ಗುಹೆಯೊಳಗೆ ನೆಲೆಸಿರೋ ಕಲ್ಲು ಗಣಪತಿಗಿದೆ ನಾಲ್ಕು ಕೈ!

Public TV
1 Min Read
UDP 3

ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಸಾವಿರಕ್ಕಿಂತ ಹೆಚ್ಚು ದೇವಸ್ಥಾನ ಇದೆ. ಹೆಚ್ಚು ಪ್ರಸಿದ್ಧಿಗೆ ಬಾರದ ಗುಹೆಯೊಳಗಿನ ಕಲ್ಲು ಗಣಪತಿ ದೇವಸ್ಥಾನವು ಒಂದು. ಶಿರಿಯಾರ ಗ್ರಾಮದ ಪಡುಮುನಾಡುಗೆ ಹೋದರೆ ಈ ಸುಂದರ ದೇವಾಲಯವು ಬಂಡೆಕಲ್ಲಿನ ಮೇಲೆ ಸ್ಥಾಪಿತವಾಗಿದೆ.

UDP 4

ಬಲಗಡೆಯ ಕೆರೆಯನ್ನು ಸೂರ್ಯ ಪುಷ್ಕರಣಿ ಎನ್ನಲಾಗುತ್ತದೆ ಎಡಗಡೆಯ ಕೆರೆಯನ್ನು ಚಂದ್ರ ಪುಷ್ಕರಣಿ ಎನ್ನಲಾಗುತ್ತದೆ. ಇಲ್ಲಿನ ಗಣೇಶನು 4 ಕೈಯನ್ನು ಹೊಂದಿದ್ದಾನೆ ಎರಡು ಕೈ ವರದಾ ಹಸ್ತ ಇಚ್ಛೆಯನ್ನು ಸೂಚಿಸಿದರೆ, ಇನ್ನೆರಡು ಕೈಗಳು ಮೋಕ್ಷವನ್ನು ಸೂಚಿಸುತ್ತದೆ. ಇಲ್ಲಿ ತುಲಾಭಾರದ ಮೂಲಕ ಗಣೇಶನನ್ನು ಪ್ರಾರ್ಥಿಸಲಾಗುತ್ತದೆ. ಇದನ್ನೂ ಓದಿ: 5,000 ಬೆಂಕಿ ಕಡ್ಡಿ ಬಳಸಿ ಗಣಪತಿ ಮೂರ್ತಿ ರಚಿಸಿದ ಕಲಾವಿದ

UDP 2

ಗಣೇಶ ಚತುರ್ಥೀ ಸಂದರ್ಭದಲ್ಲಿ ದೂರದೂರದ ಊರುಗಳಿಂದ ಭಕ್ತರು ಗಣೇಶನ ದರ್ಶನಕ್ಕೆ ಆಗಮಿಸುತ್ತಾರೆ. ಮಳೆಗಾಲದಲ್ಲಿ ಕಲ್ಲು ಗಣಪತಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ವೈಭವ. ಮಳೆನೀರ ಅಭಿಷೇಕದ ಜೊತೆ ಇಲ್ಲಿ ದೇವರ ದರ್ಶನ ನಿಜಕ್ಕೂ ರೋಮಾಂಚಕವಾಗಿದೆ.

UDP 1 1

Share This Article
Leave a Comment

Leave a Reply

Your email address will not be published. Required fields are marked *