ಪವಿತ್ರಾ ಜೊತೆಗಿನ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ರಾ ಕೃಷ್ಣ, ಮಹೇಶ್ ಬಾಬು- ನರೇಶ್ ಹೇಳೋದೇನು?

Public TV
1 Min Read
naresh

ತೆಲುಗು- ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಫೇಮಸ್ ಆಗಿರುವ ನರೇಶ್- ಪವಿತ್ರಾ ಲೋಕೇಶ್ (Pavitra Lokesh) ಜೋಡಿ. ಇದೀಗ ತಮ್ಮ ಸಂಬಂಧದ ಬಗ್ಗೆ ಅಧಿಕೃತಗೊಳಿಸಿದ್ದಾರೆ. ಹೀಗಿರುವಾಗ ಇತ್ತೀಚಿನ ಸಂದರ್ಶನವೊಂದರಲ್ಲಿ ನರೇಶ್- ಪವಿತ್ರಾ ಸಂಬಂಧಕ್ಕೆ ಸೂಪರ್ ಸ್ಟಾರ್ ಕೃಷ್ಣ, ಸಹೋದರ ಮಹೇಶ್ ಬಾಬು (Mahesh Babu) ಅವರು ಓಕೆ ಅಂದಿದ್ರಾ ಎಂದು ನರೇಶ್ ಸ್ಪಷ್ಟನೆ ನೀಡಿದ್ದಾರೆ.

Naresh 2

ಕಳೆದ ವರ್ಷ ಅಂತ್ಯದಲ್ಲಿ ನರೇಶ್ ಅವರ 3ನೇ ಪತ್ನಿ ರಮ್ಯಾ ರಘುಪತಿ (Ramya Raghupathi) ಜೊತೆಗಿನ ಸಂಸಾರದ ಬಿರುಕು ಬೀದಿಯಲ್ಲಿ ಹರಾಜಾಗಿತ್ತು. ಪವಿತ್ರಾ ಲೋಕೇಶ್ ಜೊತೆಗಿನ ನರೇಶ್ ಸಂಬಂಧಕ್ಕೆ ಪತ್ನಿ ರಮ್ಯಾ ಕಿಡಿಕಾರಿದ್ದರು. ಇಷ್ಟೇಲ್ಲಾ ರಂಪ ರಾಮಾಯಣವನ್ನ ಜನತೆಯ ಕಣ್ಣಿಗೆ ಬಿದ್ದಿತ್ತು. ನರೇಶ್- ಪವಿತ್ರಾ ರಿಲೇಶನ್‌ಶಿಪ್‌ಗೆ ಮನೆಯಲ್ಲಿ ಏನಂತಾರೆ.? ಈ ಬಗ್ಗೆ ನಟ ನರೇಶ್ (Naresh) ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ನಿರ್ಮಾಣ ಸಂಸ್ಥೆಯ ಬಳಿಕ ಹೊಸ ಉದ್ಯಮದತ್ತ ನಟಿ ನಯನತಾರಾ

Pavitra Lokesh Naresh

ಇಬ್ಬರ ಸಂಬಂಧ ಹೊರಬೀಳುತ್ತಿದ್ದಂತೆ ನರೇಶ್- ಪವಿತ್ರ ಲೋಕೇಶ್ ಮದುವೆ (Wedding) ಆಗುವುದಾಗಿಯೂ ಹೇಳಿಕೆ ಕೊಡುತ್ತಿದ್ದಾರೆ. ಅಲ್ಲದೆ, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲೂ ಇರುವುದಾಗಿ ಹೇಳಿಕೊಂಡಿದ್ದಾರೆ. ಸೂಪರ್‌ಸ್ಟಾರ್ ಕೃಷ್ಣ- ವಿಜಯ ನಿರ್ಮಲಾ ಅವರ ಪುತ್ರ ನರೇಶ್. ಹೀಗಾಗಿ ಚಿತ್ರರಂಗದ ಈ ಪ್ರತಿಷ್ಠಿತ ಕುಟುಂಬ ಇವರಿಬ್ಬರ ಸಂಬಂಧವನ್ನು ಒಪ್ಪಿದ್ದಾರೆಯೇ? ಅನ್ನೋ ಪ್ರಶ್ನೆಗೆ ನರೇಶ್ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ತೀರಿಕೊಂಡ ಮಹೇಶ್ ಬಾಬು ತಂದೆ ಕೃಷ್ಣ ಮತ್ತು ಸಹೋದರ ಮಹೇಶ್ ಬಾಬು ತಮ್ಮ- ಪವಿತ್ರಾ ಲೋಕೇಶ್ ಅವರ ಸಂಬಂಧವನ್ನು ಒಪ್ಪಿದ್ದರು ಎಂದು ಹೇಳಿಕೊಂಡಿದ್ದಾರೆ.

mahesh babu father KRISHNA

ಇನ್ನೂ ಪವಿತ್ರಾ ಲೋಕೇಶ್ ಅವರ ಅಡುಗೆ ಕೈರುಚಿಯನ್ನ ಸೂಪರ್ ಸ್ಟಾರ್ ಕೃಷ್ಣ ಅವರು ಇಷ್ಟಪಟ್ಟಿದ್ದರು. ಅವರ ಕುಟುಂಬಕ್ಕೂ ಕೂಡ ಪವಿತ್ರಾ ಅಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ ಎಂದು ನರೇಶ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Share This Article