Tag: ಭಾರತೀಯ ಸೇನೆ

  • ಸೇನೆ ಕಳಪೆ ಆಹಾರ ನೀಡುತ್ತಿದೆ ಎಂದಿದ್ದ ಬಿಎಸ್‍ಎಫ್ ಯೋಧ ವಜಾ

    ಸೇನೆ ಕಳಪೆ ಆಹಾರ ನೀಡುತ್ತಿದೆ ಎಂದಿದ್ದ ಬಿಎಸ್‍ಎಫ್ ಯೋಧ ವಜಾ

    ನವದೆಹಲಿ: ಭಾರತೀಯ ಸೇನೆ ಯೋಧರಿಗೆ ಕಳಪೆ ಆಹಾರ ನೀಡುತ್ತಿದೆ ಎಂದು ಆರೋಪಿಸಿದ್ದ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರು ಯಾದವ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

    ತೇಜ್ ಬಹದ್ದೂರು ಯಾದವ್ ಅವರು ಆರೋಪ ಮಾಡಿದ ಬಳಿಕ ಪ್ರತ್ಯೇಕ ತನಿಖೆ ನಡೆಸಲಾಗಿತ್ತು. ಈಗ ಸ್ಟಾಫ್ ಕೋರ್ಟ್ ತನಿಖೆಯ ವರದಿ ಬಂದ ಬಳಿಕ ಬುಧವಾರ ವಜಾಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ತನಿಖೆಯಲ್ಲಿ ಯಾದವ್ ಸುಳ್ಳು ಆರೋಪ ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಿಎಸ್‍ಎಫ್ ಕಾಯ್ದೆಯ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಯಾದವ್ ಮೂರು ತಿಂಗಳ ಒಳಗಡೆ ಮೇಲ್ಮನವಿ ಸಲ್ಲಿಸಬಹುದು ಎಂದು ಅಧಿಕಾರಿ ತಿಳಿಸಿದರು.

    ತೇಜ್ ಬಹದ್ದೂರು ಯಾದವ್ ಜನವರಿಯಲ್ಲಿ ಬಿಎಸ್‍ಎಫ್ ಯೋಧರಿಗೆ ನೀಡುವ ಆಹಾರ ಹೀಗಿದೆ ಎಂದು ಅರೆ ಬೆಂದ ಪರೋಟಾ, ಒಂದು ಲೋಟ ಚಹಾವನ್ನು ತೋರಿಸಿ, ಯೋಧರ ಕಷ್ಟಗಳನ್ನು ಹೇಳಿಕೊಂಡು ಫೇಸ್‍ಬುಕ್‍ನಲ್ಲಿ ವಿಡಿಯೋ ವನ್ನು ಅಪ್‍ಲೋಡ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರದ ಬಗ್ಗೆ ನನ್ನನ್ನು ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿಗೂ ಅವರು ಮನವಿಯನ್ನು ಸಲ್ಲಿಸಿದ್ದರು.

    ಬಿಎಸ್‍ಎಫ್ ಐಜಿ ಡಿ.ಕೆ ಉಪಾಧ್ಯಾಯ್ ಯಾದವ್ ಅವರ ಈ ಆರೋಪಕ್ಕೆ ಈ ಹಿಂದೆ ಪ್ರತಿಕ್ರಿಯೆ ನೀಡಿ, 2010ರಲ್ಲಿ ಯೋಧ ತೇಜ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಆದರೆ ಅವರ ಕುಟುಂಬವನ್ನು ಪರಿಗಣಿಸಿ ಅವರನ್ನು ಸೇನೆಯಿಂದ ವಜಾ ಮಾಡಿರಲಿಲ್ಲ ಎಂದು ತಿಳಿಸಿದ್ದರು.

  • ಕರ್ತವ್ಯ ನಿರತರಾಗಿದ್ದ ವೇಳೆ ಗದಗ ಯೋಧ ರಾಜಸ್ಥಾನದಲ್ಲಿ ಹುತಾತ್ಮ

    ಕರ್ತವ್ಯ ನಿರತರಾಗಿದ್ದ ವೇಳೆ ಗದಗ ಯೋಧ ರಾಜಸ್ಥಾನದಲ್ಲಿ ಹುತಾತ್ಮ

    ಗದಗ: ಕರ್ತವ್ಯ ನಿರತವೇಳೆ ವೇಳೆ ಗದಗ ಜಿಲ್ಲೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

    ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೆಠಾಲೂರು ಗ್ರಾಮದ 48 ವರ್ಷದ ಕಲ್ಲಪ್ಪ ಹುರಳಿ ಹುತಾತ್ಮರಾದ ಯೋಧ. ಸೇನೆಯ 375ನೇ ಬೆಟಾಲಿಯನ್‍ನವರಾದ ಕಲ್ಲಪ್ಪ ಅವರು ಕಳೆದ 14 ವರ್ಷಗಳಿಂದ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಜೈ ಪಲ್ತಾನ್ ಲೈನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೀಲ್ಡ್ ರೆಜಿಮೆಂಟ್ ನಲ್ಲಿ ಹವಾಲ್ದಾರ್ ಹಾಗೂ ಆಪ್‍ರೈಟರ್ ಆಗಿ ಸೇವೆಸಲ್ಲಿಸುತ್ತಿದ್ದರು.

    ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಲಪ್ಪ ಅವರು ಸೇವಾ ಅವಧಿಯನ್ನು ಪೂರ್ಣಗೊಳಿಸಿ ಮೂರು ತಿಂಗಳಿನಲ್ಲಿ ಊರಿಗೆ ಮರಳುತ್ತೇನೆ ಎಂದು ಮನೆಯ ಸದಸ್ಯರಿಗೆ ತಿಳಿಸಿದ್ದರು. ಆದರೆ ಮೂರು ತಿಂಗಳ ಸೇವೆ ಪೂರ್ಣಗೊಳಿಸಿ ಮರಳುವ ಮುನ್ನವೇ ಶವವಾಗಿ ತಾಯಿನಾಡಿಗೆ ಮರಳುತ್ತಿರುವುದು ಬೇಸರ ತಂದಿದೆ.

    ಸಂಜೆ 5 ಗಂಟೆಗೆ ಕಲ್ಲಪ್ಪ ಅವರ ಮೃತ ದೇಹ ಸ್ವಗ್ರಾಮಕ್ಕೆ ಬರಲಿದ್ದು, ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

     

  • ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ- ಓರ್ವ ಪೊಲೀಸ್ ಪೇದೆ ಹುತಾತ್ಮ

    ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ- ಓರ್ವ ಪೊಲೀಸ್ ಪೇದೆ ಹುತಾತ್ಮ

    – ಕಟ್ಟಡ ಸುತ್ತುವರೆದು ಒರ್ವ ಉಗ್ರನನ್ನು ಕೊಂದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದ ಪುಲ್‍ವಾಮಾ ಭಾಗದ ಟ್ರಾಲ್‍ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

    ಇಲ್ಲಿನ ಜನವಸತಿ ಕಟ್ಟಡದೊಳಗೆ ಹಿಜ್‍ಬುಲ್ ಮುಜಾಹಿದ್ದೀನ್ ಸಂಘಟನೆಯ 5 ಉಗ್ರರು ನುಗ್ಗಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಓರ್ವ ಉಗ್ರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

    ಶನಿವಾರ ಸಂಜೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದು, ಕಾರ್ಯಾಚರಣೆ ವೇಳೆ ಪೊಲೀಸ್ ಪೇದೆ ಮನ್ಜೂರ್ ಅಹಮದ್ ಹುತಾತ್ಮರಾಗಿದ್ದಾರೆ. ಇನ್ನೂ ಕೆಲವು ಉಗ್ರರು ಕಟ್ಟದೊಳಗೆ ಅಡಗಿರುವ ಶಂಕೆಯಿದ್ದು ಭಾರತೀಯ ಸೇನೆಯ ಕಾರ್ಯಾಚರಣೆ ಮುಂದುವರೆದಿದೆ.

    ಘಟನಾ ಸ್ಥಳದ 10 ಕಿ.ಮೀ ದೂರದವರಗೆ ಕರ್ಫ್ಯೂ ಜಾರಿ ಮಾಡಲಾಗಿದೆ.

  • ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಯಾರೆಲ್ಲ ಇದ್ದರು ಅನ್ನೋದು ಈಗ ಬಹಿರಂಗವಾಯ್ತು

    ನವದೆಹಲಿ: ಕಳೆದ ವರ್ಷ ಉರಿ ಸೇನಾನೆಲೆಯ ಮೇಲೆ ಪ್ರತೀಕಾರ ತೀರಿಸಿಕೊಳ್ಳೊಲು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರನ್ನು ಸದೆಬಡಿದ ಸರ್ಜಿಕಲ್ ಸ್ಟ್ರೈಕ್ ಯೋಧರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವದಂದು ಶೌರ್ಯ ಪ್ರಶಸ್ತಿ ನೀಡಿದೆ. ಆದ್ರೆ 19 ಮಂದಿ ಯೋಧರ ಬಗ್ಗೆ ಮಾಹಿತಿಗಳನ್ನ ನೀಡಿರಲಿಲ್ಲ. ಈಗ ವೀರ ಯೋಧರ ಬಗ್ಗೆ ಮಾಹಿತಿ ಹೊರಬಂದಿದೆ.

    ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್‍ಗೆ ಹೆದರಿ ಪಿಓಕೆಯಿಂದ ಕಾಲ್ಕಿತ್ತ 300 ಉಗ್ರರು

    ಸೆಪ್ಟೆಂಬರ್ 29ರಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ 4 ಹಾಗೂ 9ನೇ ಪ್ಯಾರಾ ರೆಜಿಮೆಂಟ್‍ನ ಒಬ್ಬರು ಕರ್ನಲ್, ಐವರು ಮೇಜರ್, ಇಬ್ಬರು ಕ್ಯಾಪ್ಟನ್, ಒಬ್ರು ಸುಬೇದಾರ್, ಇಬ್ಬರು ನೈಬ್ ಸುಬೇದಾರ್, ಮೂವರು ಹವಾಲ್ದಾರ್, ಒಬ್ರು ಲ್ಯಾನ್ಸ್ ನಾಯ್ಕ್, ನಾಲ್ವರು ಪ್ಯಾರಟ್ರೂಪರ್ಸ್ ಸೇರಿ ಒಟ್ಟು 19 ಮಂದಿ ಭಾಗಿಯಾಗಿದ್ದರು ಎಂದು ಪತ್ರಿಕೆಯೊಂದು ವರದಿ ಪ್ರಕಟಿಸಿದೆ.

    ಇದನ್ನೂ ಓದಿ: ಸರ್ಜಿಕಲ್ ಸ್ಟ್ರೈಕ್ ಹೇಗಿತ್ತು ಬಳಿಕ ಏನಾಯ್ತು? ಪಾಕಿಸ್ತಾನ ಎಸ್‍ಪಿ ಹೇಳ್ತಾರೆ

    ಈ ದಾಳಿಯಲ್ಲಿ ಮೇಜರ್ ರೋಹಿತ್ ಸೂರಿಯದ್ದೇ ಮುಖ್ಯ ಪಾತ್ರ. ಉರಿ ದಾಳಿಗೆ ಸೇಡು ತೀರಿಸಿಕೊಳ್ಳೋಕೆ ಸ್ಕೆಚ್ ಹಾಕಿದ್ದ ನಮ್ಮ ಸೇನೆ ಸೆಪ್ಟೆಂಬರ್ 29ರಂದು ಅಮಾವಾಸ್ಯೆ ರಾತ್ರಿ ಸರ್ಜಿಕಲ್ ಸ್ಟ್ರೈಕ್‍ಗೆ ಮುಹೂರ್ತ ಫಿಕ್ಸ್ ಮಾಡಿದ್ರು. 8 ಮಂದಿ ಯೋಧರ ಜೊತೆ ತೆರಳಿದ್ದ ಸೂರಿ, ಉಗ್ರರ ಗುಂಡಿಗೆಗೆ ಪಿಸುಗುಟ್ಟುವ ದೂರದಿಂದಲೇ ಗುಂಡು ಹೊಕ್ಕಿಸಿದ್ದರು. ಯಾವುದೇ ಕ್ಷಣದಲ್ಲೂ ತನ್ನ ಜೊತೆಗಿದ್ದವರ ಪ್ರಾಣಕ್ಕೆ ಸಂಚಕಾರ ಎದುರಾಗದಂತೆ ಹಾಗೂ ಉಗ್ರರು ಮೇಲ್ಗೈ ಸಾಧಿಸಲು ಆಸ್ಪದ ನೀಡದಂತೆ ಸರ್ಜಿಕಲ್ ಸ್ಟ್ರೈಕ್‍ನ ಯಶಸ್ವಿಯಾಗಿ ಮುಗಿಸಿದ್ರು. ರೋಹಿತ್ ಸೂರಿ ಅವರಿಗೆ ಕೀರ್ತಿ ಚಕ್ರ, ಕರ್ನಲ್ ಹರ್‍ಪ್ರೀತ್ ಸಂಧು ಅವಧಿಗೆ ಯುದ್ಧ ಸೇವಾ ಪದಕ ಸಿಕ್ಕಿದೆ.

    ಇದನ್ನೂ ಓದಿ: ಆ 4 ಗಂಟೆಗಳ ಆಪರೇಷನ್ ಟೆರರ್ ಕಾರ್ಯಾಚರಣೆ ನಡೆದಿದ್ದು ಹೀಗೆ…

    ಸರ್ಜಿಕಲ್ ಸ್ಟ್ರೈಕ್ ತುಂಬಾ ಕಠಿಣವಾಗಿದ್ದು, ಉಗ್ರರು ಸಹ ಗುಂಡಿನ ದಾಳಿ ನಡೆಸಿದ್ದರು. ಅಟೋಮ್ಯಾಟಿಕ್ ಶಸ್ತ್ರಾಸ್ತ್ರಗಳನ್ನ ಬಳಸಿದ್ದ ಭಾರತೀಯ ಯೋಧರು ಉಗ್ರರ ಅಡುಗುತಾಣಗಳನ್ನ ಧ್ವಂಸ ಮಾಡಿದ್ದರು.

    ಇದನ್ನೂ ಓದಿ: ಏನಿದು ಸರ್ಜಿಕಲ್ ಕಾರ್ಯಾಚರಣೆ? ಹೇಗೆ ನಡೆಯುತ್ತದೆ?