Tag: ಶರತ್ ಬಚ್ಚೇಗೌಡ

  • ಹೊಸಕೋಟೆ ಅಭಿವೃದ್ಧಿಗೆ ಸಿಎಂ ಭೇಟಿ ಮಾಡ್ತೀನಿ – ಶರತ್ ಬಚ್ಚೇಗೌಡ

    ಹೊಸಕೋಟೆ ಅಭಿವೃದ್ಧಿಗೆ ಸಿಎಂ ಭೇಟಿ ಮಾಡ್ತೀನಿ – ಶರತ್ ಬಚ್ಚೇಗೌಡ

    – ನನ್ನ ತಂದೆ ಪಕ್ಷ ವಿರೋಧಿಯಲ್ಲ

    ಬೆಂಗಳೂರು: ಹೊಸಕೋಟೆ ಕ್ಷೇತ್ರದ ಅಭಿವೃದ್ಧಿಗೆ ಮಾನ್ಯ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇವೆ ಎಂದು ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.

    ಹೊಸಕೋಟೆಯ ತಮ್ಮ ಕಚೇರಿಯಲ್ಲಿ ಬೆಂಬಲಿಗರ ಅಭಿನಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಶರತ್ ಬಚ್ಚೇಗೌಡ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸರ್ಕಾರ ಅಂತ ಹೇಳುವುದಕ್ಕಿಂತ ಇದು ಜನರ ಸರ್ಕಾರ. ಜನರೇ ಅವರನ್ನು ಅನರ್ಹರು ಎಂದು ತಿರಸ್ಕಾರ ಮಾಡಿದ್ದಾರೆ. ಮುಖ್ಯಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಜೊತೆ ನಿಲ್ಲುತ್ತಾರೆ ಎನ್ನು ವಿಶ್ವಾಸವಿದೆ ಎಂದು ತಿಳಿಸಿದರು.

    bsy 3

    ಹೊಸಕೋಟೆ ಕ್ಷೇತ್ರದಲ್ಲಿ ಅನರ್ಹ ಶಾಸಕರನ್ನು ಸೋಲಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡಿದ್ದಾರೆ. ಕ್ಷೇತ್ರದ ಹಿತ ಹಾಗೂ ಅಭಿವೃದ್ಧಿಗೆ ಇಂದು ಸ್ವತಂತ್ರ ಅಭ್ಯರ್ಥಿಯಾದ ನನಗೆ ಮತದಾರರು ಹನ್ನೊಂದು ಸಾವಿರ ಮತಗಳಿಂದ ಗೆಲುವನ್ನು ನೀಡಿದ್ದಾರೆ. ಬಚ್ಚೇಗೌಡರು ನನಗೆ ಬೆಂಬಲ ನೀಡಿದ್ದಾರೆಂಬ ಆರೋಪಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಅವರು ಯಾವತ್ತೂ ಬಂದು ನನ್ನ ಪರ ಪ್ರಚಾರ ಮಾಡಿಲ್ಲ ಪಕ್ಷ ವಿರೋಧಿ ಚಟುವಟಿಕೆಯಲ್ಲೂ ಭಾಗವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಈಗಾಗಲೇ ಮಾಧ್ಯಮಗಳಲ್ಲಿ ನನ್ನನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ನಾಯಕರುಗಳು ಹೇಳಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ಹೆಜ್ಜೆ ಹಿಡುತ್ತೇವೆ. ಕ್ಷೇತ್ರದ ಅಭಿವೃದ್ಧಿಯ ವಿಚಾರವಾಗಿ ಮುಖ್ಯಮಂತ್ರಿಗಳ ಭೇಟಿ ಮಾಡುವುದಾಗಿ ಈ ವೇಳೆ ತಿಳಿಸಿದರು.

  • ಶರತ್ ಬಚ್ಚೇಗೌಡರನ್ನ ಪಕ್ಷಕ್ಕೆ ಸೇರಿಸಲ್ಲ: ಬಿಜೆಪಿ ಮುಖಂಡ

    ಶರತ್ ಬಚ್ಚೇಗೌಡರನ್ನ ಪಕ್ಷಕ್ಕೆ ಸೇರಿಸಲ್ಲ: ಬಿಜೆಪಿ ಮುಖಂಡ

    ಬೆಂಗಳೂರು/ಹೊಸಕೋಟೆ: ಉಪಚುನಾವಣೆಯಲ್ಲಿ ಗೆದ್ದಿರುವ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರನ್ನ ಪಕ್ಷಕ್ಕೆ ಸೇರಿಸಲ್ಲ ಎಂದು ಬಿಜೆಪಿ ಮುಖಂಡ ಜಯರಾಜ್ ಹೇಳಿದ್ದಾರೆ.

    ಹೊಸಕೋಟೆಯಲ್ಲಿರುವ ಎಂಟಿಬಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯರಾಜ್, ಮಂತ್ರಿ ಸ್ಥಾನ ತ್ಯಾಗ ಮಾಡಿ ಬಿಜೆಪಿ ಸರ್ಕಾರ ರಚಿಸಲು ಪ್ರಮುಖ ಕಾರಣವಾಗಿರುವ ಎಂಟಿಬಿ ನಾಗರಾಜ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು. ಬಿಜೆಪಿ ಸರ್ಕಾರಕ್ಕೆ ಎಂಟಿಬಿ ಮಂತ್ರಿ ಸ್ಥಾನ ತ್ಯಾಗ ಮಾಡಿದವರು. ಅವರ ತ್ಯಾಗಕ್ಕೆ ಸಿಎಂ ಕೈ ಹಿಡಿಯಬೇಕು. ಎಂಟಿಬಿ ಅವರ ಅಭಿವೃದ್ಧಿ ಯೋಜನೆಗೆ ಕುತ್ತು ಬಾರದಂತೆ ಸಿಎಂ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

    MTB Followers

    ಸೋತವರಿಗೆ ಮಂತ್ರಿ ಸ್ಥಾನ ಕೊಡಬಾರದು ಅಂತ ಈಶ್ವರಪ್ಪರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಯರಾಜ್, ಎಂಟಿಬಿ ಶಾಸಕ ಸ್ಥಾನದ ಜೊತೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವರು. ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಿ ಮತ್ತು ಕಾನೂನು ತೊಡಕು ಸರಿಪಡಿಸಿ ಎಂಟಿಬಿ ಅವರನ್ನ ಮಂತ್ರಿ ಮಾಡಬೇಕು. ಈ ಬಗ್ಗೆ ಕ್ಷೇತ್ರದ ಐದು ಸಾವಿರ ಜನ ಸಿಎಂ ಭೇಟಿ ಮಾಡಿ ಮನವಿ ಮಾಡುತ್ತೇವೆ. ಕಾಂಗ್ರೆಸ್ ನಲ್ಲಿ ಎಂಟಿಬಿ ಅಭಿಮಾನಿಗಳಿದ್ದಾರೆ ಪಕ್ಷ ಬಿಡೋಕೆ ಸಿದ್ಧರಿರಲಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಕಾರ್ಯಕರ್ತರಿಗೆ ಸಂದೇಶ ರವಾನಿಸಿದರು.

  • ಪಟಾಕಿ ಸಿಡಿಸಿದ್ದಕ್ಕೆ ಶರತ್, ಎಂಟಿಬಿ ಬೆಂಬಲಿಗರ ನಡುವೆ ಮಾರಾಮಾರಿ

    ಪಟಾಕಿ ಸಿಡಿಸಿದ್ದಕ್ಕೆ ಶರತ್, ಎಂಟಿಬಿ ಬೆಂಬಲಿಗರ ನಡುವೆ ಮಾರಾಮಾರಿ

    ಬೆಂಗಳೂರು: ಸೋಮವಾರ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಎಂಟಿಬಿ ನಾಗರಾಜ್ ವಿರುದ್ಧ ಪಕ್ಷೇತರವಾಗಿ ನಿಂತು ಶರತ್ ಬಚ್ಚೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದೇ ಖುಷಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಕ್ಕೆ ಎಂಟಿಬಿ ಹಾಗೂ ಶರತ್ ಬೆಂಗಲಿಗರ ನಡುವೆ ಮಾರಾಮಾರಿ ನಡೆದಿದೆ.

    ಹೊಸಕೋಟೆ ತಾಲೂಕಿನ ಬಾಣಮಾಕನಹಳ್ಳಿಯಲ್ಲಿ ಈ ಗಲಾಟೆ ನಡೆದಿದೆ. ಶರತ್ ಬಚ್ಚೇಗೌಡ ಅವರು ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಬೆಂಗಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಇತ್ತ ಎಂಟಿಬಿ ಸೋಲನ್ನು ಕಂಡಿದ್ದಕ್ಕೆ ಅವರ ಬೆಂಬಲಿಗರು ಬೇಸರದಲ್ಲಿದ್ದರು. ಆದರೆ ಅವರೆದುರೆ ಶರತ್ ಬೆಂಬಲಿಗರು ಗೆಲುವಿನ ಸಂಭ್ರಮಾಚರಣೆ ಮಾಡಿ, ಪಟಾಕಿ ಸಿಡಿಸಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿ, ಮಾತಿಗೆ ಮಾತು ಬೆಳೆದು ಎರಡು ಗುಂಪು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

    Sharath Bachchegowda

    ಗಲಾಟೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಮಂಜುನಾಥ್ ಅವರ ತಲೆಗೆ ಪಟ್ಟು ಬಿದ್ದಿದ್ದು, ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ನಂದಗುಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    MTB 1

    ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ 11,484 ಮತಗಳ ಅಂತರದಿಂದ ಎಂಟಿಬಿ ನಾಗರಾಜ್ ವಿರುದ್ಧ ಜಯಗಳಿಸಿದ್ದಾರೆ. ಶರತ್ ಬಚ್ಚೇಗೌಡರಿಗೆ 81,667 ಮತಗಳು ಬಿದ್ದರೆ ಎಂಟಿಬಿ ನಾಗರಾಜ್ ಅವರಿಗೆ 70,183 ಮತಗಳು ಬಿದ್ದಿತ್ತು. ಜೆಡಿಎಸ್ ಪರವಾಗಿ 41,443 ವೋಟ್ ಚಲಾವಣೆಯಾಗಿದೆ. ಕಳೆದ ಬಾರಿ ಶರತ್ ಬಚ್ಚೇಗೌಡ ವಿರುದ್ಧ ಎಂಟಿಬಿ 7,597 ಮತಗಳ ಅಂತರದಿಂದ ಜಯಗಳಿಸಿದ್ದರು. ಶರತ್ ಬಚ್ಚೇಗೌಡ ಅವರಿಗೆ 91,227 ಮತಗಳು ಬಿದ್ದಿತ್ತು.

  • ನನ್ನ ಸೋಲಿಗೆ ಬಚ್ಚೇಗೌಡ್ರೇ ನೇರ ಕಾರಣ: ಎಂಟಿಬಿ

    ನನ್ನ ಸೋಲಿಗೆ ಬಚ್ಚೇಗೌಡ್ರೇ ನೇರ ಕಾರಣ: ಎಂಟಿಬಿ

    ಬೆಂಗಳೂರು: ನಾನು ಉಪಚುನಾವಣೆಯಲ್ಲಿ ಸೋಲಲು ಬಿಜೆಪಿ ಸಂಸದರಾದ ಬಿಎನ್ ಬಚ್ಚೇಗೌಡ ಅವರೇ ನೇರ ಕಾರಣ ಎಂದು ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಆರೋಪಿಸಿದ್ದಾರೆ.

    ನಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತನ್ನ ಸೋಲಿನ ಪರಾಮರ್ಶೆ ಮಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರನ ತೀರ್ಪು ಅಂತಿಮ. ಹೀಗಾಗಿ ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನ ನಾನು ಗೌರವಿಸುತ್ತೇನೆ ಎಂದರು.

    MTB Nagaraj

    ಪ್ರಜಾತಂತ್ರ ವ್ಯವಸ್ಥೆಯ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಶರತ್ ಬಚ್ಚೇಗೌಡರಿಗೆ ಬಿಜೆಪಿಯಿಂದ ಟಿಕೆಟ್ ನೀಡಿಲ್ಲವೆಂಬ ಕಾರಣಕ್ಕೆ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನನ್ನ ಮೇಲೆ ನಂಬಿಕೆಯಿಟ್ಟು ಸುಮಾರು 71 ಸಾವಿರ ಮತದಾರರು ಮತವನ್ನ ಹಾಕಿದ್ದಾರೆ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

    ನಾನು ಉಪಚುನಾವಣೆಯಲ್ಲಿ ಸೋಲಲು ಬಿಎನ್ ಬಚ್ಚೇಗೌಡರೇ ನೇರ ಕಾರಣರಾಗಿದ್ದಾರೆ. ಬಚ್ಚೇಗೌಡರು ಶಾಸಕರಾಗಿ, ಸಚಿವರಾಗಿ, ಈಗ ಸಂಸದರಾಗಿ ಬಿಜೆಪಿ ಪಕ್ಷದಿಂದ ಎಲ್ಲಾ ಅಧಿಕಾರವನ್ನ ಅನುಭವಿಸಿ ಪಕ್ಷಕ್ಕೆ ಬದ್ಧರಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನನ್ನ ಪರವಾಗಿ ಕೆಲಸ ಮಾಡದೆ ಮಗನನ್ನ ಬೆಂಬಲಿಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದರು.

    SHARATH BACHEGOWDA

    ಭಾರತೀಯ ಜನತಾ ಪಕ್ಷ ಒಂದು ರಾಷ್ಟೀಯ ಪಕ್ಷವಾಗಿದೆ. ಮಗನನ್ನ ಬೆಳಸಲು ರಾಜಕೀಯ ದುರುದ್ದೇಶದಿಂದ ಪಕ್ಷದ ಪರ ಕೆಲಸ ಮಾಡದೆ ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಕುತಂತ್ರ ನಡೆಸಿದ್ದಾರೆ. ಹೀಗಾಗಿ ಪಕ್ಷಕ್ಕೆ ದ್ರೋಹ ಮಾಡಿರುವ ಬಚ್ಚೇಗೌಡರ ವಿರುದ್ಧ ಈ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ನಾಯಕರಲ್ಲಿ ಈ ಮೂಲಕ ಒತ್ತಾಯ ಮಾಡುವುದಾಗಿ ಹೇಳಿದರು.

  • ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವಿನ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ – ಕೋಟ

    ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವಿನ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ – ಕೋಟ

    – ಜೆಡಿಎಸ್‍ನ ಕಣ್ಣೀರಿಗೆ ಉತ್ತರ ಕೊಟ್ಟಿದ್ದೇವೆ

    ಉಡುಪಿ: ಉಪಚುನಾವಣೆ ಗೆಲುವು ನಮಗೆ ಹರ್ಷ ತಂದಿದೆ. ಇದು ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆ ಆಗಿತ್ತು. ಸಿಎಂ ಯಡಿಯೂರಪ್ಪನವರ ಅವಿರತ ಹೋರಾಟದಿಂದ 12 ಕಡೆ ಬಿಜೆಪಿ ಗೆದ್ದಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ಅಸ್ಥಿರ ವ್ಯವಸ್ಥೆ ಹೋಗಿ ಸ್ಥಿರ ಸರ್ಕಾರ ಬಂದಿದೆ. ಮೂರೂವರೆ ವರ್ಷ ಪರಿಣಾಮಕಾರಿ ಆಡಳಿತ ಕೊಡುತ್ತೇವೆ ಎಂದರು. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡಗೆ ಗೆಲುವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ತೀರ್ಮಾನವನ್ನು ಗೌರವದಿಂದ ಸ್ವೀಕರಿಸಿದ್ದೇವೆ. ಮುಂದೆ ಏನು ಅನ್ನೋದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ್ದ ಶರತ್ ಬಚ್ಚೇಗೌಡ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತೀರ್ಮಾನಿಸುತ್ತಾರೆ ಎಂದು ಹೇಳಿದರು.

    mnd hdk crying copy.jpg 2

    ಇದೇ ವೇಳೆ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ ಎಂದ ಕೋಟ, ಕಣ್ಣೀರು ಹಾಕಿದರೆ ಕೇಕೆ ಹಾಕಿದರೆ ಗೆಲುವು ಸಿಗಲ್ಲ. ಯಡಿಯೂರಪ್ಪ ಈ ವಯಸ್ಸಿನಲ್ಲಿ ಓಡಾಟ ಮಾಡಿದ ಫಲ ಇದು. ಬಿಜೆಪಿ ಮತ್ತು ಬಿಎಸ್‍ವೈ ಅವರನ್ನು ಟೀಕಿಸುವವರು ಇನ್ನಾದರು ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಯಡಿಯೂರಪ್ಪ ಪುತ್ರ ವಿಜಯೇಂದ್ರ, ಡಿಸಿಎಂ ಅಶ್ವಥನಾರಾಯಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಓಡಾಟ ಮಾಡಿ ಕೆ.ಆರ್ ಪೇಟೆಯಲ್ಲಿ ಪಕ್ಷದ ಗೆಲುವಿಗೆ ಕಾರಣವಾಗಿದ್ದಾರೆ ಎಂದರು.

    bsy new 1

    ಬಿಜೆಪಿ ಮಂತ್ರಿಮಂಡಲದ ವಿಸ್ತರಣೆಯಾಗುತ್ತದೆ. ಸಾಕಷ್ಟು ಸಚಿವ ಸ್ಥಾನಗಳು ಖಾಲಿಯಿವೆ. ಮುಖ್ಯಮಂತ್ರಿಗಳ ಬಳಿ ಹಲವು ಖಾತೆಗಳಿವೆ. ಗೆದ್ದು ಬಂದವರಿಗೆ ಅವಕಾಶ ಕೊಡಲು ಸಿಎಂ ಖಾತೆ ಉಳಿಸಿಕೊಂಡಿದ್ದಾರೆ. ಸೂಕ್ಷ್ಮವಾಗಿ, ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ಮಾಡುತ್ತಾರೆ. ಕೇಂದ್ರದ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಡೀ ಪಕ್ಷವನ್ನು ಒಟ್ಟಾಗಿ ಒಂದಾಗಿ ತೆಗೆದುಕೊಂಡು ಹೋಗುವ ಸಚಿವರ ತಂಡ ರಚನೆಯಾಗುತ್ತದೆ. ರಾಜ್ಯಾಧ್ಯಕ್ಷರು, ಸಿಎಂ, ಹೈಕಮಾಂಡ್ ತೀರ್ಮಾನಕ್ಕೆ ಇಡೀ ರಾಜ್ಯ ಬದ್ಧವಾಗಿರಬೇಕು ಎಂದು ಪಕ್ಷದೊಳಗೆ ತೀರ್ಮಾನವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

  • ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಅಬ್ಬರದ ಪ್ರಚಾರ- ಸೇಬು, ತುಳಸಿ ಹಾರ ಹಾಕಿ ಸ್ವಾಗತ

    ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಅಬ್ಬರದ ಪ್ರಚಾರ- ಸೇಬು, ತುಳಸಿ ಹಾರ ಹಾಕಿ ಸ್ವಾಗತ

    ಬೆಂಗಳೂರು: ಉಪಚುನಾವಣೆ ಕಣ ರಂಗೇರಿದ್ದು, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಪ್ರಚಾರದ ಅಬ್ಬರ ಜೋರಾಗಿದೆ. ಪ್ರಚಾರದ ವೇಳೆ ಮತದಾರರು ಶರತ್ ಅವರಿಗೆ ಸೇಬಿನ ಹಾರ ಮತ್ತು ತುಳಸಿ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಹೊಸಕೋಟೆ ತಾಲೂಕಿನ ಚಿಕ್ಕನಲ್ಲೂರಹಳ್ಳಿಯಲ್ಲಿ 30 ಅಡಿ ಎತ್ತರದ ತುಳಸಿ ಹಾರ ಹಾಕಿ ಶರತ್ ಅವರನ್ನು ಸ್ವಾಗತಿಸಿದರೆ, ಮಲೆಮಾಕಿನಪುರದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳು, ಜನರು ಅಭಿಮಾನ ಮೆರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರಿಗೆ ಬೃಹತ್ ಸೇಬಿನ ಹಾರಗಳನ್ನು ಹಾಕುವುದು ಟ್ರೆಂಡ್ ಆಗಿ ಹೋಗಿದ್ದು, ದೊಡ್ಡ ದೊಡ್ಡ ಪಕ್ಷಗಳಿಗೆ ಸೀಮಿತವಾಗಿದ್ದ ಬೃಹತ್ ಹಾರಗಳು ಇದೀಗ ಪಕ್ಷೇತರ ಅಭ್ಯರ್ಥಿಗಳಿಗೂ ಹಾಕಲಾಗುತ್ತಿದೆ. ವಿಶೇಷವಾಗಿ ಬೃಹತ್ ತುಳಸಿ ಹಾರ ಹಾಕಿ ಶರತ್ ಬಚ್ಚೇಗೌಡರನ್ನು ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ಮಾಜಿ ಸಿಎಂಗೆ 500 ಕೆಜಿ ತೂಕದ ಸೇಬು ಹಾರ ಹಾಕಿದ ಅಭಿಮಾನಿಗಳು

    sharath bachegowda 1

    ಶರತ್ ಬಚ್ಚೇಗೌಡರು ತಾಲೂಕಿನಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ಅವರು ಮತದಾರರಿಗೆ ಕಮಲದ ಗುರುತು ಉಂಗುರ ಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನೀವೆಲ್ಲಾ ಉಂಗುರವನ್ನು ಹಾಕಿಕೊಳ್ಳುವಾಗ ಹುಷಾರಾಗಿ ಪರೀಕ್ಷೆ ಮಾಡಿ ತೆಗೆದುಕೊಳ್ಳಿ. ಅದು ತಾಮ್ರದ ಉಂಗುರ, ಏನಾದರೂ ಆಗಿದೇಯಾ ಅಂತ ಪರಿಶೀಲಿಸಿ. ಹಾಗೆಯೇ ಬೆರಳಿಗೆ ಹಾಕಿಕೊಂಡರೆ ಚರ್ಮರೋಗ ಬರುತ್ತದೆ ಎಂದು ಉಂಗುರ ಹಂಚಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಶರತ್ ಬಚ್ಚೇಗೌಡರು ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದು ಸಾವಿರಾರು ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸಿದ್ದಾರೆ.

  • ತಾಯಿಗೆ ನಾನು ಮೋಸ ಮಾಡಲಿಲ್ಲ, ತಾಯಿಯೇ ನನ್ನ ತಬ್ಬಲಿ ಮಾಡಿದಳು: ಶರತ್ ಬಚ್ಚೇಗೌಡ

    ತಾಯಿಗೆ ನಾನು ಮೋಸ ಮಾಡಲಿಲ್ಲ, ತಾಯಿಯೇ ನನ್ನ ತಬ್ಬಲಿ ಮಾಡಿದಳು: ಶರತ್ ಬಚ್ಚೇಗೌಡ

    ಬೆಂಗಳೂರು: ತಾಯಿಗೆ ನಾನು ಮೋಸ ಮಾಡಲಿಲ್ಲ. ತಾಯಿಯೇ ನನ್ನ ತಬ್ಬಲಿ ಮಾಡಿದಳು ಎಂದು ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದ್ದಾರೆ.

    ಇಂದು ಹೊಸಕೋಟೆಯಲ್ಲಿ ಮಾತನಾಡಿದ ಅವರು, ಕಂದಾಯ ಸಚಿವ ಆರ್ ಅಶೋಕ್ ಶರತ್ ಬಚ್ಚೇಗೌಡ ತಾಯಿಯಂತಹ ಪಕ್ಷಕ್ಕೆ ಮೋಸ ಮಾಡಿದ್ರು ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು. ನಾವು ಕಟ್ಟಿದ ಪಕ್ಷದಲ್ಲಿ ನಮಗೆ ಸ್ಥಾನ ಇಲ್ಲದಂತಾಗಿದೆ. ನಾವೆಲ್ಲೂ ಪಕ್ಷಕ್ಕೆ ಮೋಸ ಮಾಡಿಲ್ಲ. ಪಕ್ಷವೇ ನನ್ನ ತಬ್ಬಲಿ ಮಾಡಿದೆ ಎಂದು ತಿಳಿಸಿದ್ದಾರೆ.

    r ashok

    ನಾನು 2018ರಲ್ಲಿ ಎಲೆಕ್ಷನ್ ಗೆ ಬಿಜೆಪಿಯಿಂದ ನಿಲ್ಲುವುದರಲ್ಲಿ ಅಶೋಕಣ್ಣನ ಪಾತ್ರ ದೊಡ್ಡದಿದೆ. ಆದರೆ ಇವತ್ತು ನಾನು ಗಲಾಟೆ ಮಾಡಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ನಾನು ವಿದೇಶದಲ್ಲಿ ಓದಿದ್ದೇನೆ ಅಲ್ಲೆ ಕೆಲಸ ಕೂಡ ಮಾಡಿದ್ದೇನೆ. ಈಗ ನಾಡಿನ ಜನತೆಗೆ ಸೇವೆ ಮಾಡಲು ಇಲ್ಲಿ ಬಂದಿದ್ದೇನೆ. ನಾನೆಲ್ಲೂ ಗಲಾಟೆ ದೊಂಬಿ ಮಾಡಿಲ್ಲ. ಜನ ಇಲ್ಲಿ ಪ್ರೀತಿ ಅಭಿಮಾನದಿಂದ ಸೇರುತ್ತಿದ್ದಾರೆ ಎಂದು ಆರ್ ಅಶೋಕ್‍ಗೆ ತಿರುಗೇಟು ನೀಡಿದರು.

    ಇದೇ ವೇಳೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಹೊಸಕೋಟೆಯನ್ನು ಮಿನಿ ಬಿಹಾರ ಎಂದ ವಿಚಾರವಾಗಿ ಪ್ರತಿಕ್ರಿಯಿಸಿ, ಹೊಸಕೋಟೆ ಜನ ಮತ್ತು ಈ ಕ್ಷೇತ್ರ ನಮ್ಮ ತಾಯಿ ಇದ್ದಂತೆ. ಇದರ ಬಗ್ಗೆ ನಾವ್ಯಾರು ಕೆಟ್ಟದಾಗಿ ಮಾತಾಡಬಾರದು. ಆದರೆ ಅವರು ಇಂತಹ ಹೇಳಿಕೆ ನೀಡಿರುವುದು ಕ್ಷೇತ್ರದ ಬಗೆಗಿನ ಅವರ ಒಲವು ಎಂತಹದ್ದು ಎಂಬುದನ್ನು ತೋರಿಸುತ್ತದೆ ಎಂದು ಎಂಟಿಬಿ ವಿರುದ್ಧ ಕಿಡಿಕಾರಿದರು.

    sharath0 mtb

    ಸೋಮವಾರ ಹೊಸಕೋಟೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಎಂಟಿಬಿ ನಾಗರಾಜು, ಯಾರು ಗತಿ ಇಲ್ಲದಕ್ಕೆ ಕಾಂಗ್ರೆಸ್ ಪಕ್ಷ ನನ್ನ ತಂದು ಈ ಮಿನಿ ಬಿಹಾರ್ ನಲ್ಲಿ ಚುನಾವಣೆಗೆ ನಿಲ್ಲಿಸಿದರು ಎಂದು ತಮ್ಮ ಸ್ವಕ್ಷೇತ್ರವನ್ನು ಬಿಹಾರಕ್ಕೆ ಹೋಲಿಕೆ ಮಾಡಿ ಎಡವಟ್ಟು ಮಾಡಿಕೊಂಡಿದ್ದರು.

  • ಶರತ್ ಬಚ್ಚೇಗೌಡ ಖರೀದಿಗೆ ಮುಂದಾದ ಎಂಟಿಬಿ

    ಶರತ್ ಬಚ್ಚೇಗೌಡ ಖರೀದಿಗೆ ಮುಂದಾದ ಎಂಟಿಬಿ

    ಬೆಂಗಳೂರು: ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗಂಭೀರ ಆರೋಪ ಮಾಡಿದ್ದಾರೆ.

