ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್

Public TV
1 Min Read
KPL GALATE COLLAGE

ಕೊಪ್ಪಳ: ಗಂಗಾವತಿಯ ಕಲ್ಮಠ ಸ್ವಾಮೀಜಿ ಲೈಂಗಿಕ ಹಗರಣ ಹೊರಬಿದ್ದ ಬಳಿಕ ಎಸ್ಕೇಪ್ ಆಗಿದ್ದ ಸ್ವಾಮೀಜಿ ಮತ್ತೆ ಬುಧವಾರ ಮಠಕ್ಕೆ ಎಂಟ್ರಿ ಕೊಟ್ಟಿದ್ದಾನೆ.

ಶಾಸಕ ಇಕ್ಬಾಲ್ ಅನ್ಸಾರಿಯ ಬೆಂಬಲಿಗರೊಂದಿಗೆ ಮಠಕ್ಕೆ ಮತ್ತೆ ಬಂದಿದ್ದಾನೆ. ಈ ವಿಷಯವಾಗಿ ಎರಡು ಗುಂಪಿನ ನಡುವೆ ಸಭೆಯೊಂದರಲ್ಲಿ ಮಾತಿನ ಚಕಮಕಿ ನಡೆದಿದೆ.

KPL GALATE 11

ಕೊಪ್ಪಳದ ಗಂಗಾವತಿಯ ಕೋಟ್ಟೋರುಶ್ವರ ದೇಗುಲದಲ್ಲಿ ವೀರಶೈವ ಸಮಾಜದ ಮುಖಂಡರು ಸಭೆ ಸೇರಿದ್ದರು. ಕೆಲವರು ಸ್ವಾಮೀಜಿ ವಿಚಾರವಾಗಿ ಮೃದು ಧೋರಣೆ ತಾಳಿದ್ದಾರೆ ಎಂದು ಮಹಾಬಳೇಶ ಹಾಸಿನಾಳ್ ಹೇಳಿದಾಗ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಎ ಹಾಲಸಮುದ್ರ ನಡುವೆ ಮಾತಿನ ಚಕಮಕಿ ನಡೆದು ವಿಕೋಪ ಹಂತಕ್ಕೆ ತಲುಪಿತ್ತು.

KPL GALATE 4

ಸ್ವಾಮೀಜಿ ಮತ್ತೆ ಮಠ ಪ್ರವೇಶಿಸಿಲು ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರ ಕುಮ್ಮಕ್ಕು ಇದೆ ಎನ್ನುವ ಆರೋಪ ಕೇಳಿಬಂದಿದೆ. ಸಭೆ ಬಳಿಕ ಸ್ವಾಮೀಜಿ ಪೀಠದಿಂದ ಕೆಳಗಿಳಿಯಬೇಕೆಂದು ಮುಖಂಡರು ಆಗ್ರಹಿಸಿದ್ದಾರೆ. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

KPL GALATE 10

KPL GALATE 9

KPL GALATE 8

KPL GALATE 7

KPL GALATE 6

KPL GALATE 5

KPL GALATE 2

KPL GALATE 1

Share This Article
Leave a Comment

Leave a Reply

Your email address will not be published. Required fields are marked *