ಕೋಲಾರ: ತಮಟೆ ಹಾಗೂ ಬ್ಯಾಂಡ್ ಸೆಟ್ ತಾಳಕ್ಕೆ ತಕ್ಕಂತೆ ಸ್ಪೀಕರ್ ರಮೇಶ್ ಕುಮಾರ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆಯುತ್ತಿರುವ ಶ್ರೀನಿವಾಸಪುರ ಹಬ್ಬ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಶನಿವಾರ ರಾತ್ರಿ ಪಟ್ಟಣದಲ್ಲಿ ನಡೆದ ನರಸಿಂಹಸ್ವಾಮಿಯ ಉತ್ಸವ ಮೆರವಣಿಗೆಯಲ್ಲಿ ರಮೇಶ್ ಕುಮಾರ್ ಪಾಲ್ಗೊಂಡಿದ್ದರು. ಈ ವೇಳೆ ತಮಟೆ ಹಾಗೂ ಬ್ಯಾಂಡ್ ಸೆಟ್ ತಾಳಕ್ಕೆ ತಕ್ಕಂತೆ ಅಭಿಮಾನಿಗಳ ಜೊತೆ ರಮೇಶ್ ಅವರು ಕುಳಿದು ಕುಪ್ಪಳಿಸಿದ್ದಾರೆ.
ಪ್ರತಿ ವರ್ಷ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ನೆನಪಲ್ಲಿ ಶ್ರೀನಿವಾಸಪುರದಲ್ಲಿ ಹಬ್ಬ ಕಾರ್ಯಕ್ರಮ ಮಾಡಲಾಗುತ್ತದೆ. ಈ ವೇಳೆ ಊರ ಜನರೆಲ್ಲಾ ಹುತಾತ್ಮ ಯೋಧನಿಗೆ ಗೌವರ ಸಲ್ಲಿಸುತ್ತಾರೆ.