ತುಮಕೂರು: ನಮ್ಮ ಪರಮಪೂಜ್ಯರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಬಲವಂತವಾಗಿ ಕೇಶಮುಂಡನಕ್ಕೆ ನಾವು ಯಾರಿಗೂ ಹೇಳಿಲ್ಲ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಸಿದ್ದಗಂಗಾ ಮಠದಲ್ಲಿ 8 ಸಾವಿರ ಮಕ್ಕಳ ಸಾಮೂಹಿಕ ಕೇಶ ಮುಂಡನ ಮೂರ್ಖತನ ಎಂದ ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ವರ್ಷದಂತೆ ಸವಿತಾ ಸಮಾಜದವರು ಮಕ್ಕಳಿಗೆ ಕಟಿಂಗ್ ಮಾಡ್ತಾರೆ. ಮಾತೆ ಮಹಾದೇವಿ ದೊಡ್ಡವರು. ತಿಳಿದವರು ಹೇರ್ ಕಟಿಂಗ್ ಮಾಡುವುದನ್ನು ಕೇಶಮುಂಡನ ಅಂತ ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಹೇಳಿದರು.
ನಮ್ಮ ಪರಮಪೂಜ್ಯರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ. ಹಿಂದೂ ಮುಸಲ್ಮಾನ್, ಕ್ರಿಶ್ಚಿಯನ್ ಎಲ್ಲರು ಅವರನ್ನು ಪ್ರೀತಿಸುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸವಿತಾ ಸಮಾಜದ ಬಂಧುಗಳು ಶಿಬಿರವನ್ನು ಆಯೋಜಿಸಿ ನಮ್ಮ ಮಕ್ಕಳಿಗೆ ಕಟಿಂಗ್ ಮಾಡುತ್ತಾರೆ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ವರ್ಷ ಇದು ಹೊಸದೆನಲ್ಲ ಎಂದು ತಿಳಿಸಿದರು.
ಕೇಶಮುಂಡನ ಅಲ್ಲ. ಪ್ರತಿ ವರ್ಷ ಸವಿತಾ ಸಮಾಜದವರು ಶಿಬಿರವನ್ನು ಆಯೋಜಿಸಿ ತಲೆ ಕೂದಲನ್ನು ಕತ್ತರಿಸುತ್ತಾರೆ. ಬಲವಂತವಾಗಿ ಯಾರ ತಲೆ ಕೂದಲನ್ನು ಕತ್ತರಿಸುವುದಿಲ್ಲ. ಸ್ವ ಇಚ್ಛೆಯಿಂದ ಮಕ್ಕಳೇ ತಲೆ ಕೂದಲನ್ನು ಕತ್ತರಿಸಿಕೊಳ್ಳುತ್ತಾರೆ ಎಂದು ಹೇಳಿದರು.
https://www.youtube.com/watch?v=thcpuuazfB8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv