸಿಎಂ ನಿಷ್ಕ್ರಿಯ. ಇನ್ನೂ ಹೋಮ್ ಮಿನಿಸ್ಟರ್ ಬಗ್ಗೆ ಮಾತಾಡೋದೇ ಬೇಡ. ಹೇಳು ಅಂದರೆ ಹೇಳ್ತಾರೆ ಇಲ್ಲಾಂದ್ರೆ ಇಲ್ಲ. ವಿಧಾನಸೌಧ ಮುಂದೆ ಕಾರ್ಯಕ್ರಮ ನಡೆಯುವಾಗಲೇ 4 ಜನರು ಸತ್ತಿದ್ದರು. ತರಾತುರಿಯಲ್ಲಿ ಮಾಡುವ ಅವಶ್ಯಕತೆ ಏನಿತ್ತು. ಆಗಲೇ ಕಾರ್ಯಕ್ರಮ ನಿಲ್ಲಿಸಬೇಕಿತ್ತು. ನಿನ್ನೆಯಿಂದಲೇ ಏನು ಅಂತಾ ಎಲ್ಲ ಗೊತ್ತಿತ್ತು. ವಿಧಾನಸೌಧ ಮುಂದೆಯೇ ಜನರು ಡಿಸಿಎಂಗೆ ಮರ್ಯಾದೆ ತೆಗೆದಿದ್ದಾರೆ. ಜನರು ನಿಮ್ಮನ್ನ ನೋಡಲು ಬಂದಿಲ್ಲ ಅಂತಾ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಹೇಳ್ತಾರೆ, ಈ ಸಂದರ್ಭದಲ್ಲಿ ಲಕ್ಷಾಂತರ ಸೇರಿದಾಗ ಹೀಗೆ ಅಂತಾ. ಅದಕ್ಕೆ ಹೇಳಿದ್ದು ನೀವು ನಿಷ್ಕ್ರಿಯ ಸಿಎಂ ಅಂತಾ. ಇಂತಹವರನ್ನ ಹೊರಹಾಕಿ ಅಂತಾ ಹೇಳೋದು. ಇದು ಸರ್ಕಾರದ ವೈಫಲ್ಯ. ಲಕ್ಷಾಂತರ ಜನರು ಸೇರಿದ್ದಾರೆ. ಪೊಲೀಸರು ಮೊದಲೇ ಹೇಳಿದ್ದಾರೆ. ಪೊಲೀಸ್ ಕಮಿಷನರ್ ಹೇಳಿದ್ದಾರೆ. ಎರಡು ಕಾರ್ಯಕ್ರಮ ಮಾಡಿದರೆ ಸೆಕ್ಯುರಿಟಿ ಸಮಸ್ಯೆ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ನಿರ್ಲಕ್ಷö್ಯ ತೋರಿ ಹೀಗೆ ಮಾಡಿದ್ದಾರೆ. ಮೃತರ ಕುಟುಂಬಸ್ಥರಿಗೆ ದುಃಖ ಬರಿಸುವ ಶಕ್ತಿಯನ್ನು ಭಗವಂತೆ ನೀಡಲಿ ಎಂದರು.

ನಾನು ರಾಜಕೀಯ ಮಾಡ್ತಿಲ್ಲ. ಇದು ಕಣ್ಣಾರೆ ನಡೆದಿರುವ ಕಥೆ. ಡಿಸಿಎಂ ಚೈಲ್ಡಿಷ್ ತರ ಆಡಿಲ್ಲ ಅಂದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಮಂಗಳೂರು ಘಟನೆ ನೋಡಿ, ಗಡಿಪಾರು ಮಾಡ್ತಾರಂತೆ. ಗಡಿಪಾರು ಮಾಡಿಲ್ಲ ಅಂದರೆ ಏನ್ ಮಾಡ್ತೀರಿ. ನಿಮಗೆ ಹದ್ದುಬಸ್ತಿನಲ್ಲಿ ಇಡಲು ಆಗಲ್ವಾ? ಎರಡು ವರ್ಷಗಳಿಂದ ಶಾಂತಿ ನೆಲೆಸಿಲ್ಲ. ರಾಜ್‌ಕುಮಾರ್ ನಿಧನರಾದಾಗ ಸರ್ಕಾರಕ್ಕೆ ಮಾಹಿತಿ ಇರಲಿಲ್ಲ. ಕುಟುಂಬದವರು ಹೇಳಿರಲಿಲ್ಲ. ಮಾಧ್ಯಮ ಮೂಲಕ ಗೊತ್ತಾಗಿದ್ದು. ನಾವು ಕೊನೆ ಹಂತದಲ್ಲಿ ಕಂಠೀರವ ಸ್ಟೇಡಿಯಂಗೆ ತೆಗೆದುಕೊಂಡು ಹೋಗಿ ಅಂತಿಮ ದರ್ಶನಕ್ಕೆ ಇಟ್ಟಿದ್ವಿ. ಕಾಂಗ್ರೆಸ್ ಪಟಲಾಂನವರು ಸೀಮೆಎಣ್ಣೆ ಇಟ್ಟುಕೊಂಡು ಅಶಾಂತಿ ಕ್ರಿಯೇಟ್ ಮಾಡಲು ಬಂದಿದ್ದರು. ಗೋಲಿಬಾರ್ ಮಾಡಿದ್ವಿ. ಅಂಬರೀಶ್ ನಿಧನರಾದಾಗ ಶಾಂತಿ ಕಾಪಾಡಿದೆ ಎಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.

ಇವರು ಪ್ಲಾನ್ ಮಾಡಿರುವ ಕಾರ್ಯಕ್ರಮ ಅಲ್ಲ. ಇವರು ಎಕ್ಸ್ಪೋಸ್ ಮಾಡಲು ಮಾಡಿದ ಕಾರ್ಯಕ್ರಮ ಇದು. ಕಳೆದ ಬಾರಿ ಮುಂಬೈನಲ್ಲಿ ಐದು ಲಕ್ಷ ಜನರು ಸೇರಿದ್ದರು. ಆಗ ಯಾವುದೇ ಅನಾಹುತ ಆಗಲಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ನಡೆಗೆ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.

Share This Article