ಮಂಡ್ಯ: 18ನೇ ತಾರೀಖು ಕಹಳೆ ಊದುತ್ತಿರುವ ರೈತನ ಗುರುತಿಗೆ ಮತ ಹಾಕಿ. ಆಮೇಲೆ ನಿಮ್ಮೂರಿಗೆ ಬಂದು ನಾಟಿಕೋಳಿ ಸಾರು, ಮುದ್ದೆ, ಮಟನ್ ಬಿರಿಯಾನಿ ಎಲ್ಲಾ ತಿಂತೀನಿ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದ್ದಾರೆ.
ಮದ್ದೂರಿನ ಅರುವನಹಳ್ಳಿಯಲ್ಲಿ ಮಾತನಾಡಿದ ಅವರು, “ನಾನು ಆಮೇಲೆ ಮಾತಾಡ್ತೀನಿ. ಎಲ್ಲರೂ ಏನ್ ಊಟ ಮಾಡ್ಕೊಂಡ್ ಬಂದ್ರಿ ಇವತ್ತು ಎಂದು ಕೇಳಿದ್ದಾರೆ. ಅಲ್ಲದೆ ಅಂಬರೀಶ್ ಅಣ್ಣನ ಫೇವರೇಟ್ ಯಾವ್ದು ಹೇಳಿ ಎಂದು ಜನರನ್ನು ಪ್ರಶ್ನಸಿದರು. ಆಗ ಜನರು ನಾಟಿ ಕೋಳಿ ಎಂದು ಹೇಳಿದರು. ಅದಕ್ಕೆ ಸುಮಲತಾ ನಾಟಿ ಕೋಳಿ ಅಲ್ಲ, ಯಾವ್ದೇಳಿ ನೋಡೋಣ ಕೇಳುತ್ತಾ ಹಾ.. ಕೈಮ ಉಂಡೆ, ಮುದ್ದೆ ಅಂಬರೀಶ್ ಫೇವರೀಟ್ ಫುಡ್ ಎಂದು ಹೇಳಿದರು. ಎಲ್ಲರೂ ಮಟನ್ ಊಟ ಮಾಡ್ಕೊಂಡ್ ಬಂದಿದ್ದೀರಿ. ಅದಕ್ಕೆ ವಾಯ್ಸ್ ಜೋರಾಗಿದೆ” ಎಂದು ಸುಮಲತಾ ಜನರನ್ನು ಹುರಿದುಂಬಿಸಿದರು.
18ನೇ ತಾರೀಖು ಕಹಳೆ ಊದುತ್ತಿರುವ ರೈತನ ಗುರುತಿಗೆ ಮತ ಹಾಕಿ. ಆಮೇಲೆ ನಿಮ್ಮೂರಿಗೆ ಬಂದು ನಾಟಿಕೋಳಿ ಸಾರು, ಮುದ್ದೆ, ಮಟನ್ ಬಿರಿಯಾನಿ ಎಲ್ಲಾ ತಿಂತೀನಿ ಎಂದು ಜನರಿಗೆ ಹೇಳಿದರು. ಈ ವೇಳೆ ಗ್ರಾಮಸ್ಥರು ದರ್ಶನ್ ಬಗ್ಗೆ ಮಾತನಾಡುವಂತೆ ಪಟ್ಟು ಹಿಡಿದಿದರು. ಆಗ ಸುಮಲತಾ ಅವರು ದರ್ಶನ್ ಕೈಗೆ ಫ್ರಾಕ್ಚರ್ ಆಗಿದೆ. ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದರು.