ಕುಷ್ಟಗಿಯಲ್ಲಿ ನೀತಿ ಸಂಹಿತೆಗಿಲ್ಲ ಕಿಮ್ಮತ್ತು – ಗಣೇಶ್, ಸುದೀಪ್ ಫೋಟೋ ಪ್ರಚಾರಕ್ಕೆ ಬಳಕೆ

Public TV
1 Min Read
GANI SUDEE

ಕೊಪ್ಪಳ: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಆದ್ರೆ ಕೊಪ್ಪಳದಲ್ಲಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ ವುಡ್ ನಟರ ಫೋಟೋ ಬಳಕೆ ಮಾಡಿಕೊಂಡು ಅಬ್ಬರದ ಪ್ರಚಾರಕ್ಕೆ ಕೈ ಹಾಕಲಾಗಿದೆ.

KPL NO NEETHI SAMHITHE AV 5

ಕುಷ್ಟಗಿ ತಾಲೂಕಿನಲ್ಲಿ ಚುನಾವಣಾ ಪ್ರಚಾರಗಳು ದಿನದಿಂದ ದಿನಕ್ಕೆ ರಂಗೇರ್ತಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಕೈ ಕಟ್ಟಿ ಹಾಕಿದ್ದಂತೆ ಆಗಿತ್ತು. ಆದ್ರೆ ಇದೀಗ ಅವರಿಗೆ ಫೇಸ್ ಬುಕ್ ವರದಾನವಾಗಿದೆ.

KPL NO NEETHI SAMHITHE AV 6

ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಗಣೇಶ್ ಮತ್ತು ಸುದೀಪ್ ಫೋಟೋಗಳನ್ನು ಬಳಸಿಕೊಂಡು ಪ್ರಚಾರ ಮಾಡೋಕೆ ಶುರು ಮಾಡಿದ್ದಾರೆ. ಅಭ್ಯರ್ಥಿಗಳ ಫೋಟೋಗಳನ್ನು ನಟರು ತಮ್ಮ ಕೈಯಲ್ಲಿ ಹಿಡಿದಂತೆ ಎಡಿಟ್ ಮಾಡಿ ಫೇಸ್ ಬುಕ್ ಅಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ರೂ, ಚುನಾವಣಾಧಿಕಾರಿಗಳು ಮಾತ್ರ ಈವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.

KPL NO NEETHI SAMHITHE AV 1

KPL NO NEETHI SAMHITHE AV 7

Share This Article
Leave a Comment

Leave a Reply

Your email address will not be published. Required fields are marked *