– ಆಪರೇಷನ್ ಎಲ್ಲಿ ಮಾಡಿದ್ದರೆ ಅನ್ನೋದು ನನಗೆ ಗೊತ್ತಿಲ್ಲ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲನೋ ಅಥವಾ ಸಂಪಿಗೆಯೋ ಗೊತ್ತಿಲ್ಲ. ಆಪರೇಷನ್ ಮೇಲೆ ಮಾಡಿದ್ರೋ ಅಥವಾ ಕೆಳಗೆ ಮಾಡಿದ್ರೋ ಎಂಬ ವಿಚಾರವೇ ನನಗೆ ತಿಳಿದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಕುಮಾರ್, ಇಷ್ಟು ಪ್ರಶಾಂತವಾಗಿ, ರಕ್ತ ಹರಿಯದೆ ಮತ್ತು ಹಿಂಸೆ ಇಲ್ಲದೇ ಇಡೀ ಏಷ್ಯಾಖಂಡದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ಈ ಒಂದು ದೇಶದಲ್ಲಿ ಉಳಿದಿದೆ. ಅದಕ್ಕೆ ಕಾರಣ ಈ ದೇಶದ ಜನತೆ ಮತ್ತು ಸಂವಿಧಾನವಾಗಿದೆ. ಜನರು ಇದೆಲ್ಲವನ್ನು ಗಮನಿಸಿರುತ್ತಾರೆ. ಆದ್ದರಿಂದ ಇದಕ್ಕೆಲ್ಲ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಇನ್ನೂ ಮೂರು ತಿಂಗಳಿಗೊಮ್ಮೆ ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಆಪರೇಷನ್ ಕಮಲ ಆಗಿದೆಯೋ, ಇಲ್ಲವೂ ಗೊತ್ತಿಲ್ಲ. ಆಪರೇಷನ್ ಕಮಲನೋ ಅಥವಾ ಸಂಪಿಗೆಯೋ ಗೊತ್ತಿಲ್ಲ. ಅಷ್ಟೇ ಅಲ್ಲದೇ ಆಪರೇಷನ್ ಕೆಳಗಾ, ಮೇಲಾ ಮತ್ತು ಮುಂದೆ ಮಾಡಿದಾರ ಅಥವಾ ಹಿಂದೆ ಮಾಡಿದಾರ ಅದು ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಆಪರೇಷನ್ ಎಲ್ಲಿ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಸ್ಪೀಕರ್ ರಮೇಶ್ ಅವರು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv