ವೇದಿಕೆಯಲ್ಲೇ ಸಚಿವ ರೇವಣ್ಣ, ಪ್ರೀತಂಗೌಡ ವಾಕ್ಸಮರ..!

Public TV
1 Min Read
HSN 5

ಹಾಸನ: 70ನೇ ಗಣರಾಜ್ಯೋತ್ಸವ ಸಮಾರಂಭದ ವೇದಿಕೆಯಲ್ಲೇ ಲೋಕೋಪಯೋಗಿ ಸಚಿವ ರೇವಣ್ಣ ಹಾಗೂ ಶಾಸಕ ಪ್ರೀತಂಗೌಡ ಮಧ್ಯೆ ವಾಗ್ವಾದ ನಡೆದಿದೆ.

ಹಾಸನ ಬಿ.ಎಂ. ರಸ್ತೆಯ ಅಗಲೀಕರಣ ವಿಚಾರದಲ್ಲಿ ಕಿತ್ತಾಟ ನಡೆದಿದೆ. ನನ್ನ ಗಮನಕ್ಕೆ ಬಾರದೆ ರಸ್ತೆ ಕಾಮಗಾರಿ ಮಾಡಿದ್ದೀರಾ ಎಂದು ಶಾಸಕ ಪ್ರೀತಂಗೌಡ ಅವರು ವೇದಿಕೆಯಲ್ಲೇ ಸಚಿವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಚಿವರು ನಂಗೇನೂ ಗೊತ್ತಿಲ್ಲ ಎಲ್ಲ ಡಿಸಿ ಮೇಡಂ ಮಾಡಿರೋದು. ಹೋಗಿ ಅವರನ್ನೇ ಕೇಳು ಎಂದು ಹೇಳಿದ್ದಾರೆ.

HSN 1 1

ಇದರಿಂದ ಸಿಡಿಮಿಡಿಗೊಂಡ ಶಾಸಕರು, ನಿಮ್ಮ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡುತ್ತೇನೆ ಅಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಹಕ್ಕುಚ್ಯುತಿ ಆದ್ರೆ ಏನು ಅಂತಾ ಮೊದಲು ತಿಳಿದುಕೊಂಡು ಬಾ ಎಂದು ಶಾಸಕರಿಗೆ ತಿರುಗೇಟು ನೀಡಿದ್ದಾರೆ.

https://www.youtube.com/watch?v=O_eS2ctIFOE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *