Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಜೀವನದಲ್ಲಿ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ ಇದು: ಈಶ್ವರಪ್ಪ

Public TV
Last updated: July 23, 2019 11:48 am
Public TV
Share
2 Min Read
eshwarappa
SHARE

ಬೆಂಗಳೂರು: ಇದು ನನ್ನ ಜೀವನದಲ್ಲೇ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ. ಆದರೆ ಈಗ ಮಾತನಾಡುತ್ತಿದ್ದೇನೆ ಎಂದು ಹೇಳಿ ಈಶ್ವರಪ್ಪ ದೋಸ್ತಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ 10 ಗಂಟೆಗೆ ಸದನ ಆರಂಭಗೊಂಡಾಗ ಬಿಜೆಪಿ ಶಾಸಕರು ಸದನಕ್ಕೆ ಆಗಮಿಸಿದ್ದರೆ, ದೋಸ್ತಿ ಪಕ್ಷದ ಕೇವಲ 6 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು. ಇದನ್ನು ನೋಡಿ ಬಿಜೆಪಿ ಶಾಸಕರು ದೋಸ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

session speaker copy

ಸದನದಲ್ಲಿ ಮಾತನಾಡಿದ ಈಶ್ವರಪ್ಪ, ಯಾರು ಕೂಡ ಸಭೆಯಲ್ಲಿ ಮಾತನಾಡಬೇಡಿ ಎಂದು ನಮ್ಮ ನಾಯಕರು ನಮಗೆ ಸೂಚಿಸಿದ್ದರು. ಹೀಗಾಗಿ ಇಷ್ಟು ದಿನ ನಾನು ಸುಮ್ಮನೆ ಕುಳಿತು ಆಡಳಿತ ಪಕ್ಷದವರ ಮಾತುಗಳನ್ನು ಅಲಿಸುತ್ತಿದ್ದೆ. ಇದು ನನ್ನ ಜೀವನದಲ್ಲಿಯೇ ನಾನು ಬಾಯಿ ಮುಚ್ಚಿಕೊಂಡು ಕುಳಿತ ಮೊದಲ ಅಧಿವೇಶನ. ಆಡಳಿತ ಪಕ್ಷದವರು ಮಾತನಾಡಲು ಸಿದ್ಧವಿಲ್ಲ. ಅದಕ್ಕೆ ಇಂದು ಮಾತನಾಡುತ್ತಿದ್ದೇನೆ ಎಂದು ಕಿಡಿಕಾರಿದರು.

eshwarappa 1 1

ವಿಶ್ವಾಸಮತಯಾಚನೆಗೆ ಸಿಎಂ ಅವರೇ ಇನ್ನೂ ಬಂದಿಲ್ಲ ಎಂದ ಮೇಲೆ ಬೇರೆ ಶಾಸಕರು ಯಾಕೆ ಬರುತ್ತಾರೆ? ಯಥಾ ರಾಜ ತಥಾ ಪ್ರಜಾ ಎನ್ನುವ ಹಾಗಿದೆ ಪರಿಸ್ಥಿತಿ. ನಾನು ಉಳಿದ ವಿಚಾರದ ಬಗ್ಗೆ ಮಾತನಾಡಲ್ಲ. ಈ ಸದನದ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ತಾವು ಸೂಚನೆ ಕೊಟ್ಟ ಸಮಯಕ್ಕೆ ಶಾಸಕರು ಇಲ್ಲಿ ಬಂದು ಕೂರಬೇಕಿತ್ತು. ಅದನ್ನು ಬಿಟ್ಟು ಮಧ್ಯಾಹ್ನ 3, 4 ಗಂಟೆ ಹೊತ್ತಿಗೆ ನಾವೇನು ಮಾತನಾಡಿಲ್ಲ, ನಮಗೆ ಅವಕಾಶ ಕೊಡಿ ಎನ್ನುತ್ತಾರೆ. ಹೊಸ ಶಾಸಕರು ಬಂದಿದ್ದೇವೆ, ಜನರ ಸಮಸ್ಯೆ ಹೇಳಲು 5-10 ನಿಮಿಷ ಸಮಯ ಕೊಡಿ ಎಂದು ಕೇಳುತ್ತಾರೆ ಎಂದು ದೂರಿದರು.

