ಜೀವಂತವಾಗಿದೆ ಮೌಢ್ಯ ಆಚರಣೆ- ಹಾಲಿ, ಮಾಜಿ ಶಾಸಕರಿಂದಲೇ ಮೌಢ್ಯತೆಗೆ ಚಾಲನೆ

Public TV
1 Min Read
Sidi Utsava 1

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಸಿಡಿ ಉತ್ಸವದ ಮೌಢ್ಯತೆ ಇನ್ನು ಜೀವಂತವಾಗಿದೆ. ಈ ಆಚರಣೆಗೆ ಹಾಲಿ ಮತ್ತು ಮಾಜಿ ಶಾಸಕರು ಚಾಲನೆ ನೀಡಿದ್ದಾರೆ.

Sidi Utsava 3

ಕೆಂಚಿಕೊಪ್ಪ ಗ್ರಾಮದಲ್ಲಿ 10 ವರ್ಷಗಳ ಬಳಿಕ ಮಾಯಮ್ಮ ಹಾಗೂ ಗುಳ್ಳಮ್ಮ ದೇವಿಯ ಜಾತ್ರೆಯನ್ನು ಆಚರಿಸಲಾಗುತ್ತಿತ್ತು. ಈ ಜಾತ್ರೆಯಲ್ಲಿ ನಿಷೇಧಿತ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ಉತ್ಸವಕ್ಕಾಗಿ ಎರಡು ಬಂಡಿಗಳನ್ನು ಸಿದ್ಧಪಡಿಸಲಾಗುತ್ತದೆ. ಒಂದು ರೈತರದ್ದು ಮತ್ತೊಂದು ಗೌಡರದ್ದು. ಈ ಎರಡು ಬಂಡಿಗೆ ದಲಿತ ಮಹಿಳೆಯರಿಬ್ಬರನ್ನು ಕಟ್ಟಲಾಗುತ್ತದೆ. ಹೀಗೆ ಕಟ್ಟಿದ ಬಳಿಕ ಮಹಿಳೆಯರನ್ನು ಮೇಲಕ್ಕೆ ಏರಿಸಿ ಸುತ್ತಿಸಲಾಗುತ್ತದೆ. ಒಂದು ಬಂಡಿಗೆ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಇನ್ನೊಂದು ಬಂಡಿಗೆ ಕಾಂಗ್ರೆಸ್ ಮಾಜಿ ಶಾಸಕ ಡಿ.ಜಿ.ಶಾಂತನಗೌಡರ ಚಾಲನೆ ನೀಡಿದರು.

Sidi Utsava 2

ಇಂತಹ ಅನಿಷ್ಠ ಪದ್ಧತಿಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದರೂ, ಇಬ್ಬರು ನಾಯಕರು ಸಿಡಿ ಉತ್ಸವಕ್ಕೆ ಚಾಲನೆ ನೀಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *