Tag: ಧರ್ಮಸ್ಥಳ

  • ಬರಲಿದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರಿತ ಸಿನಿಮಾ- ನಾಯಕ, ನಾಯಕಿ ಯಾರು ಗೊತ್ತಾ?

    ಬರಲಿದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರಿತ ಸಿನಿಮಾ- ನಾಯಕ, ನಾಯಕಿ ಯಾರು ಗೊತ್ತಾ?

    ಮಂಗಳೂರು: ಧರ್ಮಸ್ಥಳ ಕೇವಲ ದೇವಸ್ಥಾನ ಮಾತ್ರ ಆಗಿ ಪ್ರಸಿದ್ಧಿ ಪಡೆದಿಲ್ಲ. ಅಲ್ಲಿನ ಹತ್ತಾರು ಸೇವಾ ಯೋಜನೆಗಳು ಜನರನ್ನು ಹತ್ತಿರವಾಗಿಸಿದೆ. ಕ್ಷೇತ್ರದ ಈ ಯಶೋಗಾಥೆ ಈಗ ಸಿನಿಮಾ ವಸ್ತುವಾಗಿದ್ದು ಗ್ರಾಮೀಣ ರೈತರ ಮೂಲಕ ಅನಾವರಣ ಆಗಲಿದೆ.

    ಇಂಥ ಅಪರೂಪದ ಸಿನಿಮಾವೊಂದು ಸೆಟ್ಟೇರುತ್ತಿದೆ. ಗ್ರಾಮೀಣ ರೈತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಾಭ ಪಡೆದು ಹೇಗೆ ಸ್ವಾವಲಂಬಿಯಾಗ್ತಾನೆ ಅನ್ನೋದೇ ಕಥಾವಸ್ತು. ವಿಶೇಷ ಅಂದ್ರೆ ಗ್ರಾಮಾಭಿವೃದ್ಧಿ ಯೋಜನೆಯ 20 ಲಕ್ಷ ಸದಸ್ಯರು ತಲಾ 20 ರೂಪಾಯಿ ನೀಡುವ ಮೂಲಕ ಸಮೂಹ ಮಾದರಿಯಲ್ಲಿ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಒಟ್ಟು 4 ಕೋಟಿ ಬಜೆಟ್‍ನ ಸಿನಿಮಾ ಇದಾಗಿದೆ. ಕನ್ನಡದ ಹೆಸರಾಂತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರೇ ಇದಕ್ಕೆ ನಿರ್ದೇಶಕರು.

    ಈ ಚಿತ್ರಕ್ಕೆ ಕಾನೂರಾಯಣ ಅನ್ನೋ ವಿಶಿಷ್ಟವಾದ ಹೆಸರಿಟ್ಟಿದ್ದಾರೆ. ರಾಧಾರಮಣ ಧಾರವಾಹಿ ಖ್ಯಾತಿಯ ಸ್ಕಂದ ಹಾಗೂ ಸೋನು ಗೌಡ ನಾಯಕ-ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ವಿಶೇಷ ಪಾತ್ರದಲ್ಲಿ ವೀರೇಂದ್ರ ಹೆಗ್ಗಡೆಯವರು ಅಭಿನಯಿಸ್ತಿದ್ದು, ಬೆಳ್ತಂಗಡಿ ಹಾಗೂ ಚಿಕ್ಕಮಗಳೂರಿನಲ್ಲೇ 45 ದಿನಗಳ ಶೂಟಿಂಗ್ ನಡೆಯಲಿದೆ.

    vlcsnap 2017 10 21 08h36m16s12
    ಒಟ್ಟಿನಲ್ಲಿ ಇಡೀ ಚಿತ್ರ ಹಳ್ಳಿಯ ರೈತ ಮತ್ತು ಗ್ರಾಮೀಣ ಸೊಗಡಿನಲ್ಲಿ ಮೂಡಿಬರಲಿದೆ. ಇದು ಸಿನಿಮಾ ಕ್ಷೇತ್ರದಲ್ಲಿ ಹೊಸ ರೀತಿಯ ದಾಖಲೆ ನಿರ್ಮಿಸೋ ನಿರೀಕ್ಷೆಯಿದೆ.

    ಯೋಜನೆ ಬೆಳೆದು ಬಂದ ಬಗೆ: ಕಲೆ, ಸಾಹಿತ್ಯ, ಸಂಸ್ಕೃತಿ, ದಾನ, ಧರ್ಮ ಮುಂತಾದ ಸತ್ಕಾರ್ಯಗಳ ನೀಲಗಗನ ಧರ್ಮಸ್ಥಳದಲ್ಲಿ ಬಾಹುಬಲಿಯ ಪ್ರತಿಷ್ಠೆ ಸಂದರ್ಭ ಅಂದರೆ 1982ರಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು ಬಡವರ ಉದ್ಧಾರದ ಕಾಳಜಿಯಿಂದ ರೂಪಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ವಿಶಾಲ ವೃಕ್ಷವಾಗಿ ಬೆಳೆದು ಲಕ್ಷಾಂತರ ಜನರಿಗೆ ನೆರಳು ಕೊಡುತ್ತಿದೆ.

    ಯಾವಾಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಶುರುವಾಯಿತೋ ನಿಸರ್ಗದ ದೆಸೆಯೇ ಬದಲಾಯಿತು. ಜನಜೀವನ ಮಟ್ಟ ಸಾಗರ ತಳದಿಂದ ಮೇಲಕ್ಕೇರಿತು. ಸರಿಸುಮಾರು 35 ವರ್ಷಗಳ ಹಿಂದೆ ಆರಂಭಗೊಂಡು ಇದೀಗ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಈ ಯೋಜನೆ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸುತ್ತಾ ತಾಲೂಕನ್ನು ಮೀರಿ 30 ಜಿಲ್ಲೆಗೆ ವಿಸ್ತರಿಸಲ್ಪಟ್ಟಿದೆ. ಯೋಜನೆಯನ್ನು ಅಣ್ವಸ್ತ್ರ ಜನಕ ರಾಷ್ಟ್ರಪತಿ ಡಾ| ಎ. ಪಿ. ಜೆ. ಅಬ್ದುಲ್ ಕಲಾಂ ಕೂಡ ಮನಸಾರೆ ಕೊಂಡಾಡಿದ್ದರು.

    vlcsnap 2017 10 21 08h37m13s109

    vlcsnap 2017 10 21 08h36m51s125

    vlcsnap 2017 10 21 08h36m39s7

     

    vlcsnap 2017 10 21 08h37m32s9

    vlcsnap 2017 10 21 08h37m58s30

    vlcsnap 2017 10 21 08h37m22s176

    vlcsnap 2017 10 21 08h38m18s236

    vlcsnap 2017 10 21 08h38m36s158

  • ಅ.29 ರಂದು ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಭೇಟಿ

    ಅ.29 ರಂದು ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಭೇಟಿ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 29ಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

    ವಿಶೇಷ ವಿಮಾನದಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮುಖಾಂತರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ತೆರಳಲಿದ್ದಾರೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಉಜಿರೆಯಲ್ಲಿ ನಡೆಯಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

    Dharmasthala Temple

    ಇಂದು ಮೋದಿ ವಿಶ್ವಪ್ರಸಿದ್ಧ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಆ ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಶಂಕುಸ್ಥಾಪನೆ ಮಾಡಿದ್ರು. ಬಳಿಕ ಕೇದಾರನಾಥ ದೇವಸ್ಥಾನದಲ್ಲೇ ಬಿಜೆಪಿ ಕಾರ್ಯಕರ್ತರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ರು.

    ಯೋಧರೊಂದಿಗೆ ದೀಪಾವಳಿ ಆಚರಣೆ: ಬುಧವಾರದಂದು ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಯೋಧರೊಂದಿಗೆ ದೀಪಾವಳಿ ಆಚರಣೆ ಮಾಡಿದ್ರು. ಶ್ರೀನಗರದಿಂದ 200 ಕಿಮಿ ದೂರದಲ್ಲಿರೋ ಬಂಡೀಪೋರ ಜಿಲ್ಲೆಯ ಗುರೇಜ್ ಸೆಕ್ಟರ್ ಗೆ ಭೇಟಿ ನೀಡಿದ ಮೋದಿ ಅಲ್ಲಿನ ಗಡಿ ನಿಯಂತ್ರಣಾ ರೇಖೆ (ಎಲ್‍ಒಸಿ) ಪ್ರದೇಶದಲ್ಲಿ ಸಹಿ ಹಂಚಿ ದೇಶ ಕಾಯುವ ಯೋಧರಿಗೆ ದೀಪಾವಳ ಹಬ್ಬದ ಶುಭಾಶಯ ಕೋರಿದರು.

    ನನಗೆ ನಿಮ್ಮೊಂದಿಗೆ ದೀಪಾವಳಿ ಆಚರಿಸಲು ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಹಬ್ಬದ ರಜೆಯಲ್ಲಿರೋ ಯೋಧರೊಂದಿಗೆ ಗಡಿಯಲ್ಲಿ ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದೇನೆ ಅಂತ ವಿಸಿಟರ್ಸ್ ಬುಕ್ ನಲ್ಲಿ ಮೋದಿ ಬರೆದಿದ್ದಾರೆ.

    ಈ ಮೊದಲು ಅಂದರೆ 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಧಾನಿ ಮೋದಿ ಅವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಹಬ್ಬದ ಶುಭಾಶಯ ತಿಳಿಸಿದ್ದರು. ಇದೀಗ ಮೋದಿ ಮತ್ತೆ ಭೇಟಿ ನೀಡುವ ಮೂಲಕ ಪ್ರತೀ ವರ್ಷದಂತೆ ಈ ಬಾರಿಯೂ ಯೋಧರೊಂದಿಗೆ ದೀಪಾವಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ರು.

  • ಚಾರ್ಮಾಡಿಯಲ್ಲಿ ಗುಡ್ಡ ಕುಸಿತ- ಪ್ರವಾಸಿಗರಿಗೆ ಆತಂಕ

    ಚಾರ್ಮಾಡಿಯಲ್ಲಿ ಗುಡ್ಡ ಕುಸಿತ- ಪ್ರವಾಸಿಗರಿಗೆ ಆತಂಕ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿಯಲ್ಲಿ ಸುರಿಯುತ್ತಿರೋ ಭಾರೀ ಮಳೆಯಿಂದಾಗಿ ಮೂಡಿಗೆರೆಯಿಂದ ಧರ್ಮಸ್ಥಳ, ಮಂಗಳೂರು, ಮಣಿಪಾಲ್‍ಗೆ ಸಂಪರ್ಕ ಕಲ್ಪಿಸೋ ಚಾರ್ಮಾಡಿಯಲ್ಲಿ ಗುಡ್ಡ ಕುಸಿದಿದೆ.

    ಅದೃಷ್ಟವತಾಶ್ ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಭಾನುವಾರ ಸಂಜೆ ಸುಮಾರು 5.30 ರಿಂದ 6 ಗಂಟೆಗೆ ಗುಡ್ಡ ಕುಸಿದಿದ್ದು ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ. ಗುಡ್ಡ ಕುಸಿತದಿಂದಾಗಿ ಒಂದು ಗಂಟೆಗೂ ಅಧಿಕ ಕಾಲ ಸುಮಾರು ಎರಡು ಕಿ.ಮೀ.ನಷ್ಟು ದೂರ ಟ್ರಾಫಿಕ್ ಜಾಮ್ ಆಗಿತ್ತು. ಈ ಮಾರ್ಗ ಕಿರಿದಾದ ರಸ್ತೆಯಾಗಿರೋದ್ರಿಂದ ವಾಹನಗಳು ನಿಂತಲ್ಲೇ ನಿಂತಿದ್ವು. ಕೂಡಲೇ ಸ್ಥಳಕ್ಕಾಗಮಿಸಿದ ಬಣಕಲ್ ಪೊಲೀಸರು ಸಂಚಾರ ಸುಗಮಗೊಳಿಸಿದ್ದಾರೆ.

    ಇಲ್ಲಿ ವರ್ಷಪೂರ್ತಿ ಮಳೆ ಸುರಿಯುತ್ತಿದ್ದು, ಸದಾ ನೀರು ಹರಿಯೋದರಿಂದ ವಾಹನಸವಾರರು ಯಾವಾಗ, ಏನಾಗುತ್ತೆ ಎಂದು ಆತಂಕದಲ್ಲಿ ಸಂಚರಿಸುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಮಂಗಳೂರಿನಿಂದ ಮರಳಿನ ಲಾರಿಗಳು ಎಗ್ಗಿಲ್ಲದೇ ಸಂಚರಿಸೋದರಿಂದ ಹೀಗೆ ಆಗ್ತಿದೆ. ಮೊನ್ನೆ ಸಂಜೆಯೂ ಬೆಟ್ಟ ಕುಸಿದಿದ್ದು, ನಿನ್ನೆ ಸಂಜೆಯೂ ಕುಸಿದಿದೆ. ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    CKM GUDDA KUSITHA AV 5

    CKM GUDDA KUSITHA AV 3

    CKM GUDDA KUSITHA AV 2

    CKM GUDDA KUSITHA AV 1

  • ಪೀಠಬಿಟ್ಟು ಅಲ್ಲಿಗೆ ಹೋಗುವುದು ಹೇಗೆ: ವೀರೇಂದ್ರ ಹೆಗ್ಗಡೆ ಪ್ರಶ್ನೆ

    ಪೀಠಬಿಟ್ಟು ಅಲ್ಲಿಗೆ ಹೋಗುವುದು ಹೇಗೆ: ವೀರೇಂದ್ರ ಹೆಗ್ಗಡೆ ಪ್ರಶ್ನೆ

    ಮಂಗಳೂರು: ಕ್ಷೇತ್ರದ ಎಲ್ಲಾ ಪೂಜೆಯಲ್ಲಿ, ಕಾರ್ಯಕ್ರಮದಲ್ಲಿ ನಾನು ಇಲ್ಲಿ ಇರಲೇಬೇಕು. ಪೀಠಬಿಟ್ಟು ಅಲ್ಲಿಗೆ ಹೋಗುವುದು ಹೇಗೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

    ರಾಷ್ಟ್ರಪತಿ ರೇಸ್‍ನಲ್ಲಿ ಧರ್ಮಾಧಿಕಾರಿಯವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ವೀರೇಂದ್ರ ಹೆಗ್ಗಡೆಯವರನ್ನು ಸಂಪರ್ಕಿಸಿದಾಗ, ಬೇರು ಬಿಟ್ಟು ನಾವು ಮರ ಹತ್ತಲ್ಲ. ಕೇಂದ್ರದಿಂದ ಸೂಚನೆ ಬಂದರೂ ಇದು ಅಸಾಧ್ಯ. ಪೀಠವನ್ನು ಬಿಟ್ಟು ಅಲ್ಲಿ ಹೋಗುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

    ನನಗೆ ಏನು ಅಧಿಕೃತವಾಗಿ ಈ ವಿಚಾರ ಬಂದಿಲ್ಲ. ಇದು ಶೇ.100 ಸುಳ್ಳು ಸುದ್ದಿಯಾಗಿದೆ. ಟ್ವಿಟ್ಟರ್ ನಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಸುದ್ದಿಯಾಗುತ್ತಿದೆ ಎಂದರು.

    ನರೇಂದ್ರ ಮೋದಿ ಪರ ಒಲವು ಇರುವ ರಾಷ್ಟ್ರೀಯ ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸುವ ಚೆನ್ನೈ ಮೂಲದ ಎಂಆರ್ ವೆಂಕಟೇಶ್ ಅವರು ರಾಷ್ಟ್ರಪತಿ ರೇಸ್ ನಲ್ಲಿ ವೀರೇಂದ್ರ ಹೆಗ್ಗಡೆಯವರು ಇದ್ದಾರೆ ಎಂದು ಹೇಳಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಗ್ಗಡೆಯವರು ರಾಷ್ಟ್ರಪತಿ ಆಗಲಿದ್ದಾರೆ ಎನ್ನುವ ಸುದ್ದಿ ಚರ್ಚೆಯಾಗುತ್ತಿತ್ತು.

  • ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ- ಸ್ಪಾಟ್ ನಾಗ ಸೇರಿ 9 ಆರೋಪಿಗಳ ಬಂಧನ

    ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ- ಸ್ಪಾಟ್ ನಾಗ ಸೇರಿ 9 ಆರೋಪಿಗಳ ಬಂಧನ

    – ಆಂಧ್ರದಲ್ಲಿ ಸೆರೆಸಿಕ್ಕ ಆರೋಪಿಗಳು

    ಬೆಂಗಳೂರು: ಬಸವೇಶ್ವರ ನಗರದಲ್ಲಿ ನಡೆದ ರೌಡಿ ಶೀಟರ್ ಸುನಿಲ್ ಕೊಲೆ ಪ್ರಕರಣ ಸಂಬಂಧ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಪ್ರಕರಣ ಸಂಬಂಧ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆಂಧ್ರ ಮತ್ತು ಧರ್ಮಸ್ಥಳಕ್ಕೆ ಪೊಲೀಸರ ತಂಡ ತೆರಳಿತ್ತು. ಇನ್ನೆರಡು ತಂಡ ಬೆಂಗಳೂರಿನಲ್ಲಿಯೇ ಹುಡುಕಾಟ ಆರಂಭಿಸಿತ್ತು. ಆಂಧ್ರದಲ್ಲಿ ಗುರುವಾರ ರಾತ್ರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಗರಾಜ ಅಲಿಯಾಸ್ ಸ್ಪಾಟ್ ನಾಗ ಸೇರಿ 9 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    SUNIL

    ನಡೆದಿದ್ದೇನು?: ಕಳೆದ ಬುಧವಾರ ಬಸವೇಶ್ವರ ನಗರದಲ್ಲಿರೋ ಸುನಿಲ್ ಮನೆಗೆ ನುಗ್ಗಿದ ನಾಲ್ವರ ತಂಡ ಆತನನ್ನು ಮನೆಯಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿತ್ತು. ಬಳಿಕ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿತ್ತು. ಈ ವೇಳೆ ಸುನಿಲ್ ಪೋಷಕರಿಗೂ ಗಾಯಗಳಾಗಿತ್ತು.

    ಹಿಂದಿನ ದಾಳಿಗೆ ಸೇಡು: ಸ್ಪಾಟ್ ನಾಗನ ಮೇಲೆ ರೌಡಿ ಸುನಿಲ್ ಗ್ಯಾಂಗ್ 2016ರ ಮಾರ್ಚ್ ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಘಟನೆಯಿಂದ ಹೆಂಡತಿ ಮತ್ತು ಮಕ್ಕಳು ನಾಗನನ್ನು ತೊರೆದಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸುನಿಲ್ 10 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕವೂ ನಾಗನನ್ನು ಕುಂಟ ಎಂದು ಲೇವಡಿ ಮಾಡುತ್ತಿದ್ದ. ಹಲ್ಲೆ ಮತ್ತು ಲೇವಡಿಯಿಂದ ಮನನೊಂದಿದ್ದ ನಾಗ ಒಂದು ವರ್ಷದ ಹಿಂದಿನ ದಾಳಿಗೆ ಸುನಿಲ್‍ನನ್ನು ಬುಧವಾರದಂದು ಕೊಲೆ ಮಾಡಿದ್ದ.

    https://www.youtube.com/watch?v=a3vmsD9DKZw