ಮೈಸೂರು: ತಮ್ಮ ಕಷ್ಟಕ್ಕೆ ನಟ ಶಿವಣ್ಣ ಸಹೋದರರು ಸ್ಪಂಧಿಸುತ್ತಿಲ್ಲ ಎಂದ ನಟಿ ವಿಜಯಲಕ್ಷ್ಮಿ ಬೇಡಿಕೆ ವಿಚಾರದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ನಟ ಶಿವಕುಮಾರ್, “ನಾನು ವಿಜಯಲಕ್ಷ್ಮಿ ಒಬ್ಬರಿಗೇ ಸಹಾಯ ಮಾಡುತ್ತಾ ಕೂರಲು ಸಾಧ್ಯವಿಲ್ಲ. ಏಕೆಂದರೆ ನಾನು ಎಲ್ಲರಿಗೂ ಸಹಾಯ ಮಾಡುತ್ತಿರುತ್ತೇನೆ. ಒಂದು ಕೈಯಲ್ಲಿ ಮಾಡಿದ ಸಹಾಯ ಮತ್ತೊಂದು ಕೈಗೆ ಗೊತ್ತಾಗದ ರೀತಿ ಇರಬೇಕು. ಅವರಿಗೆ ಸಹಾಯ ಮಾಡೋ ಅನಿವಾರ್ಯತೆ ಇಲ್ಲ. ಅವರ ಮನಸ್ಸಿಗೆ ಏನೇನು ಬರುತ್ತೋ ಅವರು ಮಾತಾಡಲಿ. ಅವರು ಕೇಳಿರುವುದಲ್ಲಿ ನ್ಯಾಯ ಇದೆಯೋ ಇಲ್ಲವೋ ನೋಡಬೇಕು. ನಾವು ಸರಿನೋ ಅವರು ಸರಿನೋ ದೇವರೇ ನೋಡಬೇಕು” ಎಂದರು.
ಬಳಿಕ ಮಾತನಡಿದ ಅವರು ಎಲ್ಲರಿಗೂ ಕಷ್ಟ ಬರುತ್ತೆ. ಎಲ್ಲಾ ಇದ್ದು ಬೇಡೋದು ಸರಿಯಲ್ಲ. ಮೊದಲು ಅವರೇ ತಮ್ಮ ಸಮಸ್ಯೆಯಿಂದ ಹೊರ ಬರಲು ಪ್ರಯತ್ನಿಸಬೇಕು, ಅವರೇ ಮನುಷ್ಯ. ಅನಿವಾರ್ಯವಾಗಿ ಬೇಡಿದಾಗ ಕೆಲವರಿಗೆ ಕೊಡಬೇಕಾಗುತ್ತೆ. ಚಾಮುಂಡಿ ಬೆಟ್ಟದಲ್ಲಿ ಕುಂಟನಿಗೂ ನಾನು 2 ಸಾವಿರ ರೂ. ಸಹಾಯ ಮಾಡಿದೆ. ಎಷ್ಟೋ ಹೆಣ್ಣುಮಕ್ಕಳು ಗಾರ್ಮೆಂಟ್ಸ್ ನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಅವರನ್ನು ನೋಡಿದಾಗ ಹೆಮ್ಮ ಅನ್ನಿಸುತ್ತೆ, ಕೈ ಮುಗಿಯಬೇಕು ಅನ್ನಿಸುತ್ತೆ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ವಿಜಯಲಕ್ಷ್ಮಿ ಹೇಳಿದ್ದೇನು?
ಸುದೀಪ್ ಸರ್ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಸಹಾಯ ಮಾಡುತ್ತಿದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರು ಇರುತ್ತಿದ್ದರೆ ನಾನು ಇಷ್ಟೊಂದು ನೋವು ಅನುಭವಿಸಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದರು. ಅಲ್ಲದೆ ಸುದೀಪ್ ಸರ್ ಬಿಟ್ಟರೆ ಶಿವಣ್ಣ, ರಾಘಣ್ಣ, ಪುನೀತ್, ಯಶ್, ದರ್ಶನ್ ತುಂಬಾ ಜನರು ಇದ್ದಾರೆ. ಆದರೆ ಯಾರು ನನ್ನ ಬಳಿ ಮಾತನಾಡುತ್ತಿಲ್ಲ ಎಂದು ವಿಡಿಯೋ ಮಾಡುವ ಮೂಲಕ ಹೇಳಿಕೊಂಡಿದ್ದರು.