ಕಿಚ್ಚನ ಧ್ವನಿಯಿರೋ ಉದ್ಘರ್ಷ ಟ್ರೈಲರ್ ಲಾಂಚ್ ಮಾಡಿದ್ರು ದರ್ಶನ್!

Public TV
1 Min Read
udgharsha copy

ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಟ್ರೈಲರ್ ಲಾಂಚ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಟ್ರೈಲರ್ ಅನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹೀಗೆ ಹೊರ ಬಂದಿರೋ ಈ ಟ್ರೈಲರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ದೇಸಾಯಿ ಮತ್ತೆ ಮರಳಿರೋ ಸ್ಪಷ್ಟ ಸೂಚನೆಯನ್ನೇ ರವಾನಿಸಿದೆ!

ಮರ್ಡರ್ ಮಿಸ್ಟರಿ, ಅದರ ಸುತ್ತಾ ಛಕಛಕನೆ ಸಾಗೋ ದೃಶ್ಯಾವಳಿ ಹೊಂದಿರೋ ಈ ಟ್ರೈಲರ್ ಒಟ್ಟಾರೆ ಚಿತ್ರದ ಬಗ್ಗೆ ಮತ್ತಷ್ಟು ಕ್ರೇಜ್ ಹುಟ್ಟುವಂತೆ ಮಾಡಿದೆ. ಅನೂಪ್ ಠಾಕೂರ್ ಸಿಂಗ್ ಎಂಬ ಅಜಾನುಬಾಹು ನಾಯಕನಿಗೆ ಸೆಡ್ಡು ಹೊಡೆಯುವಂಥಾ ಖಳನಟರ ಪಡೆಯೂ ಅಬ್ಬರಿಸಿರೋ ರೀತಿಯಂತೂ ಮಾಸ್ ಪ್ರೇಕ್ಷಕರನ್ನೂ ಉದ್ಘರ್ಷದತ್ತ ಆಕರ್ಷಿಸಿದೆ.

udgharsha a copy

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆಗೊಳಿಸಿರುವ ಈ ಟ್ರೈಲರಿಗೆ ಕಿಚ್ಚ ಸುದೀಪ್ ಖಡಕ್ ವಾಯ್ಸ್ ನೀಡಿದ್ದಾರೆ. ಜೊತೆಗೆ ಈ ಚಿತ್ರದ ಮೂಲಕ ಸುನೀಲ್ ಕುಮಾರ್ ದೇಸಾಯಿ ಯುಗ ಮತ್ತೆ ಶುರುವಾಗಲಿದೆ ಎಂಬಂಥಾ ಹಿಂಟ್ ಅನ್ನೂ ಬಿಟ್ಟು ಕೊಟ್ಟಿದ್ದಾರೆ. ಎಂಭತ್ತರ ದಶಕದ ಆಚೀಚಿನ ದಿನಗಳಲ್ಲಿಯೇ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕಗಳ ರುಚಿ ಹತ್ತಿಸಿ ಗೆದ್ದವರು ಸುನೀಲ್ ಕುಮಾರ್ ದೇಸಾಯಿ. ಅವರು ನಿರ್ದೇಶನ ಮಾಡಿರೋ ಉದ್ಘರ್ಷ ಮತ್ತೊಂದು ಮಹಾ ಗೆಲುವಿನ ರೂವಾರಿಯಾಗೋ ಲಕ್ಷಣಗಳನ್ನು ಈ ಟ್ರೈಲರ್ ಹೊಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *