ಹಾಸನ: ನಗರದ ಕಾರ್ಯಕ್ರಮವೊಂದರಲ್ಲಿ ಕಾಲಮೇಲೆ ಕಾಲು ಹಾಕಿ ಕುಳಿತಿದ್ದ ಯುವಕನ ಮೇಲೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆಯುತ್ತಿದ್ದ ಸಾಲಮೇಳ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡ ಭಾಗವಹಿಸಿದ್ದರು. ಭಾಷಣ ಮಾಡಲು ಎದ್ದು ನಿಂತಾಗ ವೇದಿಕೆ ಮುಂದೆ ಕುಳಿತಿದ್ದ ಯುವಕ ಕಾಲ ಮೇಲೆ ಕಾಲು ಹಾಕಿ ಕುಳಿತಿರುವುದನ್ನು ನೋಡಿದ್ದಾರೆ. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!
ಯುವಕನನ್ನು ನೋಡಿ ಸಿಟ್ಟಾದ ಅವರು, ನೀನು ಕಾಲುಮೇಲೆ ಕಾಲು ಹಾಕಿ ಕುಳಿತರೆ ನನ್ನ ಗೌರವ ಹೋಗುತ್ತಾ? ನನ್ನನ್ನು ಎಂಎಲ್ಎ ಗಿರಿಯಿಂದ ಇಳಿಸಲು ನಿನಗೆ ಆಗುತ್ತಾ? ಕಾಲಮೇಲೆ ಕಾಲು ಅಲ್ಲದಿದ್ದರೆ ಇನ್ನೊಂದಷ್ಟು ದೊಡ್ಡದಾಗಿ ಸಿಂಹಾಸನ ಹಾಕಿಕೊಂಡು ಮೇಲೆ ಕುಳಿತುಕೋ. ಸಭ್ಯತೆ ಇಲ್ಲದೆ ಜನರಿಗೆ ನಾನು ಏನು ಹೇಳಲು ಆಗಲ್ಲ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಮೆದುಳಿಗೆ ನಾಲಿಗೆಗೆ ಕನೆಕ್ಷನ್ ಇಲ್ಲ: ಶಿವರಾಜ್ ತಂಗಡಗಿ
ಯುವಕನು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಶಾಸಕರ ಮಾತು ಕೇಳಿ ಕಾಲನ್ನು ಕೆಳಗಡೆ ಇಳಿಸಿದ್ದಾನೆ.