ಉಡುಪಿಯ ಕೃಷ್ಣ ಮಠ ನವೀಕರಣ: ಪೌಳಿ ನಿರ್ಮಿಸಿ ಗಾಳಿ-ಬೆಳಕಿಗೆ ವಿಶೇಷ ವ್ಯವಸ್ಥೆ

Public TV
1 Min Read
UDP KRISHNA MATT 1

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸೊಬಗನ್ನ ನೋಡದವರುಂಟೆ. ಆದ್ರೆ ನೀವಂದುಕೊಂಡ ಹಾಗೆ ಹಳೆ ಕೃಷ್ಣಮಠ ಉಡುಪಿಯಲ್ಲಿ ಕಾಣಸಿಗೋದಿಲ್ಲ. ಯಾಕೆಂದರೆ ಕಡೆಗೋಲು ಕೃಷ್ಣನ ಸನ್ನಿಧಾನ ಸಂಪೂರ್ಣ ಬದಲಾಗಿದೆ.

UDP KRISHNA MATT 2

ಕೃಷ್ಣಮಠಕ್ಕೆ ದಿನನಿತ್ಯ ಸಾವಿರಾರು ಮಂದಿ ಭಕ್ತರು ಬಂದು ಹೋಗುತ್ತಾರೆ. ಮಠದೊಳಗೆ ನೂರಿನ್ನೂರು ಜನ ಸೇರಿದ್ರೂ ಉಸಿರುಗಟ್ಟುವ ವಾತಾವರಣವಿರುತ್ತಿತ್ತು. ಮಹಾಪೂಜೆ ವೇಳೆ ಗಾಳಿಯ ಸಂಚಾರವೂ ಇರುತ್ತಿರಲಿಲ್ಲ. ಆದರೆ ಈಗ ಕೃಷ್ಣಮಠದ ಮೇಲೊಂದು ಪೌಳಿ ನಿರ್ಮಿಸಿ ಗಾಳಿ-ಬೆಳಕಿಗೆ ವ್ಯವಸ್ಥೆ ಮಾಡಲಾಗಿದೆ.

UDP KRISHNA MATT 8

800 ವರ್ಷಗಳ ಇತಿಹಾಸವುಳ್ಳ ಕೃಷ್ಣ ಮಠ 16 ವರ್ಷದ ಹಿಂದೊಮ್ಮೆ ನವೀಕರಣಗೊಂಡಿತ್ತು. ಪೇಜಾವರ ಶ್ರೀಗಳ ಪರ್ಯಾಯ ಹಿನ್ನೆಲೆಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನವೀಕರಣ ಮಾಡಲಾಗ್ತಿದೆ. ಮೇಲ್ಛಾವಣಿಗೆ ಹಿತ್ತಾಳೆಯ ತಟ್ಟೆಗಳನ್ನು ಅಳವಡಿಸಲಾಗಿದೆ. ಪೌಳಿಗೆ ಮರದ ಕೆತ್ತನೆಗಳು, ಬೃಹತ್ ಕಂಬಗಳನ್ನು ಅಳವಡಿಸಲಾಗಿದೆ.

UDP KRISHNA MATT 3

ಇದೇ ತಿಂಗಳ 18ರಂದು ಅದ್ಧೂರಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಪೊಡವಿಗೊಡೆಯನ ಮಠ ಹೊಸ ರೂಪಿನೊಂದಿಗೆ ಭಕ್ತಾದಿಗಳನ್ನು ಆಕರ್ಷಿಸ್ತಿದೆ.

UDP KRISHNA MATT 9

UDP KRISHNA MATT 7

UDP KRISHNA MATT 6

UDP KRISHNA MATT 5

UDP KRISHNA MATT 1

 

Share This Article
Leave a Comment

Leave a Reply

Your email address will not be published. Required fields are marked *