ಟಾಲಿವುಡ್ ನಟ ನಾಗಚೈತನ್ಯ (Nagachaitanya) ಸದ್ಯ ‘ತಾಂಡೇಲ್’ (Thandel) ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ನೀಡಿದ ಸಂದರ್ಶನವೊಂದರಲ್ಲಿ ಸಮಂತಾ ಜೊತೆ ದಾಂಪತ್ಯ ಅಂತ್ಯವಾಗಿದ್ದೇಕೆ? ಎಂದು ನಟ ಮುಕ್ತವಾಗಿ ಮಾತನಾಡಿದ್ದಾರೆ. ಸಮಂತಾಗೆ (Samantha) ಡಿವೋರ್ಸ್ (Divorce) ಕೊಡುವಾಗ ಸಾವಿರ ಬಾರಿ ಯೋಚಿಸಿದ್ದೇನೆ ಎಂದು ನಾಗಚೈತನ್ಯ ಹೇಳಿದ್ದಾರೆ. ಇದನ್ನೂ ಓದಿ:ಶೂಟಿಂಗ್ಗೆ ಬಂದ ನಟಿಯ ತಾಯಿ ಜೊತೆ ಸಾಲ- ‘ರಣಾಕ್ಷ’ ನಿರ್ಮಾಪಕನ ಮೇಲೆ FIR ದಾಖಲು
Advertisement
ನಾಗಚೈತನ್ಯ ಸಂದರ್ಶನವೊಂದರಲ್ಲಿ ಮಾತನಾಡಿ, ನಾವು ನಮ್ಮದೇ ಕಾರಣಗಳಿಂದ ನಾವು ದೂರ ಆಗಲು ನಿರ್ಧರಿಸಿದೆವು. ನಮ್ಮ ಈ ನಿರ್ಧಾರವನ್ನು ಪರಸ್ಪರ ಗೌರವಿಸುತ್ತೇವೆ. ನಾವು ಬೇರೆ ಆಗಿ ನಮ್ಮ ಜೀವನದಲ್ಲಿ ನಾವು ಮುಂದುವರೆಯುತ್ತಿದ್ದೇವೆ. ಹೀಗಿದ್ರೂ ಮತ್ತೆ ಯಾಕೆ ವಿವರಣೆ ನೀಡಬೇಕು ಎಂಬುದು ಅರ್ಥವಾಗುತ್ತಿಲ್ಲ. ಜನರು ಮತ್ತು ಮಾಧ್ಯಮದವರು ನಮ್ಮ ನಿರ್ಧಾರವನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ. ನಮ್ಮ ವೈಯಕ್ತಿಕ ಜೀವನವನ್ನು ಗೌರವಿಸಿ. ನಮ್ಮ ವಿಚಾರ ಕೆಲವರಿಗೆ ಮನರಂಜನೆ ಆಗಿದೆ ಎಂದು ಖಾರವಾಗಿ ನಟ ಮಾತನಾಡಿದ್ದಾರೆ.
Advertisement
Advertisement
ನಾವು ನಮ್ಮದೇ ಆದ ಜೀವನ ನಡೆಸುತ್ತಿದ್ದೇವೆ. ಜೀವನದಲ್ಲಿ ನಾನು ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ನಾನು ಹಾಗೂ ಶೋಭಿತಾ ಖುಷಿಯಾಗಿದ್ದೇವೆ. ಇಬ್ಬರೂ ಪರಸ್ಪರ ಗೌರವಿಸುತ್ತೇವೆ. ಡಿವೋರ್ಸ್ ಪಡೆಯೋದು ಸೆನ್ಸಿಟಿವ್ ವಿಚಾರ. ನಾನು ಕೂಡ ಒಡೆದು ಹೋದ ಕುಟುಂಬದಿಂದ ಬಂದವನು. ಆ ನೋವು ಏನು ಎಂಬುದು ನನಗೆ ಗೊತ್ತು. ಹಾಗಾಗಿ ಸಮಂತಾಗೆ ಡಿವೋರ್ಸ್ ಕೊಡುವಾಗ ಸಾವಿರ ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. ಇಬ್ಬರು ಒಮ್ಮತದಿಂದಲೇ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ ನಾಗಚೈತನ್ಯ.
Advertisement
ಅಂದಹಾಗೆ, ಸಮಂತಾ ಹಾಗೂ ನಾಗಚೈತನ್ಯ ಅವರು 2017ರಲ್ಲಿ ಮದುವೆಯಾದರು. 2021ರಲ್ಲಿ ಇಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿದರು. ಬಳಿಕ 2024ರ ಡಿಸೆಂಬರ್ನಲ್ಲಿ ನಟಿ ಶೋಭಿತಾ ಜೊತೆ ನಾಗಚೈತನ್ಯ 2ನೇ ಮದುವೆಯಾದರು.