ರಾಯಚೂರು: ಬ್ಯಾಂಕ್ನಿಂದ ಡ್ರಾ ಮಾಡಿಕೊಂಡ ಬಳಿಕ ಹಣ್ಣು ಖರೀದಿಸಲು ಹೋಗಿದ್ದ ರೈತನ ಬೈಕ್ನಿಂದ ಬರೋಬ್ಬರಿ 7 ಲಕ್ಷ ರೂ. ಲೂಟಿ ಹೊಡೆದು ಪರಾರಿಯಾಗಿರುವ ಘಟನೆ ರಾಯಚೂರು (Raichuru) ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರಿನಲ್ಲಿ ನಡೆದಿದೆ.
ಶ್ರೀನಿವಾಸ ರಾವ್ ಎಂಬುವವರು ಹಣ ಕಳೆದುಕೊಂಡಿದ್ದು, ಕಳ್ಳತನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: 23 ವರ್ಷಗಳ ನಂತರ ಮತ್ತೆ ‘ಅಪ್ಪು’ ಸಿನಿಮಾ ನೋಡಿ ಎಮೋಷನಲ್ ಆದ ರಕ್ಷಿತಾ
- Advertisement3
ಮೆಣಸಿನಕಾಯಿ ಮಾರಾಟ ಮಾಡಿದ್ದರಿಂದ ಬಂದ ಹಣವನ್ನು ಬ್ಯಾಂಕ್ನಿಂದ ಡ್ರಾ ಮಾಡಿಕೊಂಡಿದ್ದರು. ಈ ವೇಳೆ ಹಣವನ್ನು ಬೈಕ್ನಲ್ಲಿಯೇ ಬಿಟ್ಟು ಹಣ್ಣು ಖರೀದಿಸಲು ಹೋಗಿದ್ದಾರೆ. ಇದೇ ಸರಿಯಾದ ಸಮಯವೆಂದುಕೊಂಡು ಬಂದ ಕಳ್ಳರು ಬೈಕ್ನಲ್ಲಿದ್ದ 7 ಲಕ್ಷ ರೂ. ಹಣವನ್ನು ದೋಚಿದ್ದಾರೆ.
- Advertisement
ಕಳ್ಳತನಕ್ಕೂ ಮುನ್ನ ಶ್ರೀನಿವಾಸ ರಾವ್ ಹಣ ಡ್ರಾ ಮಾಡಿಕೊಂಡಿದ್ದು, ಅದನ್ನು ಬೈಕ್ನಲ್ಲಿ ಬಿಟ್ಟು ಹೋಗಿದ್ದು, ಎಲ್ಲವನ್ನು ಸರಿಯಾಗಿ ಕಳ್ಳರು ಗಮನಿಸಿದ್ದರು. ಕೈಚಳಕ ತೋರಿಸಿ ಬೈಕ್ನಲ್ಲಿದ್ದ 7 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ.
ಸದ್ಯ ಶ್ರೀನಿವಾಸ ರಾವ್ ದೂರು ನೀಡಿದ್ದು, ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪೋಕ್ಸೊ ಕೇಸ್ | ವಿಶೇಷ ನ್ಯಾಯಾಲಯದ ಖುದ್ದು ಹಾಜರಾತಿ ಆದೇಶಕ್ಕೆ ಹೈಕೋರ್ಟ್ ತಡೆ