    ಇಂದು ಹೊಸಕೋಟೆಯ ಬೈಲನರಸಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಶರತ್, ಡಿಸೆಂಬರ್ 5ರಂದು ತಾಲೂಕಿನ ಇತಿಹಾಸದಲ್ಲೇ ಮೊದಲನೇ ಬಾರಿ ಉಪಚುನಾವಣೆ ಬಂದಿದೆ. ಎಂಟಿಬಿ ನಾಗರಾಜ್ ಅವರಿಗೆ ಐಟಿ ಅಥವಾ ಇಡಿ ಇಲಾಖೆಯ ಭಯ ಬಂತೋ ಗೊತ್ತಿಲ್ಲ. ತಾವು ಮಾಡಿದ ಸಂಪತ್ತನ್ನು ಉಳಿಸಿಕೊಳ್ಳಬೇಕು ಎಂಬ ದುರುದ್ದೇಶದಿಂದ ರಾಜೀನಾಮೆ ಕೊಟ್ಟು ಉಪಚುನಾವಣೆ ಬರುವಂತೆ ಮಾಡಿದ್ದಾರೆ.

    sharath

    ಎಂಟಿಬಿ ನಾಗರಾಜ್ ಅವರು ಬಂದಿದ್ದು ರಿಯಲ್ ಎಸ್ಟೆಟ್ ನಿಂದಾಗಿ ಎಂದು ಎಲ್ಲರಿಗೂ ಗೊತ್ತಿದೆ. ರಿಯಲ್ ಎಸ್ಟೇಟ್ ಅಂದ್ರೆ ಭೂಮಿಗಳಿಗೆ ಬೆಲೆ ಕಟ್ಟೋದು. ನಾವೆಲ್ಲರೂ ರೈತರು. ಹಾಗಾಗಿ ಭೂಮಿ ತಾಯಿಗೆ ಪೂಜೆ ಮಾಡುತ್ತೇವೆ. ಆದರೆ ಅವರು ಭೂಮಿತಾಯಿಯನ್ನು ವ್ಯಾಪಾರ ಮಾಡುತ್ತಾರೆ. ಪ್ರತಿಯೊಂದಕ್ಕೂ ಬೆಲೆ ಕಟ್ಟುತ್ತಾರೆ. ಇದರಲ್ಲಿ ಏಜೆಂಟುಗಳು ಕೂಡ ಇರುತ್ತಾರೆ. ಹೀಗೆ ರಿಯಲ್ ಎಸ್ಟೇಟ್ ನಲ್ಲಿ ಏಜೆಂಟ್ ಗಳನ್ನು ನೋಡಿದ್ದೇವೆ. ಇದೀಗ ರಾಜಕೀಯದಲ್ಲೂ ಎಜೆಂಟ್ ಗಳು ಇದ್ದಾರೆ. ಅವರ ಕೆಲಸವೇನೆಂದರೆ, ಇವನು ಗ್ರಾಮ ಪಂಚಾಯ್ತಿ ಸದಸ್ಯ. ಇವನ ಬೆಲೆ 2 ಲಕ್ಷ, ತಾಲೂಕು ಮಟ್ಟದಲ್ಲಿ ಓಡಾಡುವವನಿಗೆ 5-6 ಲಕ್ಷ, ಜಿಲ್ಲಾ ಪಂಚಾಯ್ತಿ ಸದಸ್ಯನಿಗೆ 75 ಲಕ್ಷ ಎಂದು ಹೇಳುವುದಾಗಿದೆ. ಹೀಗೆ ಎಲ್ಲರಿಗೂ ಬೆಲೆ ಕಟ್ಟಿ ನನಗೂ ಒಂದು ಬೆಲೆ ಕಟ್ಟಿದ್ದಾರೆ. ನನ್ನ ಬೆಲೆ 120 ಕೋಟಿ ಅಂತೆ. ಎಂಟಿಬಿ ನಾಗರಾಜ್ ಅವರೇ ನೀವು 120 ಕೋಟಿ ಅಲ್ಲ, ನಿಮ್ಮ ಇಡೀ ಆಸ್ತಿ ಕೊಟ್ರೂ ನಾನು ನಿಮ್ಮ ಆಮಿಷಕ್ಕೆ ಒಳಗಾಗಲ್ಲ. ನಾನು ಮಾರಾಟಕ್ಕಿಲ್ಲ, ಸ್ವಾಭಿಮಾನನಾ ಖರೀದಿ ಮಾಡಲು ಸಾಧ್ಯವೇ ಇಲ್ಲ. ಸ್ವಾಭಿಮಾನಕ್ಕಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಜನರಿಗಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.

    mtb nagaraj

    ಇದೇ ವೇಳೆ ಶರತ್ ಬಚ್ಚೇಗೌಡ ಎಂಟಿಬಿ ನಾಗರಾಜು ಒಂದೇ ನಾಣ್ಯದ ಎರಡು ಮುಖಗಳು ಎಂಬ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ಕೊಟ್ಟ ಶರತ್, ನಾನು ಯಾವುದೇ ಕಾರಣಕ್ಕೂ ಎಂಟಿಬಿ ನಾಗರಾಜು ಆಗಲು ಸಾಧ್ಯವಿಲ್ಲ. ಅವರ ಸಿದ್ಧಾಂತಗಳೇ ಬೇರೆ ನಮ್ಮ ಸಿದ್ಧಾಂತಗಳೆ ಬೇರೆ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಅವರು ಒಂದೇ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ನಾನು ಇವತ್ತು ಪಕ್ಷೇತರ ಅಭ್ಯರ್ಥಿಯಾಗಿರುವುದು ಎಂಟಿಬಿ ನಾಗರಾಜು ಬಿಜೆಪಿಗೆ ಬಂದರು ಎಂದಲ್ಲ. ಈ ಭಾಗದಲ್ಲಿ ನಮ್ಮ ಮೂರು ತಲೆ ಮಾರಿನ ನಾಯಕತ್ವದ ಪ್ರಶ್ನೆ. ಈ ಭಾಗದ ಜನರೊಂದಿಗೆ ನಮಗೆ ಇರುವ ಅವಿನಾಭಾವಕ್ಕೆ ಬೆಲೆ ಕೊಟ್ಟು ನಾನು ಪಕ್ಷೇತರ ಅಭ್ಯರ್ಥಿ ಆಗಿದ್ದೇನೆ ಎಂದರು.

    sharath 1

  • ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

    ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

    ಬೆಂಗಳೂರು: ಬಿಜೆಪಿ ಬಿಡುವಂಗಿಲ್ಲ, ಕಟ್ಟಿಕೊಳ್ಳುವಂಗಿಲ್ಲ ಎಂಬತಹ ಧರ್ಮಸಂಕಟದಲ್ಲಿ ಸಂಸದ ಬಚ್ಚೇಗೌಡ ಸಿಕ್ಕಿಹಾಕಿಕೊಂಡಿದ್ದಾರೆ. ತಮ್ಮ ಪಕ್ಷದ ಚಿಹ್ನೆ ಕಮಲ ಆದರೆ ಮಗ ಶರತ್ ಬಚ್ಚೇಗೌಡರ ಪಕ್ಷೇತರ ಚಿಹ್ನೆ ಕುಕ್ಕರ್ ಆಗಿರುವುದರಿಂದ ಬಚ್ಚೇಗೌಡರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    Sharath Bachegowda Cooker

    ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಬರೀ 10 ದಿನ ಮಾತ್ರ ಉಳಿದಿದೆ. ಆದರೆ ಬಚ್ಚೆಗೌಡರು ಮಾತ್ರ ನಾಪತ್ತೆಯಾಗಿದ್ದಾರೆ. ಬಿಜೆಪಿ ಉಸ್ತುವಾರಿ ಹಾಕಿದ್ದರೂ ಕ್ಯಾರೇ ಎನ್ನದೇ ಪ್ರಚಾರಕ್ಕೂ ಹೋಗದೆ ಬಚ್ಚೇಗೌಡರು ಸೈಲೆಂಟ್ ಆಗಿದ್ದಾರೆ. ಒಬ್ಬ ಹಿರಿಯ ನಾಯಕ, ಪಕ್ಷದ ಸಂಸದ ಆಗಿದ್ದರೂ ಕೈಕಟ್ಟಿಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಈ ಮೂಲಕ ರಹಸ್ಯವಾಗಿ ರಾಜಕೀಯ ಚದುರಂಗದಾಟಕ್ಕೆ ಇಳಿದು ಬಿಟ್ಟರಾ ಬಚ್ಚೇಗೌಡರು ಎನ್ನುವ ಪ್ರಶ್ನೆ ಕೂಡ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

    Sharath Bachchegowda

    ಬಚ್ಚೇಗೌಡರ ಮನವೊಲಿಕೆ ಪ್ರಯತ್ನವನ್ನು ಸಿಎಂ ಯಡಿಯೂರಪ್ಪ ಕೈಬಿಟ್ಟಿದ್ದು, ಬಚ್ಚೇಗೌಡರ ಜತೆ ಬಿಜೆಪಿ ನಾಯಕರು ಕೂಡ ದೂರ ಸರಿದಿದ್ದಾರೆ. ಹೀಗಾಗಿ ಉಪಚುನಾವಣೆಗೂ ಮುನ್ನವೇ ಬಚ್ಚೇಗೌಡರ ಮೇಲೆ ಕ್ರಮನಾ ಅಥವಾ ಮುಗಿದ ಮೇಲೆ ಬಚ್ಚೇಗೌಡರ ಮೇಲೆ ಕ್ರಮನಾ ಎನ್ನುವ ಪ್ರಶ್ನೆ ಕಾಡುತ್ತಿದ್ದು, ಬಿಜೆಪಿಯ ಹೆಜ್ಜೆ, ಬಚ್ಚೇಗೌಡರ ರಹಸ್ಯ ಕುತೂಹಲ ಸೃಷ್ಟಿಸಿದೆ.

  • ಕುಕ್ಕರ್ ಚಿಹ್ನೆಯೊಂದಿಗೆ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ ಶರತ್ ಬಚ್ಚೇಗೌಡ

    ಕುಕ್ಕರ್ ಚಿಹ್ನೆಯೊಂದಿಗೆ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ ಶರತ್ ಬಚ್ಚೇಗೌಡ

    – ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದು ನೋವು ತಂದಿದೆ

    ಬೆಂಗಳೂರು: ಹೊಸಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಕುಕ್ಕರ್ ಚಿಹ್ನೆಯೊಂದಿಗೆ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

    ಚಿಹ್ನೆ ಬಗ್ಗೆ ಕ್ಷೇತ್ರದಲ್ಲಿ ಮೂಡಿದ್ದ ಕುತೂಹಲಕ್ಕೆ ತೆರೆ ಇಂದು ತೆರೆ ಬಿದ್ದಿದೆ. ಈ ಮೂಲಕ ಚುನಾವಣಾಧಿಕಾರಿಗಳು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಕ್ರಮ ಸಂಖ್ಯೆ 15 ಮತ್ತು ಕುಕ್ಕರ್ ಚಿಹ್ನೆ ನೀಡಿದ್ದಾರೆ. ಹೊಸಕೋಟೆ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಸೇರಿದಂತೆ ಒಟ್ಟು 17 ಜನರು ಸ್ಪರ್ಧೆ ಮಾಡುತ್ತಿದ್ದಾರೆ.

    Sharath Bachchegowda

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶರತ್ ಬಚ್ಚೇಗೌಡ ಅವರು, ಕ್ರಮ ಸಂಖ್ಯೆ 15 ಹಾಗೂ ಕುಕ್ಕರ್ ಚಿಹ್ನೆ ಬಂದಿದ್ದು ತುಂಬಾ ಸಂತೋಷ ತಂದಿದೆ. ಪ್ರತಿಯೊಬ್ಬರ ಮನೆಯಲ್ಲೂ ಕುಕ್ಕರ್ ಇದ್ದೆ ಇರುತ್ತದೆ. ಯಾವ ಚಿಹ್ನೆ ಸಿಕ್ಕಿದ್ರು ನಮಗೆ ಖುಷಿ ಇದೆ. ನಾನು ನಾಮಪತ್ರ ಹಿಂಪಡೆಯುತ್ತೇನೆ ಎನ್ನುವ ಗೊಂದಲಕ್ಕೆ ಇಂದು ಬ್ರೇಕ್ ಬಿದ್ದಿದೆ. ಇಂದಿನಿಂದ ನಮ್ಮ ಕಾರ್ಯಕರ್ತರು, ಬೆಂಬಲಿಗರು ಪ್ರಚಾರ ಮಾಡುತ್ತಾರೆ ಎಂದರು.

    ಬಿಜೆಪಿಯ ರಾಜ್ಯ ಹಾಗೂ ಕೇಂದ್ರದ ಯಾವುದೇ ನಾಯಕರು ಅಂತಿಮವಾಗಿ ನನ್ನ ಸಂಪರ್ಕ ಮಾಡಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಹಳ ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದೇವೆ. ಹೊಸಕೋಟೆ ತಾಲೂಕಿನ ರಾಜಕೀಯ ಇತಿಹಾಸ ಇದೊಂದು ವ್ಯಕ್ತಿ ಆದಾರಿತ ಕ್ಷೇತ್ರ. ಇಷ್ಟು ದಿನ ಪಕ್ಷಕ್ಕೆ ಹಾಗೂ ಕ್ಷೇತ್ರಕ್ಕೆ ಉತ್ತಮ ಕೆಲಸಗಳನ್ನು ಮಾಡಿಕೊಂಡ ಬಂದ ನನ್ನನ್ನು ಜನ ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ ಇದೆ. 2018ರ ಚುನಾವಣೆಯಲ್ಲಿ 92,000 ಮತಗಳನ್ನು ಪಡೆದುಕೊಂಡಿದ್ದೆ. ಅಷ್ಟೂ ಮತದಾರರು ಇಂದಿಗೂ ನಮ್ಮ ಜೊತೆಯಲ್ಲಿದ್ದಾರೆ ಎಂದು ತಿಳಿಸಿದರು.

    sharath MTB

    ಎದುರಾಳಿಯ ಇಬ್ಬರು ಅಭ್ಯರ್ಥಿಗಳು ಪ್ರಬಲರು. ಚುನಾವಣೆಯನ್ನು ಸೂಕ್ಷ್ಮವಾಗಿ ಎದುರುಸುತ್ತೇವೆ. ಹೊಸಕೋಟೆ ಕ್ಷೇತ್ರದಲ್ಲಿ ಮೊದಲು ಬಿಜೆಪಿ ಮತ 3,000 ಬಿದ್ದಿದ್ದವು. ಈ ಕನಿಷ್ಠ ಸಂಖ್ಯೆಯಲ್ಲಿ 92,000 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದು ಬಚ್ಚೇಗೌಡರು ಬಂದ ಮೇಲೆ. ಸ್ವಾಭಿಮಾನಿ ಕೇವಲ ಶರತ್ ಬಚ್ಚೇಗೌಡ ಅಲ್ಲ. ಕ್ಷೇತ್ರದ ಜನತೆಯೂ ಸ್ವಾಭಿಮಾನಿಗಳೇ. ತಂದೆಯವರು ನನ್ನ ಪರ ಕ್ಯಾಂಪೇನ್‍ಗೆ ಬರುವುದಿಲ್ಲ. ಆದರೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರ ಪರ ಪ್ರಚಾರಕ್ಕೆ ಹೋಗುವ ಬಗ್ಗೆ ಅವರನ್ನೇ ಕೇಳಬೇಕು ಎಂದು ಹೇಳಿದರು.

    ಬಿಜೆಪಿಯಿಂದ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಧಿಕೃತವಾಗಿ ಪಕ್ಷದಿಂದ ಉಚ್ಛಾಟನೆ ಆಗಿರುವ ಪತ್ರವನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನನಗೆ ನೇರವಾಗಿ ಹಾಗೂ ಫೋನ್ ಮೂಲಕ ಉಚ್ಛಾಟನೆ ಬಗ್ಗೆ ತಿಳಿಸಿಲ್ಲ. ಆದರೆ ನನ್ನನ್ನು ಗುರುತಿಸಿ ಕೊಳ್ಳಲು ಬೆಳೆಯಲು ಇಷ್ಟು ವರ್ಷಗಳು ಅವಕಾಶ ಮಾಡಿಕೊಟ್ಟಿದಕ್ಕೆ ಬಿಜೆಪಿಯ ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದರು.

    SHARATH

    ಪಕ್ಷದಿಂದ ಉಚ್ಛಾಟನೆ ಮಾಡಿರುವುದು ನೋವು ತಂದಿದೆ. ನಾನು ನಮ್ಮ ಕ್ಷೇತ್ರದ ಜನರ ಮಾತಿನ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಗೆದ್ದ ನಂತರ ಎಲ್ಲರ ಜೊತೆ ಕೂತು ನಿರ್ಧಾರ ತೆಗೆದುಕೊಳ್ಳುತ್ತೇವೆ. ಬೆಂಬಲ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ. ಪ್ರಚಾರದಲ್ಲಿ ಕುಮಾರಸ್ವಾಮಿ ಅವರನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಮುಖಂಡರ ಜೊತೆಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.