ರೆಡ್ಡಿ ಜೊತೆ ಸಂಪರ್ಕವೇ ಬೇಡ – ಮನೆಯ ಗೇಟನ್ನೇ ಬಂದ್‌ ಮಾಡಿದ ರಾಮುಲು

Public TV
1 Min Read
Sriramulu 1

ಬಳ್ಳಾರಿ: ಜನಾರ್ದನ ರೆಡ್ಡಿ- ಶ್ರೀರಾಮುಲು (Sri Ramulu) ನಡುವೆ ದೋಸ್ತಿಯಲ್ಲಿ ಬಿರುಕು ಮೂಡಿದ ಹಿನ್ನೆಲೆ, ರೆಡ್ಡಿ ಮನೆ ಸಂಪರ್ಕದ ಗೇಟ್ ಅನ್ನು ರಾಮುಲು ಬಂದ್ ಮಾಡಿಸಿದ್ದಾರೆ.

ಜನಾರ್ದನ ರೆಡ್ಡಿ (Janardhan Reddy) ಮನೆಗೆ ಸಂಪರ್ಕಿಸಲು ರಾಮುಲು ಮನೆಯ ಕೌಂಪೌಂಡ್‌ಗೆ ಗೇಟ್ ಹಾಕಲಾಗಿತ್ತು. ಇಬ್ಬರ ಸಂಬಂಧ ಹಳಸಿದ್ರಿಂದ ವಾಸ್ತು ಹೆಸರನಲ್ಲಿ ಗೇಟ್ ಬಂದ್ ಮಾಡಿಸಲಾಗಿದೆ. ಇದನ್ನೂ ಓದಿ: `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

Sriramulu 2

ಬಳ್ಳಾರಿ ನಗರದ (Ballari City) ಅವಂಬಾವಿಯಲ್ಲಿ ಅಕ್ಕಪಕ್ಕದಲ್ಲೇ ಕೇವಲ 50 ಮೀಟರ್ ಅಂತರದಲ್ಲಿ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಮನೆಗಳಿವೆ. ರಸ್ತೆಯಿಂದ ಬರಬಾರದು ಅನ್ನೋ ಕಾರಣಕ್ಕೆ ಕಂಪೌಂಡ್‌ಗೆ ಒಂದು ಗೇಟ್ ಮಾಡಿಸಲಾಗಿತ್ತು. ಇಬ್ಬರ ನಡುವೆ ವೈಮನಸ್ಸು ಆಗ್ತಿದಂತೆ ಇಟ್ಟಿಗೆ ಸಿಮೆಂಟ್ ಹಾಕಿ ಗೇಟನ್ನು ರಾಮುಲು ಬಂದ್ ಮಾಡಿಸಿದ್ದಾರೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲೇ 120 ಟನ್‌ ಕಬ್ಬು ಕಟಾವು ಮಾಡಿ ಲೋಡ್‌ – ಜೈ ಹನುಮಾನ್ ತಂಡಕ್ಕೆ ಜೈ

Share This Article