ಮಂಗಳೂರು ಹಾಸನ ರೈಲ್ವೇ ಟ್ರ್ಯಾಕ್ ಮೇಲೆ ಗುಡ್ಡ ಕುಸಿತ – ಪ್ರಯಾಣಿಕರ ಪರದಾಟ

Public TV
1 Min Read
HSN TRAIN

ಹಾಸನ: ಭಾರೀ ಮಳೆಗೆ ಮಂಗಳೂರು- ಹಾಸನ ರೈಲು ಮಾರ್ಗದ ಮೇಲೆ ಮತ್ತೆ ಗುಡ್ಡ ಕುಸಿತ ಪರಿಣಾಮ ರೈಲ್ವೇ ಸಂಚಾರ ಸ್ಥಗಿತಗೊಂಡಿದೆ.

ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ್ಟಿದ್ದ ರೈಲು ಮಾರ್ಗ ಮದ್ಯ ಸಕಲೇಶಪುರದಲ್ಲಿ ನಿಂತಿದ್ದು, ಇನ್ನು ಮಂಗಳೂರಿನಿಂದ ಹೊರಟ್ಟಿದ್ದ ರೈಲು ಸುಬ್ರಹ್ಮಣ್ಯದಲ್ಲಿ ನಿಂತಿದೆ. ಮಾರ್ಗ ಮಧ್ಯೆ ಸಂಚಾರ ಸ್ಥಗಿತವಾದ ಕಾರಣ ಹಲವರು ತೊಂದರೆ ಅನುಭವಿಸಿದ್ದಾರೆ. ತುರ್ತು ಕಾರ್ಯದ ಮೇಲೆ ತೆರಳಬೇಕಿದ್ದ ಹಲವು ಪ್ರಯಾಣಿಕರು ಬಸ್ ಹಾಗೂ ಇತರೇ ವಾಹನಗಳಲ್ಲಿ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.

ಸದ್ಯ ಗುಡ್ಡ ಕುಸಿತದ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿರುವ ರೈಲ್ವೇ ಅಧಿಕಾರಿಗಳು ಮಣ್ಣು ತೆರವು ಕಾರ್ಯ ಮುಂದುವರಿಸಿದ್ದಾರೆ. ಮೂಲಗಳ ಪ್ರಕಾರ ಕಾರ್ಯಾಚರಣೆ ರಾತ್ರಿ ವೇಳೆಗೆ ಪೂರ್ಣಗೊಳ್ಳುವ ಅವಕಾಶವಿದೆ. ಕಳೆದ ಜೂನ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಮೂರು ಬಾರಿ ಗುಡ್ಡ ಕುಸಿದು ರೈಲು ಸಂಚಾರ ಸ್ಥಗಿತಗೊಂಡಿತ್ತು.

vlcsnap 2018 07 03 18h30m33s58

Share This Article
Leave a Comment

Leave a Reply

Your email address will not be published. Required fields are marked *