ಬೆಂಗಳೂರು: ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾರಪ್ಪನಪಾಳ್ಯದಲ್ಲಿ ಯೋಧನಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ಜೈ ಜವಾನ್ ಜೈ ಕಿಸಾನ್ ಎಂಬ ಹೇಳಿಕೆಗೆ ನಿವೃತ್ತ ಯೋಧ ಎಂ.ಎ ವೆಂಕಟೇಶರಿಗೆ ಊರಿನ ಗ್ರಾಮಸ್ಥರು ಅದ್ಧೂರಿ ಸನ್ಮಾನ ನಡೆಸಿದರು.
20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್ ಅವರು ಹುಟ್ಟಿನಿಂದಲೂ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪ್ರೌಢ ಶಿಕ್ಷಣದವರೆಗೆ ಗ್ರಾಮೀಣ ಪ್ರದೇಶವಾದ ಮಾರಪ್ಪನ ಪಾಳ್ಯಗ್ರಾಮದಲ್ಲಿ ಮುಗಿಸಿ, ನಂತರ ಸೇನೆಗೆ ಸೇರಿದ್ದರು.
ವೆಂಕಟೇಶ್ ಅವರು ಸುಮಾರು 20 ವರ್ಷ ವಿವಿಧ ಪ್ರದೇಶಗಳಾದ ಪಂಜಾಬ್, ಅಸ್ಸಾಂ, ಜಮ್ಮು- ಕಾಶ್ಮೀರ ಇನ್ನೀತರಡೆ ಸೇವೆ ಸಲ್ಲಿಸಿದ ನಂತರ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದರು. ವೆಂಕಟೇಶ್ ಅವರಿಗೆ ಅದ್ಧೂರಿ ಸ್ವಾಗತದ ಮೂಲಕ ಎರಡು ಕಿಲೋಮೀಟರ್ ತೆರೆದ ಜೀಪಿನಲ್ಲಿ ನಿವೃತ್ತಿ ನಂತರ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.
ಗ್ರಾಮದ ದಾರಿಯುದ್ಧಕ್ಕೂ ರಾಷ್ಟ್ರೀಯ ಭಾವೈಕ್ಯತೆ ಗೀತೆಗಳನ್ನು ಹಾಕಿಕೊಂಡು, ಹೂವಿನ ಮೂಲಕ ಪುಷ್ಪಾರ್ಚನೆ ಮಾಡಿ ಯೋಧನಿಗೆ ಸ್ವಾಗತಿಸಲಾಯಿತು. ಊರಿನಲ್ಲಿ ಬೃಹತ್ ಆದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ದೇಶ ಕಾಯುವ ಯೋಧನಿಗೆ, ಅದ್ಧೂರಿ ಸ್ವಾಗತವನ್ನು ಕಡಗ ಮತ್ತು ಶಾಲು ಹೊದಿಸಿ ಭವ್ಯ ಸ್ವಾಗತ ನೀಡಲಾಯಿತು.