ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲ್ಲೇ ಮಂಡ್ಯ ಮಾಜಿ ಸಂಸದೆ, ನಟಿ, ರಮ್ಯಾ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟ್ ಹಾಕಿದ್ದಾರೆ.
ರಮ್ಯಾ ಅವರು ದಿವ್ಯ ಸ್ಪಂದನ/ರಮ್ಯಾ ಫೇಸ್ಬುಕ್ ಖಾತೆಯಲ್ಲಿ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಒಂದು ಭಾಗದಲ್ಲಿ ಕುದುರೆ ಹಿಂಭಾಗವಿದ್ದು ಅದನ್ನು 2014ರಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆ ಅಂತ ಹೇಳಿದ್ದಾರೆ. ಮತ್ತೊಂದು ಭಾಗದಲ್ಲಿ ಕುದುರೆಯ ವ್ಯಂಗ್ಯ ಚಿತ್ರವಿದ್ದು, ಅದನ್ನು 2019ರ ನೈಜತೆ (ರಿಯಾಲಿಟಿ) ಎಂದು ಬರೆದಿದ್ದಾರೆ. ಇದನ್ನು ಓದಿ: ಮಂಡ್ಯ ಮನೆಯನ್ನು ರಾತ್ರೋರಾತ್ರಿ ಖಾಲಿ ಮಾಡಿದ್ದಕ್ಕೆ ಕಾರಣ ತಿಳಿಸಿದ ರಮ್ಯಾ
ಈ ಪೋಸ್ಟ್ ನೋಡಿದ ನೆಟ್ಟಿಗರಲ್ಲಿ ಕೆಲವರು ಹೊಗಳಿದರೆ ಕೆಲವರು ಕಿಡಿಕಾರಿದ್ದಾರೆ. ಯಾರು ಮೇಡಂ ಈ ಕಲಾವಿದ ಥೇಟ್ ನಿಮ್ಮ ರೀತಿಯಲ್ಲಿ ಚಿತ್ರ ಬಿಡಿಸಿದ್ದಾನೆ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನು ಓದಿ: ಸ್ಯಾಂಡಲ್ವುಡ್ ಕ್ವೀನ್ಗೆ ಫುಲ್ಕ್ಲಾಸ್- ರಮ್ಯಾ ಬರ್ತ್ ಡೇ ನಮ್ಗೆ ಕರಾಳ ದಿನವೆಂದ್ರು ಅಭಿಮಾನಿ
ರಮ್ಯಾ ಅವರ ಪೋಸ್ಟ್ ಗೆ ಎರಡು ಗಂಟೆಯಲ್ಲಿ 3,200ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು, 560 ಜನ ಕಮೆಂಟ್, 495 ಮಂದಿ ಶೇರ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv