ಹಾಸನ: ನಾನು ಕಾಂಗ್ರೆಸ್ಗೆ ಹೋಗುತ್ತೇನೆ ಎನ್ನುವವರಿಗೆ ತಲೆ ಕೆಟ್ಟಿದೆ ಎಂದು ಶಾಸಕ ಶಿವಲಿಂಗೇಗೌಡ ಹಾಸನದಲ್ಲಿ ಆಕ್ರೋಷ ಹೊರಹಾಕಿದ್ದಾರೆ.
ಮಾಧ್ಯಮದವರೊಂದಿಗೆ ಹಾಸನಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧ ಊಹಾಪೋಹ ಹಬ್ಬಿಸುತ್ತಿರುವ ರಾಜಕೀಯ ನಾಯಕರ ವಿರುದ್ಧ ಕಿಡಿಕಾರಿದ ಶಾಸಕ ಶಿವಲಿಂಗೇಗೌಡ, ಆಡಳಿತ ಒಂದೂವರೆ ವರ್ಷ ಇದೆ. ಈ ದೇಶದ ರಾಜಕೀಯ ಪರಿಸ್ಥಿತಿ ಯಾರಾದರೂ ಚರ್ಚೆ ಮಾಡಿದ್ದಾರಾ? ಅದು ಬಿಟ್ಟು ಬೇರೆ ಚರ್ಚೆ ಆಗುತ್ತಿದೆ. ಯಾರ್ಯಾರಿಗೆ ತಲೆ ಕೆಟ್ಟಿದೆ ಯಾರಿಗೆ ಗೊತ್ತು, ಆದರೆ ಹೇಳಿಕೆ ಕೊಡುವವರಿಗೆಲ್ಲಾ ತಲೆ ಕೆಟ್ಟಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸ್ನಲ್ಲಿ ನಿದ್ದೆ ಮಾಡುವ ಅಭ್ಯಾಸ ಇದೆಯೇ?- ಈ ಸುದ್ದಿ ಓದಿ
ಈ ಹಿಂದೆ ಬಸವರಾಜ ಬೊಮ್ಮಯಿ ಅವರು ಕಣಕಟ್ಟೆ ಹೋಬಳಿಯ ಆರು ಕೆರೆಗೆ ನೀರು ಕೊಟ್ಟರು. ಅವರಿಗೆ ಚಿನ್ನದ ಉಂಗುರ ತೊಡಿಸಿದ್ದೆ. ಅದಕ್ಕೆ ಬಿಜೆಪಿಗೆ ಹೋಗುತ್ತೇನೆ ಅಂಥಾ ಅರ್ಥನಾ? ಕೆಲಸ ಮಾಡಿಕೊಟ್ಟವರಿಗೆ ಕೃತಜ್ಞತೆಯನ್ನು ಯಾವ್ಯಾವುದೋ ರೂಪದಲ್ಲಿ ಸಲ್ಲಿಸುತ್ತೇವೆ. ಅದೇ ರೀತಿ ಸದನದಲ್ಲಿ ಚರ್ಚೆ ಆದಾಗ ಸಿದ್ದರಾಮಯ್ಯ ಅವರು ಮಾಡಿಕೊಟ್ಟ ಕೆಲಸ ಸ್ಮರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹುಚ್ಚುಗಣಿ ದೇವಾಲಯ ಧ್ವಂಸ, ಅಧಿಕಾರಿಗಳಿಂದ ತಪ್ಪಾಗಿದೆ: ಜೊಲ್ಲೆ
ನಾನು ಪಕ್ಷ ಬಿಡುವ ಸಂದರ್ಭ ಒದಗಿ ಬಂದಿಲ್ಲ. ನಾನು ಜೆಡಿಎಸ್ ನಿಂದ ಗೆದ್ದು, ಬೇರೆ ಪಕ್ಷಕ್ಕೆ ಹೋಗೋಕೆ ಆಗುತ್ತಾ? ದಯಮಾಡಿ ಇದನ್ನೆಲ್ಲಾ ಹುಟ್ಟು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು ನಾಳೆ ದೇವೇಗೌಡರ ಜೊತೆ ಬಿಡದಿಯಲ್ಲಿ ಸಭೆ ಇದೆ. ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಸಭೆಗೆ ಯಾರ್ಯಾರು ಬರುತ್ತಾರೆ ಗೊತ್ತಿಲ್ಲ. ನನ್ನನ್ನು ಕರೆದಿದ್ದಾರೆ ನಾನು ಹೋಗುತ್ತಿದ್ದೇನೆ ಎಂದು ತಳಿಸಿದ್ದಾರೆ.