session congress mla copy

ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೂ ಅವರು ಕೂಗುವುದಕ್ಕೆ ಶುರುಮಾಡಿದರೆ, ನಾವು ಅನುಭವಿಸಬೇಕು. ನನ್ನ ಜೀವನದಲ್ಲಿ ಶಾಸಕನಾಗಿ ಬಂದಮೇಲೆ ಇಂತಹ ಪರಿಸ್ಥಿತಿಯನ್ನು ನಾನು ಎಂದೂ ಕಂಡಿರಲಿಲ್ಲ. ಸದನದ ಪಾವಿತ್ರ್ಯತೆ ಹಾಳಾಗಿದೆ. ಶಾಸಕರು ಇಷ್ಟಪಟ್ಟಾಗ ಅವರೇ ಮಾತನಾಡುತ್ತಾರೆ. ಅವರಿಗೆ ಕಷ್ಟವಾದಾಗ ಕಲಾಪ ಮುಂದಕ್ಕೆ ಹಾಕುತ್ತಾರೆ. ಹೊಟ್ಟೆ ಹಸಿದಾಗ ಒಂದು ರೀತಿ, ಆಮೇಲೆ ಇನ್ನೊಂದು ರೀತಿ ವರ್ತಿಸುತ್ತಾರೆ ಎಂದು ಹರಿಹಾಯ್ದರು.

Speaker Ramesh Kumar

ನಾವು 105 ಮಂದಿ ಇದ್ದೇವೆ, ನಮ್ಮಲ್ಲೂ ಕೂಡ ಹೊಸ ಶಾಸಕರು ಇದ್ದಾರೆ. ಈ ಸದನವನ್ನು ನೋಡಿ ಕಲಿತಿದ್ದೇನು? 50-60 ಮಂದಿ ಆಡಳಿತ ಪಕ್ಷದವರು ಬಂದು ಸಭೆ ನಡೆಯೋಕೆ ಬಿಡಲ್ಲ ಎನ್ನುತ್ತಾರೆ. ನಿಮ್ಮ ಧ್ವನಿ ಜೋರಾಗಿದೆ ಅದಕ್ಕೆ ಸಭೆ ನಿಲ್ಲಿಸಲು ಯತ್ನಿಸುವ ಶಾಸಕರು ವಾಪಸ್ ಬಂದು ಕುಳಿತುಕೊಳ್ಳುತ್ತಿದ್ದರು. ಆದರೆ ಸಣ್ಣ ಧ್ವನಿಯ ಸ್ಪೀಕರ್ ಬಂದರೆ ಏನು ಗತಿ ಎಂದು ಆತಂಕ ವ್ಯಕ್ತಪಡಿಸಿದರು.

kharge

ಈ ವೇಳೆ ಪ್ರಿಯಾಂಕ್ ಖರ್ಗೆ ಎಲ್ಲರೂ ಬರುತ್ತಿದ್ದಾರೆ. ಆಮೇಲೆ ಮಾತನಾಡಿ ಎಂದಿದ್ದಕ್ಕೆ ಸಿಟ್ಟಿಗೆದ್ದ ಈಶ್ವರಪ್ಪ ಅವರು, ಅವರೆಲ್ಲಾ ಬರುವವರಿಗೂ ನೀವು ಬೈಸಿಕೊಳ್ಳಿ. ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ಹೊರಗಿನ ಜನರಿಗೆ ತಿಳಿಯಲಿ. ವಿರೋಧ ಪಕ್ಷದವರೇ ಸದನಕ್ಕೆ ಬಂದು ಕುಳಿತಿದ್ದಾರೆ. ಸ್ಪೀಕರ್ ಕೂಡ ಬಂದಿದ್ದಾರೆ. ಆದ್ರೆ ಆಡಳಿತ ಪಕ್ಷದವರು ಇನ್ನೂ ಬಂದಿಲ್ಲ ಎಂದು ಹೇಳಿ ತಿರುಗೇಟು ಕೊಟ್ಟರು.

TAGGED:bengaluruCoalition GovernmenteshwarappaPublic TVsessionspeakerಈಶ್ವರಪ್ಪಪಬ್ಲಿಕ್ ಟಿವಿಬೆಂಗಳೂರುಮೈತ್ರಿ ನಾಯಕರುಸದನಸ್ಪೀಕರ್
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
13 hours ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
14 hours ago
Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
17 hours ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
1 day ago

You Might Also Like

Manisha Thapa
Crime

Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

Public TV
By Public TV
25 minutes ago
Ahmedabad Planecrash
Latest

ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

Public TV
By Public TV
50 minutes ago
CRIME
Bengaluru City

1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್

Public TV
By Public TV
1 hour ago
krs dam selfie
Latest

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಭದ್ರತಾ ವೈಫಲ್ಯ?- ಡ್ಯಾಂನ ಕ್ರಸ್ಟ್ ಗೇಟ್ ಬಳಿ ಓಡಾಡುತ್ತ ಸೆಲ್ಫಿ ವೀಡಿಯೋ

Public TV
By Public TV
2 hours ago
Haveri Car Bus Accident
Crime

ಹಾವೇರಿ | ಸಾರಿಗೆ ಬಸ್‌ಗೆ ಕಾರು ಡಿಕ್ಕಿ – ಇಬ್ಬರು ದುರ್ಮರಣ, ಓರ್ವ ಗಂಭೀರ

Public TV
By Public TV
2 hours ago
Narayanapura Dam
Districts

ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?