ಹುಬ್ಬಳ್ಳಿ: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ವಿವಿಧ ಬೇಡಿಕೆಯಿಟ್ಟು ಏಳು ದಿನಗಳಿಂದ ಉಪವಾಸ ಮಾಡಿ ಹುಚ್ಚಾಟ ನಡೆಸಿದ ಉಗ್ರ ಈಗ ಆಸ್ಪತ್ರೆ ಸೇರಿದ್ದಾನೆ.
ಮೊಹಮ್ಮದ್ ಫಹಾದ್ (42) ಜೈಲಿನಲ್ಲಿ ಹುಚ್ಚಾಟ ನಡೆಸಿದ ಉಗ್ರ. ಕೆಆರ್ಎಸ್ ಡ್ಯಾಂ ಸೇರಿದಂತೆ ದೇಶದ ವಿವಿಧ ಕಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಮೊಹಮ್ಮದ್ ಫಹಾದ್ನನ್ನು, 2006ರ ಅಕ್ಟೋಬರ್ 26ರಲ್ಲಿ ಬಂಧಿಸಲಾಗಿತ್ತು. ಮೊದಲಿಗೆ ಮೈಸೂರು ಜೈಲಿನದ್ದ ಮೊಹಮ್ಮದ್ನ್ನನ್ನು, ಕಳೆದ ವರ್ಷ ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇದನ್ನೂ ಓದಿ: ಲವ್ವರ್ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್ಮ್ಯಾನ್
ತನ್ನ ಮೇಲಿರುವ ಪ್ರಕರಣಗಳ ತನಿಖೆ ಶೀಘ್ರವಾಗಿ ಪೂರ್ಣ ಮಾಡಬೇಕು. ತನ್ನ ಸಹಚರರು ಇರುವ ಬೆಂಗಳೂರು ಅಥವಾ ಕಾಶ್ಮೀರ ಜೈಲಿಗೆ ಸ್ಥಳಾಂತರಿಸಬೇಕು ಜೊತೆಗೆ ಬೇರೆ ಖೈದಿಗಳ ಜೊತೆಗೆ ಬೇರೆಯುವ ಅವಕಾಶ ನೀಡಬೇಕೆಂದು ಉಗ್ರ ಪಟ್ಟು ಹಿಡಿದಿದ್ದ. ಖೈದಿಯ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನು ಜೈಲರ್ ನೀಡಿದ್ದರು. ಇದನ್ನೂ ಓದಿ: ಥೈಲ್ಯಾಂಡ್ ಪೂಲ್ನಲ್ಲಿ ಮೈಮರೆತ ಮಂದಿರಾ ಬೇಡಿ
ಹೀಗಿದ್ದರೂ, ಕಳೆದ ಏಳು ದಿನಗಳಿಂದ ಉಪವಾಸ ಮಾಡಿ ಉಗ್ರ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಸದ್ಯ ಕಿಮ್ಸ್ ಉಗ್ರನಿಗೆ ಚಿಕಿತ್ಸೆ ನೀಡಲಾಗುತ್ತಿದೆ.