- ನಾಳೆ ಶಾಂತಿ ಹೋಮ
ಬೆಂಗಳೂರು: ಗವಿಗಂಗಾಧರನಿಗೆ (Gavi Gangadhareshwara Temple) ಸೂರ್ಯ ಪೂಜೆ ಆಗಿದೆ. ಮೋಡವಾಗಿದ್ದರಿಂದ ಸೂರ್ಯ ಪೂಜೆ ನೋಡಲು ಆಗಿಲ್ಲ ಎಂದು ಗವಿಗಂಗಾಧರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.
ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿಲ್ಲ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಈ ವೇಳೆ, ಓಂಕಾರ ತತ್ವದಲ್ಲಿ ಬಹಳ ವಿಶೇಷವಿದೆ. ಉತ್ತರಾಯಣ ಪ್ರವೇಶಿಸೋ ಸೂರ್ಯ, ಭಗವಂತನನ್ನ ಸ್ಪರ್ಶಿಸುತ್ತಾನೆ. ಖಂಡಿತವಾಗಿಯೂ ಸೂರ್ಯ ಬಂದು ಪೂಜೆ ಆಗಿದೆ. ಎಷ್ಟು ಹೊತ್ತು ನಿಂತಿದ್ದ ಎಂದು ಹೇಳಲು ಆಗಲ್ಲ ಎಂದಿದ್ದಾರೆ.
ಈ ವರ್ಷದ ಭವಿಷ್ಯ ಹೇಳಲು ಆಗಲ್ಲ. ಮಧ್ಯಾಹ್ನ 2 ಗಂಟೆವರೆಗೂ ಬೆಳಕಿತ್ತು. ಜಲದ ತೊಂದರೆಗಳು, ಸಂಕಷ್ಟಗಳು ಆಗುತ್ತವೆ. ಜನರಿಗೆ ಯಾವ ರೀತಿಯ ತೊಂದರೆ ಆಗಲ್ಲ. ಸ್ಪರ್ಶಿಸದೇ ಇದ್ದಿದ್ದಕ್ಕೆ ನಾಳೆ ಶಾಂತಿ ಮಾಡುತ್ತೇವೆ ಎಂದಿದ್ದಾರೆ.