ಏ.16ಕ್ಕೆ ವಿವಿಪ್ಯಾಟ್ ತಾಳೆಗೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ: ಸುಪ್ರೀಂ

Public TV
1 Min Read
VVPAT

ನವದೆಹಲಿ: ವಿವಿಪ್ಯಾಟ್ (VVPAT) ಮೂಲಕ ಚಲಾವಣೆಯಾದ ಮತಗಳ ಮರು ಪರಿಶೀಲನೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಏ.16 ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು ಏ.16 ರಂದು ವಿಚಾರಣೆಗೆ ಈ ಬಗ್ಗೆ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಕೇಜ್ರಿವಾಲ್‌ ಇತರರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ – ಜಾಮೀನು ಅರ್ಜಿ ವಜಾ‌

supreme Court 1

ವಕೀಲ ಪ್ರಶಾಂತ್ ಭೂಷಣ್ ಅವರು ತುರ್ತು ವಿಚಾರಣೆಯನ್ನು ಕೋರಿದ ನಂತರ, ಇತರ ವಿಷಯಗಳ ಜೊತೆಗೆ ಎನ್‍ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಸಲ್ಲಿಸಿದ ಮನವಿಯನ್ನು ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಏಪ್ರಿಲ್ 3 ರಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಎಪ್ರಿಲ್ 1 ರಂದು, ಆಯ್ದ ಐದು ಇವಿಎಂಗಳಿಂದ ಸ್ಲಿಪ್‍ಗಳನ್ನು ತಾಳೆ ಮಾಡುವ ಪ್ರಸ್ತುತ ಪದ್ಧತಿಗೆ ವಿರುದ್ಧವಾಗಿ ಚುನಾವಣೆಯಲ್ಲಿ ವಿವಿಪ್ಯಾಟ್ ಸ್ಲಿಪ್‍ಗಳ ಸಂಪೂರ್ಣ ಎಣಿಕೆಗೆ ಕೋರಿ ಕಾರ್ಯಕರ್ತ ಅರುಣ್ ಕುಮಾರ್ ಅಗರವಾಲ್ ಮನವಿ ಮಾಡಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಮತ್ತು ಕೇಂದ್ರದಿಂದ ಪ್ರತಿಕ್ರಿಯೆ ಕೇಳಿತ್ತು.

ಪ್ರಸ್ತುತ ಬ್ಯಾಲೆಟ್ ಯಂತ್ರದಲ್ಲಿ ಬಟನ್ ಒತ್ತಿದ ಕೂಡಲೇ ಸಮಯದಲ್ಲಿ ವಿವಿಪ್ಯಾಟ್ ಸ್ಕ್ರೀನ್‍ನಲ್ಲಿ ಒಂದು ಸ್ಲಿಪ್ ರೆಡಿಯಾಗುತ್ತದೆ. ಆ ಸ್ಲಿಪ್‍ನಲ್ಲಿ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ನೋಡಬಹುದು. 7 ಸೆಕೆಂಡ್ ಈ ಸ್ಲಿಪ್ ಸ್ಕ್ರೀನ್‍ನಲ್ಲಿ ಕಾಣುತ್ತಿರುತ್ತದೆ. 7 ಸೆಕೆಂಡ್ ಆದ ಬಳಿಕ ಆ ಸ್ಲಿಪ್ ಅಟೋಮ್ಯಾಟಿಕ್ ಆಗಿ ಕತ್ತರಿಸಿ ವಿವಿಪ್ಯಾಟ್ ಬಾಕ್ಸ್ ಒಳಗಡೆ ಬೀಳುತ್ತದೆ.

ಏಳು ಹಂತದಲ್ಲಿ ಲೋಕಸಭೆ ಚುನಾವಣೆ ಭಾರತದಲ್ಲಿ ನಡೆಯಲಿದ್ದು ಏ.19 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಕವಿತಾ ಮನವಿಗೆ ಕೋರ್ಟ್ ಡೋಂಟ್‌ ಕೇರ್ – ಏ.23 ರವರೆಗೆ‌ ಜೈಲೇ ಗತಿ

Share This Article