ತುಮಕೂರು: ನಡುರಸ್ತೆಯಲ್ಲಿ ಅರೆಬೆತ್ತಲೆಯಾಗಿ ನಿಂತು ಅಸಭ್ಯ ಭಂಗಿ ತೋರಿಸುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ದ್ವಿಚಕ್ರ ವಾಹನ, ಆಟೋ, ಬಸ್ಗಳನ್ನು ಅಡ್ಡಿಗಟ್ಟಿ ಅಸಭ್ಯ ಭಂಗಿಗಳನ್ನು ತೋರಿಸುತ್ತಿದ್ದನು. ಇದರಿಂದ ವಾಹನ ಸವಾರರು, ಸಾರ್ವಜನಿಕರು ಮುಜುಗರಕ್ಕೊಳಗಾಗುತ್ತಿದ್ದರು.
ಬಸ್ವೊಂದರ ವೈಪರ್ನ್ನು ಕಿತ್ತು ಸಾರ್ವಜನಿಕರ ಮೇಲೆ ಈತ ಹಲ್ಲೆಗೂ ಮುಂದಾಗಿದ್ದ. ಮಾನಸಿಕ ಅಸ್ವಸ್ಥನ ಉಪಟಳ ತಾಳಲಾರದೇ ಸ್ಥಳೀಯರು ಛಡಿ ಏಟು ಕೊಟ್ಟು ಕೈಕಾಲು ಕಟ್ಟಿ ನಗರದ ತಿಲಕ್ ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದಾರೆ.
https://www.youtube.com/watch?v=VQgI4dYQDSQ