ಲೋಕಸಭೆಯಲ್ಲಿ ಐತಿಹಾಸಿಕ ತ್ರಿವಳಿ ತಲಾಖ್ ಮಸೂದೆ ಅಂಗೀಕಾರ

Public TV
1 Min Read
TALAQ

ನವದೆಹಲಿ: ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಅಂಗೀಕರಿಸಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಎಐಡಿಎಂಕೆ ಮತ್ತು ಸಮಾಜವಾದಿ ಪಾರ್ಟಿ ಸದನದಿಂದ ಹೊರ ನಡೆದ ಬಳಿಕ ತ್ರಿಪಲ್ ತಲಾಖ್ ಅಂಗೀಕರಿಸಲಾಯ್ತು.

ಮಸೂದೆ ಅಂಗೀಕಾರಕ್ಕೂ ಮೊದಲು ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ತ್ರಿವಳಿ ತಲಾಖ್ ಮಸೂದೆ ಯಾವುದೇ ಸಮುದಾಯದ, ಧರ್ಮದ ವಿರುದ್ಧವಾಗಿಲ್ಲ. ಈ ವಿಧೇಯಕ ಮಹಿಳಾ ಹಕ್ಕುಗಳನ್ನು ರಕ್ಷಣೆ ಮಾಡಲಿದೆ. ತಲಾಖ್ ಪದ್ಧತಿಯನ್ನು 20 ಇಸ್ಲಾಮಿಕ್ ದೇಶಗಳು ನಿಷೇಧ ಮಾಡಿವೆ. ಹೀಗಿರುವಾಗ ಜಾತ್ಯತೀತ ದೇಶವೆಂದು ಕರೆಸಿಕೊಳ್ಳುವ ಭಾರತದಲ್ಲಿ ಮಾತ್ರ ತಲಾಖ್ ಪದ್ಧತಿ ಜಾರಿಯಲ್ಲಿದೆ. ಇದನ್ನು ಏಕೆ ನಿಷೇಧ ಮಾಡಬಾರದು ಎಂದು ಪ್ರಶ್ನಿಸಿ, ತಲಾಖ್ ಮಸೂದೆ ವಿಚಾರದಲ್ಲಿ ರಾಜಕಾರಣ ಸಲ್ಲದು. ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.

ravi shankar prasad

ರವಿಶಂಕರ್ ಪ್ರಸಾದ್ ಅವರ ಮನವಿಗೆ ಪ್ರತಿಕ್ರಿಯೆ ನೀಡಿದ ಸಂಸದೀಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ತ್ರಿವಳಿ ತಲಾಖ್ ಚರ್ಚೆಗೆ ನಮ್ಮ ಪಕ್ಷದ ಸದಸ್ಯರು ಸಿದ್ಧರಾಗಿದ್ದಾರೆ. ಆದರೆ ಮಸೂದೆಯನ್ನು ಅಂಗೀಕರಿಸುವ ಮುನ್ನ ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದರು.

ಇದೇ ವೇಳೆ ಧ್ವನಿಗೂಡಿಸಿದ ಸಂಸದೆ ಸುಷ್ಮಿತಾ ದೇವ್ ಅವರು, ತ್ರಿವಳಿ ತಲಾಖ್‍ನ್ನು ಕ್ರಿಮಿನಲ್ ಅಪರಾಧನವನ್ನಾಗಿ ಮಾಡುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಹೀಗಾಗಿ ಮಸೂದೆಯನ್ನು ಸಂಸತ್‍ನ ಜಂಟಿ ಆಯ್ಕೆ ಸಮಿತಿಗೆ ವರ್ಗಾವಣೆ ಮಾಡಬೇಕೆಂದು ಎಂದು ಒತ್ತಾಯಿಸಿದರು.

ಮಸೂದೆಯಲ್ಲಿ ಏನಿದೆ?:
2018ರ ಪರಿಷ್ಕೃತ ಮಸೂದೆ ಪ್ರಕಾರ ತ್ರಿವಳಿ ತಲಾಖ್ ಕಾನೂನು ಬಾಹಿರ ಮತ್ತು ಜಾಮೀನು ರಹಿತ ಕ್ರಿಮಿನಲ್ ಅಪರಾಧವಾಗಲಿದೆ. ತಲಾಖ್ ನೀಡುವ ಮುಸ್ಲಿಂ ಪುರುಷರಿಗೆ ಮೂರು ವರ್ಷ ಜೈಲು ಶಿಕ್ಷೆಯ ಪ್ರಸ್ತಾವ ಈ ಮಸೂದೆಯಲ್ಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *