ಸಿದ್ದರಾಮಯ್ಯಗೆ ಅಹಿಂದ ನಾಯಕ ಅನ್ನೋದು 5 ವರ್ಷಕ್ಕೊಮ್ಮೆ ನೆನಪಾಗುತ್ತೆ – ಶ್ರೀರಾಮುಲು

Public TV
1 Min Read
SriRamulu 1 1

ರಾಯಚೂರು: ಸಿದ್ದರಾಮಯ್ಯನವರಿಗೆ (Siddaramaiah) ತಾವು ಅಹಿಂದ ನಾಯಕ ಅನ್ನೋದು ಪಂಚವಾರ್ಷಿಕ ಯೋಜನೆ ತರ ಐದು ವರ್ಷಗಳಿಗೊಮ್ಮೆ ನೆನಪಿಗೆ ಬರುತ್ತೆ ಎಂದು ಸಚಿವ ಶ್ರೀರಾಮುಲು (SriRamulu) ಕುಟುಕಿದ್ದಾರೆ.

Siddaramaiah 2

ರಾಯಚೂರಿನಲ್ಲಿಂದು (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಳ ಸಮುದಾಯದವರಿಗೆ ಮೀಸಲಾತಿ (Reservation) ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ ಸೋತಿದ್ದಾರೆ. ಪ್ರಿನ್ಸಿಪಲ್ ಸೆಕ್ರೆಟರಿ ಜಾದವ್ ಅವರು ವರದಿ ಕೊಟ್ಟಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದರೂ ಆಯೋಗ ರಚನೆ ಮಾಡಲಿಲ್ಲ. ಎಸ್ಸಿ-ಎಸ್ಟಿಗೆ ಮೀಸಲಾತಿ (SCST Reservation) ಹೆಚ್ಚಿಸುವ ಕೆಲಸ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡ್ತಿರೋರು ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು: ಕಟೀಲ್ ಕಿಡಿ

SriRamulu 3

ಹಿಂದುಳಿದವರ, ಅಹಿಂದ ನಾಯಕರು ಅಂತ ಕರೆಯಿಸಿ ಕೊಳ್ಳುವ ಅರ್ಹತೆ ಸಿದ್ದರಾಮಯ್ಯ (Siddaramaiah) ಅವರಿಗೆ ಇಲ್ಲ. ಅದು ಏನಿದ್ದರೂ ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ. ಹೀಗಾಗಿ ಸಿಎಂಗೆ ಅಭಿನಂದನೆ ಸಲ್ಲಿಸಲು ನವೆಂಬರ್ 20ಕ್ಕೆ ಬಳ್ಳಾರಿಯಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

SriRamulu 2 1

ಸಿದ್ದರಾಮಯ್ಯ ಮಹಾ ಸುಳ್ಳ, ಅವರ ಮನೆ ದೇವರ ಹೆಸರೇ ಮಹಾ ಸುಳ್ಳ. ಆತ ಯಾವ ಮಾತು ಉಳಿಸಿಕೊಂಡಿಲ್ಲ. ಇಡೀ ರಾಜ್ಯದ ಹಿಂದುಳಿದ ಜಾತಿಯವರು ರೋಸಿ ಹೋಗಿದ್ದಾರೆ. ಎಸ್ಸಿ-ಎಸ್ಟಿ ಜನಾಂಗದವರೂ ಅವರನ್ನ ನಂಬಲ್ಲ. ಮುಂದಿನ ಚುನಾವಣೆಯಲ್ಲಿ ಜನರೇ ಸಿದ್ದರಾಮಯ್ಯರನ್ನ ತಿರಸ್ಕಾರ ಮಾಡ್ತಾರೆ ಎಂದು ಭವಿಷ್ಯ ನುಡಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *