ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ (Kannappa) ಚಿತ್ರ ಜೂನ್ 27ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ಗೆ ಸಜ್ಜಾಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ಮೋಹನ್ ಬಾಬು, ವಿಷ್ಣು ಮಂಚು ಬೆಂಗಳೂರಿಗೆ ಆಗಮಿಸಿದ್ದು, ಶಿವಣ್ಣ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಕ್ಷಮೆ ಕೇಳದ ಕಮಲ್ ಹಾಸನ್ಗೆ ಬ್ಯಾನ್ ಬಿಸಿ..!
ಸುದ್ದಿಗೋಷ್ಠಿಯಲ್ಲಿ ಶಿವಣ್ಣ (Shivanna) ಮಾತನಾಡಿ, ‘ಕಣ್ಣಪ್ಪ’ ಚಿತ್ರ ಮಾಡಲು ಧೈರ್ಯ ಬೇಕು. ವಿಷ್ಣು ಮಂಚು ಅವರು ಭಕ್ತಿಯಿಂದ ಚಿತ್ರ ಮಾಡಿದ್ದಾರೆ. ಚಿತ್ರದ ಲುಕ್ ಅದ್ಭುತವಾಗಿ ಮೂಡಿ ಬಂದಿದೆ. ವಿಷ್ಣು ಈ ರೀತಿಯ ಸಿನಿಮಾ ಮಾಡಿದ್ದಕ್ಕೆ ಅವರ ಮೇಲಿನ ಗೌರವ ಹೆಚ್ಚಾಯ್ತು ಎಂದರು.
ಮೋಹನ್ ಬಾಬು ಈ ತರ ಸಿನಿಮಾ ಒಪ್ಪಿ ಮಾಡಿದ್ದು ಗ್ರೇಟ್. ಜನ ಈ ತರ ಸಿನಿಮಾ ನೋಡಬೇಕು. ಕಾಳಹಸ್ತಿ ಅಂದರೆ ಏನು ತಿಳಿದುಕೊಳ್ಳಬೇಕು. ನ್ಯೂಜಿಲ್ಯಾಂಡ್ಗೆ ತೆರಳಿ ಶೂಟಿಂಗ್ ಮಾಡಿದ್ದಾರೆ. ನಿರ್ದೇಶಕರು ಆಸಕ್ತಿಯಿಂದ ಸಿನಿಮಾ ಮಾಡಿದ್ದಾರೆ. 100% ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗುತ್ತದೆ ಎಂದಿದ್ದಾರೆ. ಶಿವನ ಲೀಲೆ ಯಾವಾಗಲೂ ಕಾಪಾಡುತ್ತದೆ ಎಂದು ಚಿತ್ರತಂಡಕ್ಕೆ ನಟ ಭರವಸೆ ತುಂಬಿದರು.
View this post on Instagram
ನಾನು ‘ಕಣ್ಣಪ್ಪ’ ಚಿತ್ರದಲ್ಲಿ ಶಿವನ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಡೇಟ್ ಹೊಂದಾಣಿಕೆ ಆಗದ ಕಾರಣ ನಟಿಸಲು ಆಗಲಿಲ್ಲ. ಸಂಭಾವನೆ ಕೊಡಲಿಲ್ಲ ಅಂದ್ರು ನಿಮ್ಮೊಂದಿಗೆ ನಟಿಸುತ್ತೇನೆ. ನಿಮ್ಮ ಜೊತೆ ನಟಿಸೋದೇ ಒಂದು ಖುಷಿ, ಅದಕ್ಕೆ ಸಂಭಾವನೆ ಬೇಕಿಲ್ಲ. ವಿಲನ್ ಆಗಿ ನಟಿಸಲ್ಲ, ಅದರ ಬದಲು ಒಂದೊಳ್ಳೆಯ ಪಾತ್ರ ಮಾಡೋಣ ಮೋಹನ್ ಅಂಕಲ್ ಎಂದರು ಶಿವಣ್ಣ. ಅವರ ಮಾತಿಗೆ ಮೋಹನ್ ಬಾಬು ಸಮ್ಮತಿ ಸೂಚಿಸಿದರು. ಅಲ್ಲದೇ ಈ ಚಿತ್ರವನ್ನು ಮೊದಲ ದಿನವೇ ನೋಡೋದಾಗಿ ಹೇಳಿದರು.
View this post on Instagram
ಈ ವೇಳೆ, ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಶಿವಣ್ಣ ಸ್ಮರಿಸಿ, ಇದರಲ್ಲಿ ನಟಿಸಲು ನನಗೆ ಭಯವಿತ್ತು. ಏಕೆಂದರೆ ಅಪ್ಪಾಜಿ ನಟಿಸಿದ ‘ಬೇಡರ ಕಣ್ಣಪ್ಪ’ ಸೂಪರ್ ಹಿಟ್ ಆಗಿತ್ತು. ಹೀಗಾಗಿ ನಾನು ಆ ಪಾತ್ರದಲ್ಲಿ ನಟಿಸಲ್ಲ ಎಂದಾಗ, ಅಮ್ಮ ಇದು ನನ್ನ ಆಸೆ ಈಡೇರಿಸು ಅಂದಿದ್ರು. ಅದರಂತೆ ಸಿನಿಮಾ ಮಾಡಿದೆ. ಅದು ಸೂಪರ್ ಹಿಟ್ ಆಯ್ತು ಎಂದರು.
View this post on Instagram
ಅಂದಹಾಗೆ, ಈ ಸಿನಿಮಾದಲ್ಲಿ ವಿಷ್ಣು ಮಂಚು ಜೊತೆ ಪ್ರಭಾಸ್, ‘ಮಗಧೀರ’ ನಟಿ ಕಾಜಲ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಜೂನ್ 27ಕ್ಕೆ ಚಿತ್ರ ರಿಲೀಸ್ ಆಗಲಿದೆ.